ದಾನಿಗಳಿಂದ ಸಕಲ ಸವಲತ್ತು ಪಡೆದ ಬಡಗಕಜೆಕಾರು ಸರಕಾರಿ ಶಾಲೆ

ಮುಳಿ ಹುಲ್ಲಿನ ಛಾವಣಿಯಲ್ಲಿ ಆರಂಭಗೊಂಡು ಅಭಿವೃದ್ಧಿ ಹೊಂದಿ ಶತಮಾನ ಕಂಡ ಶಾಲೆ

Team Udayavani, Nov 4, 2019, 5:00 AM IST

0211PKT1

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಮಾಡಪಲ್ಕೆಯಲ್ಲಿರುವ ಬಡಗಕಜೆಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ತರ ದಶಮಾನೋತ್ಸವ ಆಚರಿಸಿ 1904ರಲ್ಲಿ ಕನಪಾಡಿಬೆಟ್ಟು ಎಂಬ ತೀರಾ ಗ್ರಾಮೀಣ ಪ್ರದೇಶದಲ್ಲಿ ಕಿಜನಾರುಗುತ್ತು ಸೇಸಪ್ಪ ಶೆಟ್ಟಿ ಅವರು ನಿವೇಶನ ಒದಗಿಸಿ, ಮುಳಿ ಹುಲ್ಲಿನ ಛಾವಣಿಯಲ್ಲಿ ಸ್ಥಾಪನೆಗೊಂಡ ಈ ಶಾಲೆ ಬಳಿಕ 1974ರಲ್ಲಿ ಆಟದ ಮೈದಾನದೊಂದಿಗೆ ಹೆಂಚಿನ ಛಾವಣಿಯ ಶಾಲೆಯಾಗಿ ಮಾರ್ಪಟ್ಟಿತ್ತು. ಇಲ್ಲಿನ ಹಳೆವಿದ್ಯಾರ್ಥಿಯೂ ಶಿಕ್ಷಕರೂ ಆಗಿದ್ದ ಕುಂಜತ್ತೋಡಿ ಶ್ರಿನಿವಾಸ ಭಟ್‌ ಅವರು 1978ರಲ್ಲಿ ಮಾಡಪಲ್ಕೆಗೆ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಿದರು. 1981ರಲ್ಲಿ ಖಂಡಿಗ ರಾಮಚಂದ್ರ ಪೂಜಾರಿ ಅವರ ಸಹಕಾರದಲ್ಲಿ ಆಟದ ಮೈದಾನ ಸಹಿತ ಶಾಲೆಗೆ 2.90 ಎಕ್ರೆ ಭೂಮಿಯನ್ನು ಮಂಜೂರು ಮಾಡಿಸಿದರು.

ವಿಶೇಷ ಸವಲತ್ತುಗಳು
ಈ ಶಾಲೆಯ ಹಳೆ ವಿದ್ಯಾರ್ಥಿಯಾಗಿ ನ್ಯಾಯವಾದಿಯಾಗಿದ್ದ ದಿ| ಎಲ್ಯಣ್ಣ ಪೂಜಾರಿ ಮತ್ತು ಅವರ ಕುಟುಂಬಸ್ಥರು ಪ್ರತಿವರ್ಷ ಶಾಲಾ ಮಕ್ಕಳಿಗೆ ಲೇಖನ ಪುಸ್ತಕ, ಉಚಿತ ಪ್ರವಾಸ, ಪ್ರೊಟೀನ್‌ಯುಕ್ತ ಆಹಾರ ನೀಡುತ್ತಿದ್ದು, ಸಂಪೂರ್ಣ ಮರು ವಿದ್ಯುದ್ದೀಕರಣ, ಸೋಲಾರ್‌ ವಿದ್ಯುತ್‌, ಕೊಳವೆ ಬಾವಿ, ಕಂಪ್ಯೂಟರ್‌, ಜ್ಞಾನ ಚಾವಡಿ ಎಂಬ ಸಭಾಂಗಣ, 7 ಲಕ್ಷ ರೂ. ವೆಚ್ಚದ ಶಾಲಾ ಕೊಠಡಿ ನೀಡಿದ್ದಾರೆ. ಸರಕಾರದಿಂದ ವಿಶಾಲ ಮೈದಾನ, ರಂಗಮಂದಿರ, ರಸ್ತೆಗೆ ಡಾಮರು, ತರಗತಿ ಕೋಣೆ, ಅಕ್ಷರ ದಾಸೋಹ, ಮುಖ್ಯ ಶಿಕ್ಷಕರ ಕೊಠಡಿ, ವಿಶೇಷ ಶೌಚಾಲಯ, ಆವರಣ ಗೋಡೆ, ಮೂತ್ರಾಲಯ, ಶೌಚಾಲಯ, ಕೊಳವೆ ಬಾವಿ ನಿರ್ಮಿಸಲಾಗಿದೆ.

ಮುಖ್ಯ ಶಿಕ್ಷಕರು ಶೀನ ರೈ, ವಾಸುದೇವ ಭಟ್‌, ರಘುಚಂದ್ರ ಚೌಟ, ಶಿವಪ್ಪ ಪೂಜಾರಿ, ರುಕ್ಮಯ ಸಾಲ್ಯಾನ್‌, ಹರಿಣಾಕ್ಷಿ, ಅಂಜಲಿ, ಮೀನಾ ಕುಮಾರಿ, ಶ್ರೀನಿವಾಸ ಭಟ್‌, ವಿಜಯಾಕ್ಷಿ, ಪದ್ಮಾವತಿ ಪಾದೆ ಈ ಶಾಲೆಯನ್ನು ಮುನ್ನಡೆಸಿದ್ದಾರೆ.

ಸುತ್ತಮುತ್ತ ಪಾಂಡವರಕಲ್ಲು, ಪುಂಜಾಲಕಟ್ಟೆ, ಬೆರ್ಕಳ, ತೆಂಕಕಜೆಕಾರು ಸ.ಹಿ.ಪ್ರಾ. ಶಾಲೆ, ಕಕ್ಯಪದವು ಎಲ್‌ಸಿಆರ್‌ ಇಂಡಿಯನ್‌ ಸ್ಕೂಲ್‌, ಮಡಂತ್ಯಾರು ಖಾಸಗಿ ಹಿ.ಪ್ರಾ. ಶಾಲೆಗಳಿದ್ದರೂ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದೆ. ಧ.ಗ್ರಾ. ಯೋಜನೆ ಸಹಕಾರದಲ್ಲಿ ಕೈತೋಟ ನಿರ್ಮಿಸಲಾಗಿದೆ.

ಮುಂದಿನ ಯೋಜನೆಗಳು
ಪ್ರೌಢ ಶಾಲೆ, ಶಾಲಾ ಕೊಠಡಿಗಳ ದುರಸ್ತಿ, ಹೆಚ್ಚುವರಿ ಕೊಠಡಿ, ವಾಚನಾಲಯ ಆಗಬೇಕಾಗಿದೆ.

ಹಿ.ಪ್ರಾ. ಶಾಲೆಯಾಗಿ ಅಭಿವೃದ್ಧಿ ಪದ್ಮಾವತಿ ಎನ್‌. ಪಾದೆ ಅವರು ಮುಖ್ಯ ಶಿಕ್ಷಕರಾಗಿದ್ದಾಗ ಹಿರಿಯ ಪ್ರಾಥಮಿಕ ಶಾಲೆಯಾಗಿ ಅಭಿವೃದ್ಧಿಯಾಯಿತು.ಪ್ರಸ್ತುತ 1ರಿಂದ 8ನೇ ತರಗತಿಯಿದ್ದು, ಶಾಲೆಯಲ್ಲಿ 6 ಶಿಕ್ಷಕರಿದ್ದು, 84 ವಿದ್ಯಾರ್ಥಿಗಳಿದ್ದಾರೆ.

ಶಾಲೆಗೆ ಸೌಲಭ್ಯಗಳನ್ನು ಒದಗಿಸುತ್ತಿರುವ ದಿ| ಎಲ್ಯಣ್ಣ ಪೂಜಾರಿ ಅವರ ಕುಟುಂಬ ಮತ್ತು ದಾನಿಗಳಿಂದ ಶಾಲಾಭಿವೃದ್ಧಿಗೆ ಆಸರೆಯಾಗಿದೆ.
-ಸೀತಾರಾಮ, ಪ್ರಭಾರ ಮುಖ್ಯ ಶಿಕ್ಷಕರು.

ಗ್ರಾಮೀಣ ಪ್ರದೇಶದ ಶಾಲೆ ಯೊಂದು ಇಲ್ಲಿನ ಮಕ್ಕಳಿಗೆ ಜ್ಞಾನದೇಗುಲವಾಗಿದೆ. ಸರಕಾರಿ ಶಾಲೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಊರವರು ಮತ್ತು ಶಿಕ್ಷಕರ ಮೇಲಿದೆ.
-ಶ್ರೀನಿವಾಸ ಭಟ್‌ ಕುಂಜತ್ತೋಡಿ,
ಹಳೆ ವಿದ್ಯಾರ್ಥಿ,ನಿವೃತ್ತ ಮುಖ್ಯ ಶಿಕ್ಷಕರು.

ರತ್ನದೇವ್‌ ಪುಂಜಾಲಕಟ್ಟೆ

ಟಾಪ್ ನ್ಯೂಸ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.