ಕ್ರೀಡಾ ಇಲಾಖೆಯ “ಯುವ ಚೈತನ್ಯ ಯೋಜನೆ’

ಒಂದೇ ವರ್ಷದಲ್ಲಿ ಚೈತನ್ಯ ಕಳೆದುಕೊಳ್ಳುತ್ತಿದೆ

Team Udayavani, Nov 6, 2019, 4:55 AM IST

DD-9

ಉಡುಪಿ: ರಾಜ್ಯ ಸರಕಾರ 2018ರಲ್ಲಿ ಯುವ ಸಂಘಗಳಿಗೆ ಕ್ರೀಡಾ ಕಿಟ್‌ ವಿತರಿಸುವ ಉದ್ದೇಶದಿಂದ ಜಾರಿಗೆ ತಂದ “ಯುವ ಚೈತನ್ಯ’ ಯೋಜನೆ ಅನುದಾನ ಕೊರತೆಯಿಂದ ಒಂದೇ ವರ್ಷದಲ್ಲಿ ಚೈತನ್ಯ ಕಳೆದುಕೊಂಡು ಸ್ಥಗಿತಗೊಳ್ಳುವ ಸೂಚನೆಗಳು ಎದ್ದು ಕಾಣುತ್ತಿವೆ.

ಇಲಾಖೆ ಅನುದಾನ ಕಡಿತ!
ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅನುದಾನವನ್ನು ಮೊಟಕು ಗೊಳಿಸಿದ್ದರು. ಯುವಚೈತನ್ಯ ಯೋಜನೆಗೆ ಅಗತ್ಯವಿರುವ ಅನುದಾನ ಪ್ರತ್ಯೇಕವಾಗಿ ಮೀಸಲಿಡದ ಕಾರಣದಿಂದ ಯೋಜನೆ ವೇಗ ಕುಂಠಿತಗೊಂಡಿದೆ ಎನ್ನಲಾಗುತ್ತಿದೆ. ಪ್ರಾರಂಭದಲ್ಲಿ ಪ್ರತಿ ಜಿಲ್ಲೆಗೆ ಸುಮಾರು 100ರಿಂದ 150 ಕಿಟ್‌ ವಿತರಿಸಲಾಗುತ್ತಿತ್ತು. ಇದೀಗ ಜಿಲ್ಲೆಗೆ ಕೇವಲ 35 ಕ್ರೀಡಾಕಿಟ್‌ಗಳು ಬಂದಿವೆ.

ಮೊದಲ ಹಂತದಲ್ಲಿ 5,000 ಕಿಟ್‌ ಗುರಿ
ಆರೋಗ್ಯಯುತ ಸಮಾಜ ನಿರ್ಮಾಣ ಹಾಗೂ ಕ್ರೀಡೆ ಮೂಲಕ ಯುವ ಸಮುದಾಯವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುವ ಚೈತನ್ಯ ಯೋಜನೆಯನ್ನು 2018ರಲ್ಲಿ ಜಾರಿಗೆ ತಂದಿದ್ದರು. 20 ಕೋ. ರೂ ಬಿಡುಗಡೆ ಮಾಡಿ ಪ್ರಥಮ ಹಂತವಾಗಿ ಉಡುಪಿ ಜಿಲ್ಲೆಯ 600 ಯುವ ಸಂಘಗಳು ಸೇರಿದಂತೆ ರಾಜ್ಯದಲ್ಲಿ 5,000 ಯುವ ಸಂಘಗಳಿಗೆ ತಲಾ 40,000 ರೂ. ಮೌಲ್ಯದ ಕ್ರೀಡಾ ಕಿಟ್‌ ವಿತರಿಸಲಾಗಿತ್ತು.

7 ಹಂತದಲ್ಲಿ ವಿತರಣೆ
ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಸುಮಾರು 7 ಹಂತದಲ್ಲಿ 1,020 ಯುವ ಸಂಘಕ್ಕೆ ಕ್ರೀಡಾಕಿಟ್‌ ವಿತರಿಸಲಾಗಿತ್ತು. ಜಿಲ್ಲೆಯಲ್ಲಿ ಮಾರ್ಚ್‌ 2018ರ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ಬಳಿಕ ಯಾವುದೇ ಸಂಘಗಳಿಗೆ ಕ್ರೀಡಾಕಿಟ್‌ ವಿತರಣೆಯಾಗಿಲ್ಲ. ಆದರೆ ಇಂದಿಗೂ ಕ್ರೀಡಾ ಕಿಟ್‌ ಬಯಸಿ ಹಲವು ಅರ್ಜಿಗಳು ಇಲಾಖೆಗೆ ಬರುತ್ತಿವೆ. ಆದರೆ ಇಲಾಖೆಯಿಂದ ವಿತರಿಸಲು ಅಗತ್ಯವಿರುವಷ್ಟು ಕಿಟ್‌ಗಳು ಪೂರೈಕೆಯಾಗುತ್ತಿಲ್ಲ.

ಕ್ರೀಡಾಕಿಟ್‌ನಲ್ಲಿ ಏನಿತ್ತು?
40,000 ರೂ. ಮೌಲ್ಯದ ಕ್ರೀಡಾ ಕಿಟ್‌ನಲ್ಲಿ ಮೂರು ವಾಲಿಬಾಲ್‌, ನೆಟ್‌, ಎರಡು ಕಂಬಗಳು, ಎರಡು ತ್ರೋಬಾಲ್‌, ಮೂರು ಫ‌ುಟ್‌ಬಾಲ್‌, ಎರಡು ಸೆಟ್‌ ಸ್ಟಂಪ್‌, ಡಿಸ್ಕಸ್‌, ಸ್ಕಿಪ್ಪಿಂಗ್‌ ರೋಪ್‌, ಆರು ಟೆನಿಸ್‌ ಬಾಲ್‌, ಆರು ಟೆನಿಕಾಯಿಟ್‌ ರಿಂಗ್‌ ಹಾಗೂ ಕ್ರೀಡಾ ಸಾಮಗ್ರಿ ತುಂಬಿಕೊಳ್ಳಲು ದೊಡ್ಡ ಬ್ಯಾಗ್‌ ಜತೆಗೆ ಸಾಗಾಟಕ್ಕೆ ತಗಲುವ 500 ರೂ. ವೆಚ್ಚವನ್ನು ಭರಿಸಲಾಗುತ್ತಿತ್ತು.

ಯುವಜನರಿಗೆ ಲಾಭ ಸಿಗಲಿ
ಯುವ ಚೈತನ್ಯ ಯೋಜನೆ ನೀಡುವ ಕ್ರೀಡಾ ಕಿಟ್‌ ಮತ್ತೆ ವಿತರಿಸಬೇಕು. ಇದರ ಲಾಭ ಗ್ರಾಮೀಣ ಭಾಗದ ಯುವಜನರಿಗೆ ಸಿಗುವಂತಾಗಬೇಕು. ಯುವ ಜನರು ಬಿಡುವಿನ ವೇಳೆಯಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಾಜ ವಿರೋಧಿ ಚಟುವಟಿಕೆಯಿಂದ ದೂರವಿರಲು ಸಾಧ್ಯ.
-ರಾಘವೇಂದ್ರ, ಬ್ರಹ್ಮಾವರ

15 ಕಿಟ್‌ ವಿತರಣೆ
ಕಳೆದ ಸಾಲಿನ “ಯುವ ಚೈತನ್ಯ ಯೋಜನೆ’ಯಡಿಯಲ್ಲಿ 35 ಕ್ರೀಡಾಕಿಟ್‌ಗಳು ಈಗ ದ.ಕ. ಜಿಲ್ಲೆಗೆ ಬಂದಿವೆ. ಅದರಲ್ಲಿ ಈಗಾಗಲೇ 15 ಕಿಟ್‌ ವಿತರಿಸಲಾಗಿದೆ.
-ಪ್ರದೀಪ್‌ ಡಿ’ಸೋಜಾ, ಕ್ರೀಡೆ ಹಾಗೂ ಯುವಜನ ಸಶಕ್ತೀಕರಣ ಇಲಾಖೆ ಉಪ ನಿರ್ದೇಶಕ (ಪ್ರಭಾರ ), ದ.ಕ.

ಹೆಚ್ಚಿದ ಅರ್ಜಿ ಸಲ್ಲಿಕೆ ಪ್ರಮಾಣ
ಜಿಲ್ಲೆಗೆ ಕಳೆದ ವರ್ಷದ 35 ಕಿಟ್‌ ಜುಲೈ ತಿಂಗಳಿನಲ್ಲಿ ಬಂದಿವೆ. ಈ ಬಾರಿಯ ಪಟ್ಟಿ ಇನ್ನೂ ತಯಾರಿಸಿಲ್ಲ. ಜಿಲ್ಲೆಯಲ್ಲಿ ಕ್ರೀಡಾಕಿಟ್‌ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ.
-ಡಾ| ರೋಶನ್‌ ಕುಮಾರ್‌ ಶೆಟ್ಟಿ, ಕ್ರೀಡೆ ಹಾಗೂ ಯುವಜನಸಶಕ್ತೀಕರಣ ಇಲಾಖೆ
ಸಹಾಯಕ ನಿರ್ದೇಶಕ, ಉಡುಪಿ

ಶಾಲಾ ಮಟ್ಟದಲ್ಲಿ ವಿತರಣೆಯಾಗಲಿ
ಕಳೆದ ಬಾರಿ ಕ್ರೀಡಾ ಕಿಟ್‌ನಲ್ಲಿ ಸಾಕಷ್ಟು ಲೋಪದೋಷಗಳು ಇದ್ದವು. ಅದನ್ನು ಸರಿಪಡಿಸಿಕೊಂಡು ಗುಣಮಟ್ಟದ ಕ್ರೀಡಾ ಕಿಟ್‌ನ್ನು ಶಾಲಾ ಮಟ್ಟದಲ್ಲಿ ವಿತರಿಸುವಂತಾಗಬೇಕು.
-ದಿನಕರ್‌ ಬಾಬು, ಜಿ.ಪಂ. ಅಧ್ಯಕ್ಷರು, ಉಡುಪಿ ಜಿಲ್ಲೆ

ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.