“ಪ್ರತೀ ಜಿಲ್ಲೆಯಲ್ಲೂ ಕಬಡ್ಡಿ ತರಬೇತಿ ಕೇಂದ್ರ ಅಗತ್ಯ’


Team Udayavani, Nov 19, 2019, 12:36 AM IST

kabbaddi-tarabeti

ಸುಬ್ರಹ್ಮಣ್ಯ : ಕಬಡ್ಡಿಯಲ್ಲಿ ಅಂತಾ ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದವರಲ್ಲಿ ಗಡಿನಾಡು ಕಾಸರಗೋಡು ಜಿಲ್ಲೆಯ ಜಗದೀಶ ಕುಂಬಳೆ ಹೆಸರು ಬಹಳ ಎತ್ತರದಲ್ಲಿದೆ. ಪ್ರೊ ಕಬಡ್ಡಿಯಲ್ಲಿ ಬೆಂಗಾಲ್‌ ವಾರಿಯರ್ ಮತ್ತು ತೆಲುಗು ಟೈಟಾನ್ಸ್‌ ತಂಡದ ತರಬೇತುದಾರರಾಗಿದ್ದ ಅವರು ಭಾರತೀಯ ಸೇನೆಯಲ್ಲೂ ಸೇವೆ ಸಲ್ಲಿಸಿದ್ದಾರೆ. ಅವರು ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ವೇಳೆ “ಉದಯವಾಣಿ’ ಜತೆ ಮಾತುಕತೆ ನಡೆಸಿದರು.

– ಕಬಡ್ಡಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿಮ್ಮ ಯೋಜನೆ, ಪರಿಕಲ್ಪನೆ ಏನು?
ಶಿಕ್ಷಣ ಕೌಶಲವನ್ನು ನೀಡುವ ಅಭ್ಯಾಸ ಕೇಂದ್ರವನ್ನು ಕಾಸರಗೋಡಿನಲ್ಲಿ ಆರಂಭಿಸಿದ್ದೇನೆ. ಕಬಡ್ಡಿ ಅಕಾಡೆಮಿ ತೆರೆದ ಬಳಿಕ ಅಲ್ಲಿ ಸಾಕಷ್ಟು ಆಟಗಾರರು ಹೊರಬಂದಿದ್ದಾರೆ. ಸೂಕ್ತ ತರಬೇತಿ ದೊರೆತರೆ ಸಾಮಾನ್ಯ ಆಟಗಾರ ಕೂಡ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಿದೆ.

– ಕಬಡ್ಡಿಗೆ ಸರಕಾರದ ನೆರವು ಹೇಗಿರಬೇಕು?
ಸರಕಾರವು ಇಚ್ಛಾಶಕ್ತಿಯಿಂದ ಎಲ್ಲ ಜಿಲ್ಲೆಗಳಲ್ಲಿ ಕಬಡ್ಡಿ ಕ್ರೀಡೆಯನ್ನು ಪ್ರೋತ್ಸಾಹಿಸಬೇಕಿದೆ. ಪ್ರತೀ ಜಿಲ್ಲೆಯಲ್ಲಿ ಕಬಡ್ಡಿ ಕೋಚಿಂಗ್‌ ಸೆಂಟರ್‌ ತೆರೆಯುವ ಬಗ್ಗೆ ಸರಕಾರ ಗಮನಹರಿಸಬೇಕು.

– ತರಬೇತಿ ಕೇಂದ್ರ ವಿಸ್ತರಿಸುವ ಯೋಜನೆ ಇದೆಯೇ?
ಮಂಗಳೂರಿನಲ್ಲಿ ಕಬಡ್ಡಿ ತರಬೇತಿ ನೀಡಲು ನನಗೆ ಆಸಕ್ತಿ ಇದೆ. ಅವಕಾಶ ದೊರೆತರೆ ಕೋಚಿಂಗ್‌ ನೀಡ ಲು ಸಿದ್ಧ. ಮಂಗಳೂರು ಜಿಲ್ಲಾ ಕೇಂದ್ರ. ಇಲ್ಲಿ ಕಬಡ್ಡಿ ತರಬೇತಿ ಕೇಂದ್ರ ತೆರೆಯುವುದು ನನ್ನ ಕನಸಾಗಿ ತ್ತು. ಇದಕ್ಕೆ ಸಾಕಷ್ಟು ಪ್ರಯತ್ನ ಕೂಡ ನಡೆಸಿದೆ. ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ರಾಜ್ಯದ ಇತರ ಜಿಲ್ಲೆಗಳಲ್ಲೂ ಕಬಡ್ಡಿ ಕೇಂದ್ರ ತೆರೆಯಲು ಪ್ರಯತ್ನಿಸುತ್ತಿದ್ದೇನೆ.

– ಕಬಡ್ಡಿ ಆಟಗಾರನಾದ ನೀವು ಸೈನಿಕನಾಗಿದ್ದು ಹೇಗೆ?
ಕಾಲೇಜು, ವಿಶ್ವವಿದ್ಯಾಲಯದಲ್ಲಿ ಕಬಡ್ಡಿ ತಂಡದ ಸದಸ್ಯನಾಗಿ ಹಲವು ಕಡೆ ಸ್ಪರ್ಧೆಗಳಲ್ಲಿ ಭಾಗವಹಿಸಲು ತೆರಳುತ್ತಿದ್ದೆ. ಜಿಲ್ಲಾ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತಿದ್ದಾಗ ತರಬೇತುದಾರರೊಬ್ಬರ ಸಲಹೆಯಂತೆ ಸೈನಿಕ ನೇಮಕಾತಿ ಕ್ಯಾಂಪಿನಲ್ಲಿ ಭಾಗವಹಿಸಿದೆ. ತೇರ್ಗ ಡೆಗೊಂಡು ಸೈನಿಕ ಸೇವೆಗೆ ಸೇರಿದೆ. ಆಟವನ್ನೂ ಮುಂದುವರಿಸಿದೆ.

– ಮ್ಯಾಟ್‌ಗೆ ಹೇಗೆ ಹೊಂದಿಕೊಂಡಿರಿ?
ರಜೆಯಲ್ಲಿ ಊರಿಗೆ ಬಂದಾಗಲೂ ಆಟ ಮುಂದು ವರಿಸುತ್ತಿದ್ದೆ. ಸರ್ವೀಸಸ್‌ ತಂಡ‌ದಿಂದ ಇಂಡಿ ಯನ್‌ ತಂಡಕ್ಕೆ ಆಯ್ಕೆಯಾದೆ. ಸರ್ವೀಸಸ್‌ ತಂಡದಲ್ಲಿ ಹೆಚ್ಚಾಗಿ ಉತ್ತರ ಭಾರತದ ಆಟಗಾರರೇ ಇರುತ್ತಿದ್ದರು. ಅವರಲ್ಲಿ ಮ್ಯಾಟ್‌ನಲ್ಲಿ ಆಡುವವರೇ ಜಾಸ್ತಿ. ನಾನು ಮಾತ್ರ ನೆಲದಲ್ಲಿ ಆಡುತ್ತಿದ್ದೆ. ಮ್ಯಾಟ್‌ ಕಬಡ್ಡಿ ಹಾಗೂ ಮಣ್ಣಿನ ಅಂಗಳದಲ್ಲಿ ಆಡುವ ಕಬಡ್ಡಿಗೆ ಬಹಳ ವ್ಯತ್ಯಾಸವಿದೆ. ಇದನ್ನು ಮನಗಂಡು ಯುವ ಕಬಡ್ಡಿ ಪಟುಗಳಿಗೆ ಅಭ್ಯಾಸ ನೀಡುವ ಅಗತ್ಯವಿದೆ.

– ಗ್ರಾಮೀಣ ಭಾಗದಲ್ಲಿ ಕಬಡ್ಡಿ ಸ್ಥಿತಿ ಹೇಗಿದೆ?
ಇಲ್ಲಿ ಪ್ರತಿಭಾನ್ವಿತ ಕಬಡ್ಡಿ ಆಟಗಾರರಿದ್ದೂ ಸೂಕ್ತ ತರಬೇತಿ ಸಿಗುತ್ತಿಲ್ಲ. ಹೀಗಾಗಿ ಪ್ರತಿಭೆಗಳು ಹೊರಬ ರುತ್ತಿಲ್ಲ. ಸಂಘ ಸಂಸ್ಥೆಗಳು ಸ್ಥಳೀಯ ಕಬಡ್ಡಿ ಕೋಚಿಂ ಗ್‌ ಸೆಂಟರ್‌ ತೆರೆಯಲು ಗಮನಹರಿಸಬೇಕು. ಇಲ್ಲಿ ಉತ್ತಮ ತರಬೇತುದಾರರಿದ್ದು, ಅವರನ್ನು ಸದುಪ ಯೋಗಪಡಿಸಿಕೊಳ್ಳಬೇಕಿದೆ.

– ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.