ಪಾಳು ಬೀಳುತ್ತಿವೆ ಗ್ರಂಥಾಲಯಗಳು


Team Udayavani, Nov 19, 2019, 11:02 AM IST

gb-tdy-4

ಚಿತ್ತಾಪುರ: ವಿದ್ಯಾರ್ಥಿಗಳು ಹಾಗೂ ಯುವಸಮೂಹದ ಜ್ಞಾನ ಭಂಡಾರ ಹೆಚ್ಚಿಸುವ ಉದ್ದೇಶ ಹೊಂದಿದ ಗ್ರಂಥಾಲಯಗಳು ಸದ್ದಿಲ್ಲದೆ ಮುಚ್ಚುತ್ತಿವೆ.ಗ್ರಾಪಂ ಖರ್ಚು-ವೆಚ್ಚದಲ್ಲಿ ಗ್ರಂಥಾಲಯದ ಮಾಸಿಕನಿರ್ವಹಣೆಗೆ ಹಣ ಭರಿಸಲಾಗುತ್ತಿದ್ದರೂ ನಾಗರಿಕರಿಗೆ ಮಾತ್ರ ಗ್ರಂಥಾಲಯ ಸೌಲಭ್ಯ ಅಲಭ್ಯವಾಗಿದೆ.

ತಾಲೂಕಿನ 43 ಗ್ರಾಪಂ ವ್ಯಾಪ್ತಿಯಲ್ಲಿನ ಬಹುತೇಕ ಸಾರ್ವಜನಿಕ ಗ್ರಂಥಾಲಯಗಳ ಸ್ಥಿತಿ ಇದು. ಸ್ವಂತ ನೆಲೆಯಿಲ್ಲ. ಸರಿಯಾದ ಸಮಯಕ್ಕೆಪುಸ್ತಕಗಳು-ಪತ್ರಿಕೆಗಳ ಸರಬರಾಜು ಆಗುತ್ತಿಲ್ಲ.ಗ್ರಂಥಪಾಲಕರ ಕೊರತೆಯಿಂದ ಇರುವ ತಾತ್ಕಾಲಿಕ ಕಟ್ಟಡದ ಬೀಗ ತೆಗೆಯುವವರೂ ಇಲ್ಲದಂತಾಗಿ ಗ್ರಂಥಾಲಯಗಳು ಪಾಳು ಬಿದ್ದಿವೆ.

ತಾಲೂಕಿನ ಬಹುತೇಕ ಸಾರ್ವಜನಿಕಗ್ರಂಥಾಲಯಗಳಲ್ಲಿ ಸಿಬ್ಬಂದಿಯೇ ಇಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಎಲ್ಲ ಗ್ರಂಥಾಲಯಗಳು ದುಸ್ಥಿತಿಯತ್ತ ಸಾಗಿವೆ. ಪ್ರತಿ ಗ್ರಾಪಂ ಮಟ್ಟದಲ್ಲಿ ಗ್ರಂಥಾಲಯ ಇರಬೇಕು ಎನ್ನುವ ನಿಯಮವಿದೆ. ಆದರೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಸ್ವಂತ ಕಟ್ಟಡವಿಲ್ಲದೇ ಗ್ರಂಥಾಲಯಗಳು ಇರುವ ಕುರುಹುಗಳು ಇಲ್ಲ.

ಇರುವ ಕೆಲವು ಹಳ್ಳಿಗಳಲ್ಲಿ ಯುವಕ ಮಂಡಳಿ, ಸಮುದಾಯ ಭವನ, ಶಿಥಿಲಾವಸ್ಥೆಯ ಗ್ರಾಪಂ ಕಟ್ಟಡ, ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದಿವೆ. ಆದರೆಇವುಗಳಿಗೆ ಸೌಲಭ್ಯಗಳೇ ಇಲ್ಲ. ಕುರ್ಚಿ, ಟೇಬಲ್‌, ರ್ಯಾಕ್‌ ಸರಬರಾಜು ಸ್ಥಗಿತವಾಗಿದೆ. ಇನ್ನು ಪುಸ್ತಕಗಳನ್ನಂತೂ ಕೇಳುವಂತಿಲ್ಲ. ದಿನಪತ್ರಿಕೆ, ನಿಯತಕಾಲಿಕ, ಮಾಸಿಕ ಪತ್ರಿಕೆ, ವಿವಿಧ ಮ್ಯಾಗ್‌ಜಿನ್‌ಗಳು ಹಾಗೂ ವಿವಿಧ ಪುಸ್ತಕಗಳ ಖರೀದಿಯೂ ಸ್ಥಗಿತವಾಗಿದೆ. ಬೇಡಿಕೆ ಹೆಚ್ಚಿದ ಕಡೆ ಮಾತ್ರ ಎರಡು ಪತ್ರಿಕೆ, ಎರಡು ಮ್ಯಾಗ್‌ಜಿನ್‌ ಗಳನ್ನು ತರಲಾಗುತ್ತಿದೆ. ತಾಲೂಕಿನ ಕೆಲವು ಗ್ರಾಮಗಳಲ್ಲಿ ಮಾತ್ರ ಸ್ವಂತ ಕಟ್ಟಡದಲ್ಲಿ ಗ್ರಂಥಾಲಯಗಳು ನಡೆಯುತ್ತಿವೆ.

ಸಾತನೂರ, ಕೂಡದೂರ, ಮೂಡಬೂಳ, ಯಾಗಾಪುರ, ಕೋರವಾರ, ಸನ್ನತಿ, ಪೇಠಶಿರೂರ, ಗೋಟೂರ, ತೋನಸನಳ್ಳಿ, ಭೀಮನಳ್ಳಿ, ಹೊನಗುಂಟಾ, ದಿಗ್ಗಾಂವ, ಕಂದಗೋಳ, ರಾಜಾಪುರ, ಭಂಕೂರ, ಕಲ್ಲೂರ, ಗುಂಡಗುರ್ತಿ, ಅರಣಕಲ್‌ ಗ್ರಾಮದಲ್ಲಿ ಗ್ರಂಥಾಲಯ ಕಟ್ಟಡಗಳು ನಿರ್ವಹಣೆ ಇಲ್ಲದೇ ಪಾಳು ಬಿದ್ದಿವೆ.

400 ರೂ. ಮಾಸಿಕ ವೆಚ್ಚ :  ಗ್ರಂಥಾಲಯ ನಿರ್ವಹಣೆಗೆ ಮಾಸಿಕ 400 ರೂ. ಗಳನ್ನು ಸರ್ಕಾರ ನೀಡುತ್ತಿದೆ. ಇದರಲ್ಲಿಯೇ ಸ್ಥಳೀಯ ಮಟ್ಟದ ಪತ್ರಿಕೆ, ರಾಜ್ಯ ಮಟ್ಟದ ಪತ್ರಿಕೆ, ನಿಯತಕಾಲಿಕೆಗಳನ್ನು ತರಿಸಿ ಓದುಗರಿಗೆ ನೀಡಬೇಕು. ಅಲ್ಲದೇ ವಾರ್ಷಿಕವಾಗಿ ಗ್ರಾ.ಪಂ ಬಜೆಟ್‌ನಿಂದ ಪುಸ್ತಕಗಳನ್ನು ಖರೀದಿ ಮಾಡಿ ಗ್ರಂಥಾಲಯಕ್ಕೆ ನೀಡಬೇಕು. ಗ್ರಂಥಪಾಲಕರಿಗೆ ಗೌರವ ಧನ ನೀಡಬೇಕು. ಆದರೆ ಇದು ಯಾವುದೂ ನಡೆಯುತ್ತಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಜನರ ಜ್ಞಾನ ಹೆಚ್ಚಿಸಬೇಕಾದ ಮೂಲ ಉದ್ದೇಶ ಬುಡಮೇಲಾಗಿದೆ.

ವಿವಿಧ ಪರೀಕ್ಷೆಗಳಿಗೆ ಸಂಬಂಧ ಪಟ್ಟಂತೆ ಸ್ಪರ್ಧಾತ್ಮಕ ಪುಸ್ತಕಗಳು ಗ್ರಂಥಾಲಯದಲ್ಲಿಲ್ಲ. ಇದ್ದ ಕಡೆ ಸರಿಯಾದ ನಿರ್ವಹಣೆ ಇಲ್ಲ. ಓದಿಕೊಳ್ಳಬೇಕಾದ ಪುಸ್ತಕಗಳು ಸಿಗುತ್ತಿಲ್ಲ. ಇದರಿಂದ ಗ್ರಾಮದಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಂತೋಷ ಬಿ. ಕೊಂಕನಳ್ಳಿ , ಕರವೇ ಅಧ್ಯಕ್ಷ, ತೆಂಗಳಿ

ಅಳ್ಳೋಳ್ಳಿ ಗ್ರಾಪಂನಿಂದ ಗ್ರಂಥಾಲಯಕ್ಕಾಗಿ ಎರಡು ಕೋಣೆಗಳನ್ನು ನೀಡಲಾಗಿದೆ. ಆದರೆ ಗ್ರಂಥಾಲಯ ಸಂಪೂರ್ಣ ಶಿಥಿಲಾವ್ಯವಸ್ಥೆಯಲ್ಲಿ ಇದೆ. ಮಳೆ ಬಂದರೆ ಸಾಕು ಸೋರುತ್ತದೆ. ಅದರಲ್ಲಿ ಒಂದು ಕೋಣೆ ಸಂಪೂರ್ಣ ಬಿದ್ದಿದೆ. ಇರುವ ಸಣ್ಣ ಕೋಣೆಗಳಲ್ಲಿ ಐದಾರು ಜನ ಬಂದು ಪತ್ರಿಕೆಗಳನ್ನು ಓದಿ ಹೋದ ಮೇಲೆ ಇನ್ನುಳಿದವರಿಗೆ ಅವಕಾಶ ಸಿಗುತ್ತದೆ.  ಶಿವಕುಮಾರ ಅನವಾರ್‌, ಅಳ್ಳೋಳ್ಳಿ ಗ್ರಂಥಾಲಯ ಮೇಲ್ವಿಚಾರಕ

 

-ಎಂ.ಡಿ. ಮಶಾಖ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.