ಶಕಿಬ್‌- ಬುಕ್ಕಿ ವಾಟ್ಸ್‌ಆ್ಯಪ್‌ ಸಂಭಾಷಣೆ ಬಹಿರಂಗ

3 ಬಾರಿ ಬುಕ್ಕಿಯಿಂದ ಬಾಂಗ್ಲಾ ಕ್ರಿಕೆಟಿಗನಿಗೆ ಆಮಿಷ: ವಿವರ ಪ್ರಕಟಿಸಿದ ಐಸಿಸಿ

Team Udayavani, Oct 31, 2019, 6:00 AM IST

shakib-al-hasan

ಢಾಕಾ: ಬುಕ್ಕಿ ದೀಪಕ್‌ ಅಗ‌ರ್ವಾಲ್‌ನಿಂದ ತನಗೆ ಬಂದಿದ್ದ ಫಿಕ್ಸಿಂಗ್‌ ಆಮಿಷವನ್ನು ಮುಚ್ಚಿಟ್ಟು 2 ವರ್ಷ ನಿಷೇಧಕ್ಕೊಳಗಾಗಿರುವ ಬಾಂಗ್ಲಾದೇಶ ಕ್ರಿಕೆಟಿಗ ಶಕಿಬ್‌ ಅಲ್‌ ಹಸನ್‌ ಅವರ ವಾಟ್ಸ್‌ಆ್ಯಪ್‌ ಸಂಭಾಷಣೆಯನ್ನು ಐಸಿಸಿ ಬಹಿರಂಗಪಡಿಸಿದೆ.

ಸಂಭಾಷಣೆಯಲ್ಲೇನಿದೆ?
ಜನವರಿ, 2018: ಶ್ರೀಲಂಕಾ, ಜಿಂಬಾಬ್ವೆ ವಿರುದ್ಧದ ತ್ರಿಕೋನ ಸರಣಿಗೆ ಶಕಿಬ್‌ ಬಾಂಗ್ಲಾ ತಂಡಕ್ಕೆ ಆಯ್ಕೆಯಾಗಿದ್ದರು. ಈ ವೇಳೆ ಅಗರ್ವಾಲ್‌ನಿಂದ ಶಕಿಬ್‌ಗ ವಾಟ್ಸ್‌ಆ್ಯಪ್‌ ಸಂದೇಶ ಬಂದಿತ್ತು. 2018, ಜ.18ರಂದು ನಡೆದ ಪಂದ್ಯದಲ್ಲಿ ಶಕಿಬ್‌ ಪಂದ್ಯಶ್ರೇಷ್ಠರಾಗಿದ್ದರು. ಶಕಿಬ್‌ರನ್ನು ಅಭಿನಂದಿಸಿದ್ದ ಅಗರ್ವಾಲ್‌, “ಈ ಬಗ್ಗೆ ನಾವು ಕೆಲಸ ಮಾಡೋಣವೇ? ಅಥವಾ ಐಪಿಎಲ್‌ ಮುಗಿಯುವ ವರೆಗೆ ನಾನು ಕಾಯಬೇಕಾ’ ಎಂದು ವಿಚಿತ್ರವಾಗಿ ಕೇಳಿದ್ದರು. ಇಲ್ಲಿ ಕೆಲಸವೆನ್ನುವುದು ಮಾಹಿತಿ ರವಾನೆಗೆ ಬಂದ ಬೇಡಿಕೆ. ಇದನ್ನು ಶಕಿಬ್‌ ಸಂಬಂಧಪಟ್ಟ ಯಾವ ತನಿಖಾಸಂಸ್ಥೆಗಳಿಗೂ ತಿಳಿಸಿರಲಿಲ್ಲ

ಜ. 23, 2018: ಈ ದಿನಾಂಕದಲ್ಲಿ ಅಗರ್ವಾಲ್‌ ಶಕಿಬ್‌ಗ ಇನ್ನೊಂದು ಸಂದೇಶ ಕಳುಹಿಸಿ, “ಗೆಳೆಯ. ಈ ಸರಣಿ ಬಗ್ಗೆ ಏನಾದರೂ ಇದೆಯೇ?’ ಎಂದಿದ್ದರು. ಅಲ್ಲಿ ಸರಣಿಗೆ ಸಂಬಂಧಪಟ್ಟ ಕೆಲವು ರಹಸ್ಯ ಸಂಗತಿಗಳ ಬಗ್ಗೆ ಮಾಹಿತಿ ಕೇಳಿದ್ದರು. ಇದನ್ನು ಸ್ವತಃ ಶಕಿಬ್‌ ದೃಢೀಕರಿಸಿ ದ್ದಾರೆ. ಇದನ್ನೂ ಶಕಿಬ್‌ ಯಾರಿಗೂ ತಿಳಿಸಲಿಲ್ಲ.

ಎ. 26, 2018: ಇದು ಭಾರತದಲ್ಲಿ ಐಪಿಎಲ್‌ ನಡೆಯುತ್ತಿದ್ದ ಸಮಯ. ಆಗ ಸನ್‌ರೈಸರ್ ಹೈದರಾಬಾದ್‌ ಪರ ಶಕಿಬ್‌ ಆಡಿದ್ದರು. ಎ.26ರಂದು ನಿರ್ದಿಷ್ಟ ದಿನಾಂಕದಂದು ಪಂಜಾಬ್‌ ವಿರುದ್ಧ ಪಂದ್ಯವಿತ್ತು. ಈ ವೇಳೆ ಒಬ್ಬ ನಿರ್ದಿಷ್ಟ ಆಟಗಾರನ ಬಗ್ಗೆ ಬುಕ್ಕಿ ಪ್ರಶ್ನಿಸಿ, ಆತ ಇಂದು ಆಡುತ್ತಾನಾ ಎಂದು ಕೇಳಿದ್ದರು. ಸಂಭಾಷಣೆ ಮುಂದುವರಿಸಿ, ಬಿಟ್‌ಕಾಯಿನ್‌, ಡಾಲರ್‌ ಖಾತೆಯ ಬಗ್ಗೆ ವಿಚಾರಿಸಿದ್ದರು. ಆಗ ನಿಮ್ಮನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಶಕಿಬ್‌ ಹೇಳಿದ್ದರು. ಈ ಸಂಭಾಷಣೆಯಲ್ಲಿ ಹಲವು ಸಂದೇಶಗಳು ಅಳಿಸಲ್ಪಟ್ಟಿವೆ. ಅವೆಲ್ಲ ಮಾಹಿತಿಗಾಗಿ ಆತ ಕೇಳಿದ ಪ್ರಶ್ನೆಗಳು ಎಂದು ಶಕಿಬ್‌ ಬಾಯ್ಬಿಟ್ಟಿದ್ದಾರೆ.

ಬಾಂಗ್ಲಾ ಪತ್ರಿಕೆಗಳ ಪ್ರತಿಕ್ರಿಯೆ
ಶಕಿಬ್‌ ನಿಷೇಧ ಬಾಂಗ್ಲಾದ ಎಲ್ಲ ಪತ್ರಿಕೆಗಳಲ್ಲೂ ಮುಖಪುಟದ ಸುದ್ದಿಯಾಗಿದೆ.ದ ಡೈಲಿ ಸ್ಟಾರ್‌ ದಿನಪತ್ರಿಕೆ ಶಕಿಬ್‌ ಘಟನೆಯನ್ನು, ಬಾಂಗ್ಲಾ ಕ್ರಿಕೆಟ್‌ನ ಕರಾಳದಿನ ಎಂದು ವರ್ಣಿಸಿದೆ.

ಸಹ ಕ್ರಿಕೆಟಿಗರ ಬೆಂಬಲ
ಶಕಿಬ್‌ ನಿಷೇಧ ಆಘಾತ ಸೃಷ್ಟಿಸಿದರೂ ಬಾಂಗ್ಲಾ ಕ್ರಿಕೆಟಿಗರು ತಮ್ಮ ಮಾಜಿ ಆಟಗಾರನಿಗೆ ಬೆಂಬಲ ಸೂಚಿಸಿದ್ದಾರೆ. ಮುಶ್ಫಿàಕರ್‌ ರಹೀಂ ಭಾವುಕ ಸಂದೇಶ ಪ್ರಕಟಿಸಿ, “ನಿನ್ನೊಂದಿಗೆ ಕಳೆದ 18 ವರ್ಷಗಳಿಂದ ಕ್ರಿಕೆಟ್‌ ಆಡುತ್ತಿದ್ದೇನೆ. ನೀನಿಲ್ಲದೆ ಮೈದಾನಕ್ಕಿಳಿಯುವುದು ನನಗೆ ಬಹಳ ಕಷ್ಟ. ನೀನು ಮತ್ತೆ ಚಾಂಪಿಯನ್‌ ರೀತಿ ಕ್ರಿಕೆಟ್‌ಗೆ ಮರಳುತ್ತೀಯ ಎಂಬ ನಂಬಿಕೆ ಇದೆ’ ಎಂದಿದ್ದಾರೆ.

ಏಕದಿನ ತಂಡದ ನಾಯಕ ಮಶ್ರಫೆ ಮೊರ್ತಜ, “ಈ ಘಟನೆಯಿಂದ ನಾನು ಹಲವು ದಿನ ನಿದ್ದೆಯಿಲ್ಲದೆ ಕಳೆಯುವುದು ಖಚಿತ. ಆದರೆ ಮತ್ತೆ ಶಾಂತಿಯಿಂದ ನಿದ್ರಿಸುವ ದಿನ ಬರಲಿದೆ. ನಿನ್ನ ನಾಯಕತ್ವದಲ್ಲೇ ಬಾಂಗ್ಲಾ 2023ರ ವಿಶ್ವಕಪ್‌ ಫೈನಲ್‌ನಲ್ಲಿ ಆಡುವ ಭರವಸೆ ಇದೆ’ ಎಂದಿದ್ದಾರೆ.

ಐಸಿಸಿಗೆ ಯಾಕೆ ತಿಳಿಸಲಿಲ್ಲ?
ಶಕಿಬ್‌ ಬುಕ್ಕಿಯೊಂದಿಗೆ ನಡೆಸಿದ ಸಂಭಾಷಣೆಗಳನ್ನು ಬಾಂಗ್ಲಾ ಕ್ರಿಕೆಟ್‌ ಮಂಡಳಿಯಾಗಲಿ, ಐಸಿಸಿಗಾಗಲಿ ತಿಳಿಸಲಿಲ್ಲ. ಇದಕ್ಕೆ ಆ ವ್ಯಕ್ತಿ ಬಗ್ಗೆ ಕಾಳಜಿಯಿದ್ದದ್ದೇ ಕಾರಣ. ಮುಂದೆ ಮಾತನಾಡುತ್ತ ಹೋದಂತೆ ಅಗರ್ವಾಲ್‌ ಬುಕ್ಕಿ ಇರಬಹುದು ಎಂಬ ಸಂದೇಹ ಶಕಿಬ್‌ಗ ಬಂದಿದೆ. ಆದರೆ ಅಷ್ಟೂ ಸಂಭಾಷಣೆಗಳಲ್ಲಿ ಒಮ್ಮೆಯೂ ತಾನು ಯಾವ ಮಾಹಿತಿಯನ್ನೂ ನೀಡಿಲ್ಲ, ಹಣವಾಗಲೀ ಇನ್ನಿತರ ಯಾವುದೇ ಉಡುಗೊರೆಯನ್ನಾಗಲಿ ಪಡೆದಿಲ್ಲ ಎಂದು ಖಚಿತಪಡಿಸಿದ್ದಾರೆ.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.