ಮುಕ್ತಾಯದ ಹಂತದಲ್ಲಿ ಮಳೆಗಾಲದ ಯಕ್ಷಗಾನ ತಿರುಗಾಟ


Team Udayavani, Oct 18, 2019, 5:53 AM IST

1610BAS2

ವಿಶೇಷ ವರದಿಬಸ್ರೂರು: ಪ್ರತಿ ಬಾರಿಯಂತೆ ಈ ಬಾರಿಯೂ ಬಹುತೇಕ ಯಕ್ಷಗಾನ ಮೇಳಗಳು ಮಳೆಗಾಲದ ತಿರುಗಾಟ ನಡೆಸಿಯಾಗಿದೆ. ಮೇ ತಿಂಗಳಲ್ಲಿ ತಿರುಗಾಟದ ಕೊನೆಯ ದೇವರ ಸೇವೆಯಾಟದ ಅನಂತರ ವೃತ್ತಿ ಮೇಳಗಳಿಗೆ, ಹರಕೆಯಾಟದ ಮೇಳಗಳಿಗೆ ದೀರ್ಘ‌ಕಾಲ ರಜೆಯಿರುತ್ತದೆ,ಈ ರಜಾಕಾಲ ಅಂದರೆ ಜುಲೆ„ ತಿಂಗಳಲ್ಲೆ ಮಳೆಗಾಲದ ತಿರುಗಾಟ ಆರಂಭಗೊಳ್ಳುತ್ತದೆ.

ಬಡಗುತಿಟ್ಟಿನ ಶ್ರೀ ಸಾಲಿಗ್ರಾಮ ಹಾಗೂ ಶ್ರೀ ಪೆರ್ಡೂರು ಮೇಳಗಳು ಮಾತ್ರ ಮೇಳದ ವತಿಯಿಂದಲೇ ದೂರದ ಬೆಂಗಳೂರು, ಮುಂಬಯಿ, ಥಾಣೆ ಮುಂತಾದ ನಗರ ಪ್ರದೇಶಗಳಲ್ಲಿ ನೆಲೆಸಿರುವ ಉಡುಪಿ, ದ.ಕ. ಮತ್ತು ಉ.ಕ.ದ ಜನರೇ ಈ ಮಳೆಗಾಲದ ಪ್ರೇಕ್ಷಕರೂ ಹೌದು, ಸಂಘಟಕರೂ ಹೌದು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮೇಳಗಳ ಸ್ಟಾರ್‌ ಕಲಾವಿದರಿಗೆ ಆದ್ಯತೆಯಿರುತ್ತದೆ. ಹೆಚ್ಚಾಗಿ ಜನಪ್ರಿಯರಾದ ಹಿಮ್ಮೇಳ-ಮುಮ್ಮೇಳದ ಕಲಾವಿದರೇ ಇಲ್ಲಿ ವಿಜೃಂಭಿಸುತ್ತಾರೆ. ಮಳೆಗಾಲದ ತಿರುಗಾಟದಲ್ಲೂ ಅತಿಥಿ ಕಲಾವಿದರಾಗಿ ವಿಜೃಂಭಿಸುವ ಕಲಾವಿದರೇ ಸಾಮಾನ್ಯ ಜನಪ್ರಿಯ ಕಲಾವಿದರಿಗಿಂತ ಹೆಚ್ಚು ಹಣ ಸಂಪಾದಿಸುತ್ತಾರೆ

ಈ ಮಳೆಗಾಲದ ತಿರುಗಾಟದಲ್ಲೆ ಮುಂದಿನ ತಿರುಗಾಟದ ಹೊಸ ಪ್ರಸಂಗಗಳನ್ನು ಪ್ರಯೋಗಿಸಿ ನೋಡುವ ಕ್ರಮವೂ ಇದೆ. ಅಲ್ಲಿ ಯಶಸ್ವಿಯಾದರೆ ಮುಂದಿನ ತಿರುಗಾಟದಲ್ಲಿ ಆಡುತ್ತಾರೆ. ಈ ಕಾಲದಲ್ಲಿ ಕಲಾವಿದ ಮೇಳಾಂತರವೂ ನಡೆಯುವುದಿದೆ. ಟೆಂಟ್‌ ಮೇಳಗಳ ಪೈಕಿ ಶ್ರೀ ಸಾಲಿಗ್ರಾಮ ಹಾಗೂ ಶ್ರೀ ಪೆರ್ಡೂರು ಮೇಳಗಳನ್ನು ಬಿಟ್ಟರೆ ಶ್ರೀ ಜಲವಳ್ಳಿ ಮೇಳದ ತಿರುಗಾಟ ಮುಂದಿನ ತಿರುಗಾಟದಲ್ಲಿ ಇರುವುದಿಲ್ಲ. ಕಾರಣ ತಿರುಗಾಟದಲ್ಲಾದ ನಷ್ಟ! ಅಂದರೆ ಬಡಗಿನಲ್ಲಿ ಎರಡೇ ಡೇರೆ ಮೇಳಗಳಿದ್ದರೆ ಬಯಲಾಟದ ಮೇಳಗಳಾಗಿ ಹರಕೆಯಾಟದ ಶ್ರೀ ಮಂದಾರ್ತಿ, ಶ್ರೀ ಮಾರಣಕಟ್ಟೆ, ಶ್ರೀ ಕಮಲಶಿಲೆ, ಶ್ರೀ ಅಮೃತೇಶ್ವರಿ, ಶ್ರೀ ಸೌಕೂರು, ಶ್ರೀ ಸಿಗಂದೂರು, ಶ್ರೀ ಮಡಾಮಕ್ಕಿ, ಶ್ರೀ ಹಿರಿಯಡಕ, ಶ್ರೀ ಗೋಳಿಗರಡಿ ಮಂತಾದ ಮೇಳಗಳು ಹರಕೆಯಾಟ ಮತ್ತು ಕಟ್ಟು ಕಟ್ಟಲೆಯಾಟದಲ್ಲೆ ತಿರುಗಾಟ ಮುಗಿಸುತ್ತವೆ. ಈ ಎಲ್ಲ ಮೇಳಗಳು ಹೊಸ ಪ್ರಸಂಗಗಳಂತೆ ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶಿಸುತ್ತವೆ.

ಶ್ರೀ ಮಂದಾರ್ತಿ, ಶ್ರೀ ಮಾರಣಕಟ್ಟೆ, ಶ್ರೀ ಕಮಲಶಿಲೆ, ಶ್ರೀ ಅಮೃತೇಶ್ವರಿ ಮೇಳಗಳು ಪೌರಾಣಿಕ ಪ್ರಸಂಗಗಳನ್ನಷ್ಟೆ ಪ್ರದರ್ಶಿಸಿ ಸೆ„ ಎನಿಸಿಕೊಳ್ಳುತ್ತವೆ ಎನ್ನುವುದು ಗಮನಾರ್ಹ. ಶ್ರೀ ಮಂದಾರ್ತಿಯ ಎರಡು ಮೇಳಗಳು ಮಳೆಗಾಲದ ಪ್ರತಿದಿನವೂ ಶ್ರೀ ಕ್ಷೇತ್ರದಲ್ಲೇ ಪ್ರದರ್ಶನ ನೀಡುವ ಒತ್ತಡದಲ್ಲಿವೆ. ಉಳಿದಂತೆ ಮುಂದಿನ ಯಕ್ಷಗಾನ ಮೇಳಗಳ ತಿರುಗಾಟ ಹೇಗೆ ಎಂದು ಕಾದು ನೋಡುವ ಕಾಲ ಪ್ರೇಕ್ಷಕನದ್ದಾಗಿದೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.