ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಲು ಒತ್ತಾಯ
Team Udayavani, Oct 26, 2019, 12:24 PM IST
ಮೂಡಲಗಿ: ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಶುಭೋದಯ ಸ್ವಾಭಿಮಾನಿ ಕನ್ನಡ ಸಂರಕ್ಷಣಾ ವೇದಿಕೆ ಸದಸ್ಯರು ಮೂಡಲಗಿ ಸಾರಿಗೆ ನಿಯಂತ್ರಣಾಧಿ ಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ವೇದಿಕೆ ಅಧ್ಯಕ್ಷ ಸುಭಾಸ ಕಡಾಡಿ ಮಾತನಾಡಿ, ಮೂಡಲಗಿಗೆ ಪ್ರತಿ ದಿನ ಬೆಳಗ್ಗೆ 4ಗಂಟೆಗೆ ಔರಾದದಿಂದ (ಬೀದರ) ಮೂಡಲಗಿ ಮಾರ್ಗವಾಗಿ ಬೆಳಗಾವಿಗೆ ಹೋಗುವ ಬಸ್ ಮೂಡಲಗಿಗೆ ಬರದೆ ಇರುವದರಿಂದ ಮೂಡಲಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಶೀಘ್ರವೇ ಸಾರಿಗೆ ಇಲಾಖೆ ಅಧಿಕಾರಿಗಳು ಇಲ್ಲಿರುವ ಸಮಸ್ಯೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿದಿನ ಹಲವಾರು ಪ್ರಯಾಣಿಕರು ಈ ಬಸನ್ನು ಅವಲಂಭಿಸಿದ್ದಾರೆ. ಮೂಡಲಗಿ ತಾಲೂಕು ಕೇಂದ್ರವಾಗಿದರಿಂದ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲವು ಬಸಗಳು ಗುರ್ಲಾಪುರದಿಂದ ಹೊರಮಾರ್ಗವಾಗಿ ಹೋಗುತ್ತಿವೆ. ಇದರಿಂದ ಪರೀಕ್ಷೆಗೆ ಅಥವಾ ಸಂದರ್ಶನಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ ಎಂದರು. ಈ ಸಂದರ್ಭದಲ್ಲಿ ವೇದಿ ಕೆ ಸದಸ್ಯರಾದ ಶಿವಬಸು ಗಾಡವಿ, ಶಿವು ಪಿರೋಜಿ, ಕೇಶವ ದೇಸಾಯಿ, ಬಾಳಯ್ನಾ ಹಿರೇಮಠ, ರವಿ ನೇಸೂರ, ಶ್ರೀನಿವಾಸ ಗೀರೆನ್ನವರ, ಸಂತ್ರಾಮ ನಾಶಿ, ಶಿವಾನಂದ ಮುಧೋಳ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್