ಚಳಿಗಾಲದಲ್ಲಿ ಹುಷಾರು…ಯಾವುದು ಉತ್ತಮ…ಯಾವುದನ್ನು ಸೇವಿಸಬಾರದು?

ಅಸ್ತಮಾದಿಂದ ಆರಾಮ ಪಡೆಯಲು...

Team Udayavani, Oct 24, 2020, 5:00 PM IST

qq-2

ಅಸ್ತಮಾ-ಉಸಿರಾಟ ಪ್ರಕ್ರಿಯೆಗೆ ತೊಂದರೆಯುಂಟು ಮಾಡುವ ಸಾಮಾನ್ಯ ಕಾಯಿಲೆ. ಶ್ವಾಸಕೋಶಕ್ಕೆ ಸರಿಯಾಗಿ ಗಾಳಿ ತಲುಪದಂತೆ ಕಫ‌ ಅಡ್ಡಗಟ್ಟಿದ್ದರೆ ಸರಾಗ ಉಸಿರಾಟಕ್ಕೆ ಕಷ್ಟವಾಗುವುದು, ಉಸಿರಾಡುವಾಗ ಸುಯ್‌ ಎಂಬ ಶಬ್ದ ಬರುವುದು, ಮೂಗು ಕಟ್ಟುವುದು, ಕೆಮ್ಮು, ಎದೆಬಿಗಿತ ಮತ್ತು ಆಯಾಸ; ಇವು ಅಸ್ತಮಾದ ಲಕ್ಷಣಗಳು. ಚಳಿಗಾಲದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ಅಸ್ತಮಾಕ್ಕೆ, ಆರೋಗ್ಯಕಾರಿ ಜೀವನಶೈಲಿಯೇ ಉತ್ತಮ ಪರಿಹಾರ. ಹೆಚ್ಚುತ್ತಿರುವ ಧೂಳು, ಹೊಗೆ ಮಾಲಿನ್ಯದಿಂದಾಗಿ, ಯಾವ ವಯಸ್ಸಿನವರಲ್ಲಿ ಬೇಕಾದರೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರಿಂದಾಗಿ ಇನ್ನಿತರ ಶ್ವಾಸಕೋಶ ಸಂಬಂಧಿ ರೋಗಗಳೂ ಜೊತೆಯಾಗಬಹುದು.

ಜೀವನಶೈಲಿ: ಅಸ್ತಮಾ ರೋಗಿಗಳು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ, ಯೋಗಾಭ್ಯಾಸ, ದೀರ್ಘ‌ ಉಸಿರಾಟ ಕ್ರಿಯೆ, ಪ್ರಾಣಾಯಾಮ ಮಾಡಿದರೆ ಒಳ್ಳೆಯದು. ಸೂರ್ಯನ ಎಳೆ ಬಿಸಿಲಿಗೆ ಮೈಯೊಡ್ಡಿ ನಿಲ್ಲುವುದರಿಂದ ಶೀತ,ಅಲರ್ಜಿ,ಉಸಿರಾಟದ ತೊಂದರೆಗಳಿಗೆ ವಿರಾಮ ಸಿಗುವುದು.

ಚಳಿಗಾಲದ ಆರೈಕೆ
ಅಸ್ತಮಾದಿಂದ ಬಳಲುವವರು ಚಳಿಗಾಲದಲ್ಲಿ ಬಹಳಷ್ಟು ಎಚ್ಚರ ವಹಿಸಬೇಕು. ದಪ್ಪನೆಯ ಉಣ್ಣೆ ಬಟ್ಟೆಗಳನ್ನು ಧರಿಸಬೇಕು. ಯಾವಾಗಲೂ ಸಾಕÕ… ಹಾಕಿಕೊಂಡು ಪಾದಗಳನ್ನು ಬೆಚ್ಚಗಿರಿಸಬೇಕು. ಹೆಚ್ಚು ಶೀತಗಾಳಿಯಲ್ಲಿ ಸಂಚರಿಸಬಾರದು. ಶೀತ, ಅಲರ್ಜಿಕಾರಕ ಆಹಾರಗಳಿಂದ ಆದಷ್ಟೂ ದೂರವಿರಿ.

ಯಾವುದನ್ನು ಸೇವಿಸಬಾರದು?
ಅತಿ ತಂಪಾದ ಪಾನೀಯ, ಐಸ್‌ಕ್ರೀಮ್, ಚಾಕೊಲೇಟ್‌ಗಳಿಂದ ದೂರವಿದ್ದರೆ ಒಳಿತು. ಇಂಥದ್ದೇ ಆಹಾರ ತಿನ್ನಬೇಕು ಎಂದೇನೂ ಇಲ್ಲ. ವಾರದಲ್ಲಿ ಒಂದು ದಿನವಾದರೂ ಉಪವಾಸ ಮಾಡಿದರೆ ಒಳ್ಳೆಯದು. ಚಯಾಪಚಯ ಕ್ರಿಯೆ ಸರಿ ಇರುವಂತೆ, ಮಲಬದ್ಧತೆ ಆಗದಂತೆ ನೋಡಿಕೊಳ್ಳಬೇಕು.ವಿಟಮಿನ್‌ ಡಿ ಹಾಗೂ ವಿಟಮಿನ್‌ ಸಿ ಇರುವ ಆಹಾರವನ್ನು ಹೆಚ್ಚು ಸೇವಿಸಬೇಕು.

ಯಾವುದು ಉತ್ತಮ?
-ಜೇನು- ರಾತ್ರಿ ಮಲಗುವ ಮುನ್ನ 1-2 ಚಮಚ ಜೇನು ಸೇವಿಸುವುದು ಅಸ್ತಮಾಕ್ಕೆ ರಾಮಬಾಣ.
-ತುಳಸಿ- ತುಳಸಿ ರಸದೊಂದಿಗೆ ಜೇನು ಮಿಶ್ರಣ ಮಾಡಿ ದಿನಕ್ಕೆ 2-3 ಬಾರಿ ಸೇವಿಸುವುದರಿಂದ ಉಸಿರಾಡಲು ಆರಾಮವಾಗುತ್ತದೆ.
-ಶುಂಠಿ- ಒಂದು ಲೋಟ ನೀರಿಗೆ ಶುಂಠಿ ತುಂಡುಗಳನ್ನು ಹಾಕಿ ಕುದಿಸಿ ಕುಡಿದರೆ ಎದೆ ಬಿಗಿತ ಕಡಿಮೆಯಾಗುತ್ತದೆ. ತುಳಸಿ ರಸ, ಜೇನು, ಶುಂಠಿ ರಸ ಮಿಶ್ರಣ ಮಾಡಿ ಕುಡಿಯುವುದರಿಂದಲೂ ಕಫ‌ ನಿವಾರಣೆಯಾಗುತ್ತದೆ.
-ಅರಿಶಿನ- ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಕುದಿಸಿದ ನೀರಿಗೆ ಚಿಟಿಕೆ ಅರಿಶಿನ ಹಾಕಿ ಕುಡಿದರೆ, ರಾತ್ರಿ ಅರಿಶಿನ ಹಾಕಿದ ಹಾಲು ಕುಡಿದರೆ ಶ್ವಾಸ ಸಂಬಂಧಿ ರೋಗಗಳು ಗುಣವಾಗುತ್ತವೆ.
-ಬೆಳ್ಳುಳ್ಳಿ- ಕಾಲು ಗ್ಲಾಸ್‌ ಹಾಲಿಗೆ 4-5 ಬೆಳ್ಳುಳ್ಳಿ ಎಸಳು, ಸ್ವಲ್ಪ ಸಕ್ಕರೆ ಹಾಕಿ ಕುದಿಸಿ ಕುಡಿದರೆ ಶ್ವಾಸಕೋಶದ ಸ್ವತ್ಛ ಕಾರ್ಯ ನಡೆಯುತ್ತದೆ.
-ವೀಳ್ಯದೆಲೆ- ಸಮ ಪ್ರಮಾಣದಲ್ಲಿ ಶುಂಠಿ ರಸ, ಬೆಳ್ಳುಳ್ಳಿ ರಸ ಹಾಗೂ ವೀಳ್ಯದೆಲೆ ರಸವನ್ನು ಮಿಶ್ರಣ ಮಾಡಿ ಸೇವಿಸಿದರೆ ಅಸ್ತಮಾ ನಿಯಂತ್ರಣಕ್ಕೆ ಬರುತ್ತದೆ.
– ಮೋಸಂಬಿ, ಲಿಂಬೆ, ಪಪ್ಪಾಯ, ಬಸಳೆ, ಟೊಮೆಟೋ,ಕ್ಯಾರೆಟ…, ಕಿತ್ತಳೆ, ಕಿವಿ, ದ್ರಾಕ್ಷಿ, ಸೀಬೆ ಹಣ್ಣುಗಳು ಸಹ ಶ್ವಾಸಕೋಶದ ಚಟುವಟಿಕೆಗಳನ್ನು ಉತ್ತಮಗೊಳಿಸಿ ಅಸ್ತಮಾವನ್ನು ನಿಯಂತ್ರಿಸುವಲ್ಲಿ ಸಹಕಾರಿ.

-ಡಾ. ಶ್ರೀಲತಾ ಪದ್ಯಾಣ

ಟಾಪ್ ನ್ಯೂಸ್

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

air india

Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-hand-hygien-day

World Hand Hygiene Day: ಸ್ವಚ್ಛ ಕೈಗಳ ಶಕ್ತಿ: ಕೈಗಳ ನೈರ್ಮಲ್ಯಕ್ಕೆ ಮಾರ್ಗದರ್ಶಿ

6-health

Health: ಗೌಟ್‌: ಹಾಗೆಂದರೇನು? ಕಾರಣ ಏನು? ನಿಯಂತ್ರಣ ಹೇಗೆ?

5-asthama

Asthma ಕುರಿತಾದ ಶಿಕ್ಷಣದಿಂದ ಸಶಕ್ತೀಕರಣ; ಜಾಗತಿಕ ಅಸ್ತಮಾ ದಿನ 2024: ಮೇ 7

1-wqewewqe

Report; ಹೆಚ್ಚು ಸಂಸ್ಕರಿಸಿದ ಆಹಾರ ತಿಂದರೆ ಬೇಗ ಸಾವು!

1-wewqeqeewq

ICMR ಸಲಹೆ; ಸಕ್ಕರೆ, ಉಪ್ಪು ಬಳಕೆಯಲ್ಲಿ ನಿಯಂತ್ರಣ ಇರಲಿ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

air india

Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.