ಸಮುದಾಯ ಭವನ ಕಾಮಗಾರಿಗೆ ಚಾಲನೆ
Team Udayavani, Oct 20, 2019, 4:09 PM IST
ದೋಟಿಹಾಳ: ಗ್ರಾಮದ ದೇವಲ ಮಹರ್ಷಿ ಸಾಂಸ್ಕೃತಿಕ ಸಮುದಾಯ ಭವನದ ಕಟ್ಟಡದ ಮುಂದುವರಿದ ಕಾಮಗಾರಿಗೆ ಶನಿವಾರ ಸಂಸದ ಕರಡಿ ಸಂಗಣ್ಣ ಅವರು ಭೂಮಿಪೂಜೆ ಮಾಡಿ ಚಾಲನೆ ನೀಡಿದರು.
ಈ ವೇಳೆ ಗ್ರಾಮದ ದೇವಾಂಗ ಸಮಾಜದ ಗುರು-ಹಿರಿಯರು ನಮ್ಮ ಸಮಾಜ ಬಡಕುಟುಂಬಗಳ ಸಮಾಜವಾಗಿದೆ. ನೇಕಾರಿಕೆ ನಮ್ಮ ಕಸುಬುವಾಗಿದೆ. ಸಮಾಜದ ಸಮುದಾಯ ಭವನದ ಕಟ್ಟಡದ ಅರ್ಧಕ್ಕೆ ನಿಂತಿದೆ. ಸಮಾಜದವರು ಮದುವೆ ಸಮಾರಂಭ ಮಾಡಲು ತೊಂದರೆ ಆಗುತ್ತಿದೆ. ಹೀಗಾಗಿ ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಹಣ ನೀಡಬೇಕು ಎಂದು ಸಮಾಜದ ಗುರು-ಹಿರಿಯರು ಸಂಸದ ಕರಡಿ ಸಂಗಣ್ಣ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿ ಮಾತನಾಡಿದ ಸಂಸದರು, ಈ ಸಮುದಾಯ ಭವನಕ್ಕೆ ಐದು ಲಕ್ಷ ರೂ. ಅನುದಾನ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ಯಾವುದೇ ತೊಂದರೆಗಳಿಂದ ಸದ್ಯ ಮೂರು ಲಕ್ಷ ರೂ. ಹಣ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಣ ನೀಡುತ್ತೇನೆ ಎಂದು ಸಮಾಜದ ಹಿರಿಯರಿಗೆ ಭರವಸೆ ನೀಡಿದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಜಿಪಂ ಸದಸ್ಯರಾದ ಕೆ. ಮಹೇಶ, ವಿಜಯ ನಾಯ್ಕ, ನೇಮಣ್ಣ ಮೆಲಸಕ್ರಿ, ತಾಪಂ ಸದಸ್ಯ ಮಹಾಂತೇಶ ಬಾದವಿ, ವೇದಮೂರ್ತಿ ಶ್ರೀ ವಿವೇಕಾನಂದ ಸ್ವಾಮಿಗಳು, ಸಮಾಜದ ಮುಖಂಡರಾದ ಬಾಳಪ್ಪ ಅರಳಿಕಟ್ಟಿ, ಶಿವಪ್ಪ ಮಾಳಗಿ, ನಾರಾಯಣಪ್ಪ ಕೊಳ್ಳಿ, ರಾಮನಗೌಡ ಬಿಜ್ಜಲ್, ಅಮರೇಗೌಡ ಬಿಜ್ಜಲ್, ಮಲ್ಲಪ್ಪ ಮೆದಿಕೇರಿ, ಮಹೇಶ ಕಾಳಗಿ, ಚನ್ನಪ್ಪ ಸಕ್ರಿ, ಹಿರಣಯ್ಯ ಸಕ್ರಿ, ಮಾರುತಿ ಹುಬ್ಬಳ್ಳಿ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ