ಮೈಸೂರು ವಿಭಜನೆ ಬಗ್ಗೆ ಮಾತನಾಡಲು ವಿಶ್ವನಾಥ್ ಯಾರು?
Team Udayavani, Oct 15, 2019, 4:28 PM IST
ಬೆಂಗಳೂರು : ಮೈಸೂರು ವಿಭಜನೆ ಬಗ್ಗೆ ಮಾತನಾಡಲು ವಿಶ್ವನಾಥ್ ಯಾರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವನಾಥ್ ವಿರುದ್ಧ ಗುಡುಗಿದ್ದಾರೆ.
ಮೈಸೂರು ವಿಭಜನೆಯ ವಿಷಯ ಕುರಿತಾಗಿ ಮಾತನಾಡಿದ ವಿಶ್ವನಾಥ್ ಮಾತಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಮೈಸೂರು ವಿಭಜನೆಗೆ ನನ್ನ ಪ್ರಬಲ ವಿರೋಧ ಇದೆ ಇದೊಂದು ರಾಜಕೀಯ ಗಿಮಿಕ್ ನನಗಿಂತ ಮುಂಚಿನಿಂದಲೂ ರಾಜಕಾರಣದಲ್ಲಿ ಇದ್ದವರು ವಿಶ್ವನಾಥ್.
ಮೈಸೂರು – ಚಾಮರಾಜನಗರ ಪ್ರತ್ಯೇಕ ಆದಾಗ ಮಾತಾಡದ ವಿಶ್ವನಾಥ್ ಈಗ ಚುನಾವಣಾ ಹತ್ತಿರ ಬಂದಿರೋದ್ರಿಂದ ಇದೊಂದು ಗಿಮಿಕ್ ಅಷ್ಟೇ ಎಂದರು.
ಬೆಳಗಾವಿ ವಿಭಜನೆ ಬಗ್ಗೆ ಈ ಹಿಂದೆಯೇ ಪ್ರಸ್ತಾಪ ಇತ್ತು ಆದರೆ ಅದಕ್ಕೆ ಎಲ್ಲರ ಒಪ್ಪಿಗೆ ಆಗ ಸಿಗಲಿಲ್ಲ.