ರುದ್ರ ಪ್ರಯಾಗದಲ್ಲಿ ಕುಸಿದ ಗುಡ್ಡ: ಮೂವರಿಗೆ ಗಾಯ. ಇಬ್ಬರು ನಾಪತ್ತೆ
Team Udayavani, Oct 20, 2019, 9:12 AM IST
ರುದ್ರ ಪ್ರಯಾಗ: ಉತ್ತರಾಖಂಡ ರಾಜ್ಯದ ಕೇದಾರ್ ನಾಥ್ ನಲ್ಲಿ ಗುಡ್ಡ ಕುಸಿದಿದ್ದು, ಮೂವರು ಗಾಯಗೊಂಡ ಘಟನೆ ನಡೆದಿದೆ.
ರುದ್ರಪ್ರಯಾಗ ಜಿಲ್ಲೆಯ ಚಂದಿಕಧಾರ್ ನಲ್ಲಿ ಈ ಗುಡ್ಡ ಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ.
ಎಸ್ ಡಿಆರ್ ಎಫ್ ತಂಡ ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.