ನನಸಾಗದ ಹೈಟೆಕ್‌ ಲೈಬ್ರರಿ ಕನಸು

ಪುಸ್ತಕ ಪ್ರೇಮಿಗಳಿಗೆ ಭಾರಿ ನಿರಾಶೆ ನಗರ ಕೇಂದ್ರ ಗ್ರಂಥಾಲಯ ದುಸ್ಥಿತಿ

Team Udayavani, Oct 24, 2019, 6:56 PM IST

24-October-27

ಬೀದರ: ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ ಮತ್ತು ಅಧಿಕಾರಿಗಳ ನಿಷ್ಕಾಳಜಿತನದಿಂದಾಗಿ ಸಾಂಸ್ಕೃತಿಕ ನಗರ ಬೀದರನಲ್ಲಿ ಹೈಟೆಕ್‌ ನಗರ ಕೇಂದ್ರ ಗ್ರಂಥಾಲಯ (ಡಿಜಿಟಲ್‌) ನಿರ್ಮಾಣದ ಕನಸು ನನಸಾಗಿಯೇ ಉಳಿದಿದೆ. ವರ್ಷಗಳೂ ಉರುಳಿದರೂ ಕಟ್ಟಡಕ್ಕಾಗಿ ನಿವೇಶನ ಅಂತಿಮಗೊಳ್ಳದ ಕಾರಣ ಪುಸ್ತಕ ಪ್ರಿಯರು ಸೌಲಭ್ಯ ವಂಚಿತ ಗ್ರಂಥಾಲಯದಲ್ಲೇ ಓದುವಂತಾಗಿದೆ.

ಜ್ಞಾನಾರ್ಜನೆ ಮೂಲವೇ ಗ್ರಂಥಾಲಯ. ಆದರೆ, ಜಿಲ್ಲಾ ಕೇಂದ್ರವಾಗಿರುವ ಬೀದರನಲ್ಲಿ ಈವರೆಗೆ ಆಧುನಿಕ ತಂತ್ರಜ್ಞಾನವುಳ್ಳ ಒಂದು ಸುಸಜ್ಜಿತ ಗ್ರಂಥಾಲಯ ರೂಪಿಸಲು ಸಾಧ್ಯವಾಗಿಲ್ಲ. ಮೂರ್‍ನಾಲ್ಕು ದಶಕಗಳಷ್ಟು ಹಳೆಯದಾಗಿರುವ, ಪಾಳು ಬಿದ್ದಿರುವ ಕಟ್ಟಡದಲ್ಲಿಯೇ ನಗರದ ಮತ್ತು ಜಿಲ್ಲಾ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಪತ್ರಿಕೆಗಳು, ಪುರವಣಿಗಳ ಜತೆಗೆ ಸಾಹಿತ್ಯ ಸೇರಿದಂತೆ ವಿವಿಧ ಪುಸ್ತಕ ಓದಬೇಕಾದರೆ ವಿದ್ಯಾರ್ಥಿಗಳು, ಓದುಗರು ಅನಿವಾರ್ಯವಾಗಿ ಸೊರಗಿ ಹೋಗಿರುವ ಈ ಗ್ರಂಥಾಲಯಕ್ಕೆ ಹೋಗುವಂಥ ಅನಿವಾರ್ಯತೆ ಇದೆ.

ನಗರದ ಹೃದಯ ಭಾಗವಾಗಿರುವ ಜನವಾಡಾ ರಸ್ತೆಯ ಬಹುಮಹಡಿ ಕಟ್ಟಡದಲ್ಲಿ 1976ರಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ 2009ರಲ್ಲಿ ನಗರ ಕೇಂದ್ರ ಗ್ರಂಥಾಲಯ ಕೇಂದ್ರ ಸ್ಥಾಪಿಸಲಾಗಿದೆ. ಅಂದು ಹೇಗಿದೆಯೋ ಈಗಲೂ ಹಾಗೆಯೇ ಇದೆ. ಸಾಕಷ್ಟು ಅನುದಾನ, ಪುಸ್ತಕಗಳ ನೀಡಲಾಗುತ್ತಿದ್ದರೂ ಅಭಿವೃದ್ಧಿ ಕಾಣುತ್ತಿಲ್ಲ. ಪ್ರತಿ ನಿತ್ಯ ನಗರ ಗ್ರಂಥಾಲಯಕ್ಕೆ 600ಕ್ಕೂ ಜನರು ಭೇಟಿ ಕೊಡುವ ಈ ಗ್ರಂಥಾಲಯ ತೀರಾ ಇಕ್ಕಟ್ಟಾದ ಕಟ್ಟಡವಾಗಿರುವುದರಿಂದ ಓದುಗರಿಗೆ ಕಿರಿಕಿರಿ ತಪ್ಪಿಲ್ಲ. ಲಭ್ಯ ಸ್ಥಳದಲ್ಲೇ ಕಚೇರಿ ಕೋಣೆ ಜತೆಗೆ ಪತ್ರಿಕೆ ಮತ್ತು ಪುಸ್ತಕಗಳ ಓದುವ ಚಿಕ್ಕ ಹಾಲ್‌ಗ‌ಳನ್ನು ನಿರ್ಮಿಸಲಾಗಿದ್ದರಿಂದ ಕುಳಿತು ಓದಲು ಸ್ಥಳಾವಕಾಶದ ಕೊರತೆಯಿದೆ.

ಬೀದರನಲ್ಲಿ ಹೈಟೆಕ್‌ ನಗರ ಕೇಂದ್ರ ಗ್ರಂಥಾಲಯ ನಿರ್ಮಾಣದ ಬೇಡಿಕೆ ಬಹಳ ವರ್ಷಗಳಿಂದ ಇದ್ದರೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆಸಕ್ತಿಯೇ ತೋರಿಸಿಲ್ಲ. ಈ ಹಿಂದೆ ಹೈಟೆಕ್‌ ಕಟ್ಟಡಕ್ಕಾಗಿ ಅಂದಾಜು ಒಂದು ಎಕರೆಯಷ್ಟು ಜಮೀನು ಮಂಜೂರು ಮಾಡಲಾಗಿತ್ತು ಮತ್ತು ಕಟ್ಟಡಕ್ಕೆ ತಗುಲುವ ಅಂದಾಜು 2 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಅಗತ್ಯ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು. ಆದರೆ, ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಬದ್ಧತೆ ಮಾತ್ರ ತೋರಿಸಲಿಲ್ಲ.

ಗ್ರಂಥಾಲಯದಲ್ಲಿ ಸ್ಥಳಾವಕಾಶವಿಲ್ಲದೆ ಪುಸ್ತಕಗಳು ಮೂಟೆಗಳಲ್ಲೇ ಕೊಳೆಯುತ್ತಿವೆ. ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತಮಗೆ ಬೇಕಾದ ಸೃಜನಾಶೀಲ ಲೇಖಕರ ಮತ್ತು ಬೇಡಿಕೆ ಪುಸ್ತಕಗಳು ಸಿಗಬೇಕು. ಆದರೆ, ಕೆಲವೊಮ್ಮೆ ಓದುಗರಿಗೆ ಬೇಕಾದ ಪುಸ್ತಕಗಳಿಲ್ಲ. ಇದ್ದರೂ ಲಭ್ಯವಿರುವುದಿಲ್ಲ. ಶೌಚಾಲಯದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು, ಕುಡಿಯುವ ನೀರನ್ನು ಖರೀದಿಸಿ ತಂದಿಡುವ ಪರಿಸ್ಥಿತಿ ಇದೆ. ದುಸ್ಥಿತಿಯಲ್ಲಿರುವ ಕಟ್ಟಡ ಮತ್ತು ಅವ್ಯವಸ್ಥೆಯಿಂದಾಗಿ ಬರುವ ಸಾರ್ವಜನಿಕರು ಬೇಸತ್ತು ಗ್ರಂಥಾಲಯದಿಂದ
ದೂರಾಗುತ್ತಿದ್ದಾರೆ ಎಂಬ ಕೂಗು ಓದುಗರ ವಲಯದಿಂದಲೇ ಕೇಳಿಬರುತ್ತಿದೆ.

ಇಡೀ ಜಗತ್ತನೇ ಬೆರಳ ತುದಿಯಲ್ಲಿ ನೋಡುವ ಇವತ್ತಿನ ಮಾಹಿತಿ, ತಂತ್ರಜ್ಞಾನ ಅವಿಷ್ಕಾರ ಯುಗದಲ್ಲಿ ಜಿಲ್ಲೆಯ ವಿದ್ಯಾರ್ಥಿ-ಯುವ ಜನತೆಗೆ ಅದರಲ್ಲೂ ಪುಸ್ತಕ ಓದುವ ವಿದ್ಯಾರ್ಥಿ ಸಮೂಹಕ್ಕೆ ಡಿಜಿಟಲ್‌ ಗ್ರಂಥಾಲಯ ಆಶಾಕಿರಣ. ಅಧಿಕಾರಿಗಳು ಬದ್ಧತೆಯಿಂದ ಪ್ರಯತ್ನಿಸಿದ್ದಲ್ಲಿ ಬೀದರನಲ್ಲಿಯೂ ಮೂಲಭೂತ ಸೌಲಭ್ಯಗಳನ್ನು ಒಳಗೊಂಡು ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡು ಡಿಜಿಟಲ್‌ ಲೈಬ್ರರಿ ಆರಂಭಗೊಳ್ಳಬೇಕಾಗಿತ್ತು. ಆದರೆ, ಇತ್ತ
ಆಸಕ್ತಿ ವಹಿಸದಿರುವುದು ಪುಸ್ತಕ ಪ್ರೇಮಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ನಗರ ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸಬೇಕಿದೆ. ಇದಕ್ಕಾಗಿ ಅತ್ಯಾಧುನಿಕ ಕಟ್ಟಡ ನಿರ್ಮಿಸಿ ಹೈಟೆಕ್‌ ಸ್ಪರ್ಷ ನೀಡಬೇಕಿದೆ. ಈ ಮೂಲಕ ಪುಸಕ್ತ ಪ್ರೇಮಿಗಳ ಜ್ಞಾನದ ಹಸಿವು ನೀಗಿಸಬೇಕಿದೆ.

ಟಾಪ್ ನ್ಯೂಸ್

8-uv-fusion

UV Fusion: ಬಾಯಾರಿ ಬರುವ ಬಾನಾಡಿಗಳ ರಕ್ಷಿಸೋಣ

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

UV Fusion: ಬಾಯಾರಿ ಬರುವ ಬಾನಾಡಿಗಳ ರಕ್ಷಿಸೋಣ

ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

7-uv-fusion

Father: ಅಪ್ಪ – ಮರೆಯಲಾಗದ ಬಂಧ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.