ಬೆಳೆಗಳಿಗೆ ಇರಲಿದೆ ಲೋಹದ ಹಕ್ಕಿ ಗಳ ನಿಗಾ


Team Udayavani, Nov 20, 2019, 10:26 AM IST

bng-tdy-1

ಬೆಂಗಳೂರು: ಬೆಳೆಗಳ ನಿರ್ವಹಣೆಗೆ ಬಳಸುವ ಡ್ರೋನ್‌ ಹಳೆಯದಾಯ್ತು. ಈಗ ಲೋಹದ ಹಕ್ಕಿಗಳ ನೆರವಿಂದ ಬೆಳೆಗಳ ಆರೋಗ್ಯದ ಮೇಲೆ ನಿಗಾ ಇಡುವ ವ್ಯವಸ್ಥೆ ಬರುತ್ತಿದೆ!

ವಿಮಾನಗಳಲ್ಲಿ ಮಲ್ಟಿ ಸ್ಪೆಕ್ಟರಲ್‌ ಕ್ಯಾಮೆರಾಗಳನ್ನು ಅಳವಡಿಸಿ, ಜಮೀನುಗಳ ಚಿತ್ರಗಳನ್ನು ಸೆರೆಹಿಡಿ ಯುವ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ಹೀಗೆ ಸೆರೆಹಿಡಿಯುವ ಚಿತ್ರಗಳು ಡ್ರೋನ್‌ಗಿಂತ ಹೆಚ್ಚು ಮಾಹಿತಿ ಒಳಗೊಂಡಿರುತ್ತದೆ. ಜತೆಗೆ ಎತ್ತರ ದಲ್ಲಿ ಹಾರಾಟ ಮಾಡಿ ಅಲ್ಪಾವಧಿಯಲ್ಲಿ ಅಧಿಕ ಪ್ರದೇಶ ಸುತ್ತುಹಾಕಿ, ಮಾಲೀಕರಿಗೆ ವರದಿ ಒಪ್ಪಿಸಲಿದೆ.

ಡ್ರೋನ್‌ ಅಬ್ಬಬ್ಟಾ ಎಂದರೆ, ನೆಲದಿಂದ 400 ಅಡಿ ಎತ್ತರದಲ್ಲಿ ಹಾರಾಡುತ್ತದೆ. ಅದಕ್ಕಿಂತ ಎತ್ತರಕ್ಕೆ ಹೋಗಲು ಅವಕಾಶ ಇಲ್ಲ. ವಿಮಾನವು4 ಸಾವಿರ  ಅಡಿ ಎತ್ತರದವರೆಗೂ ಹಾರುತ್ತದೆ. ಹಾಗಾಗಿ, ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರದೇಶದ ಬೆಳೆಯ ನಿರ್ವಹಣೆ ಮಾಡಬಹುದು. ಇದಕ್ಕೆ ಮಲ್ಟಿ ಸ್ಪೆಕ್ಟರಲ್‌ ಕ್ಯಾಮೆರಾ ಅಳವಡಿಸಲಾಗಿರುತ್ತದೆ. ಅವುಗಳು ಭೂಮಿಯ ಮೇಲ್ಮೆಯಿಂದ ಕೇವಲ 1 ಮೀಟರ್‌ ಪಿಕ್ಸೆಲ್‌ನಲ್ಲಿ ಬೆಳೆಗಳ ಚಿತ್ರವನ್ನು ಸೆರೆಹಿಡಿದು ನಿಯಂತ್ರಣ ಕೊಠಡಿಗೆ ರವಾನಿಸುತ್ತದೆ. ಅದನ್ನು ವಿಶ್ಲೇಷಣೆ ಮಾಡಿ, ಅಗತ್ಯ ಕ್ರಮ ಕೈಗೊಳ್ಳಬ ಹುದು ಎಂದು ಅಮೆರಿಕ ಮೂಲದ ವಿರಿಡಿಸ್‌ ಆರ್‌ಎಸ್‌ ಲಿಸಂಸ್ಥಾಪಕ ಹಾಗೂ ಹಿರಿಯ ವಿಜ್ಞಾನಿ ಮಾರ್ಕ್‌ ಜಾನೆಟ್‌ ತಿಳಿಸಿದರು.

ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ 3 ದಿನಗಳ ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಮಂಗಳವಾರ “ಇಂಟೆಲಿಜೆಂಟ್‌ ಸಿಸ್ಟಮ್ಸ್‌ ಇನ್‌ ಅಗ್ರಿಕಲ್ಚರ್‌’ (ಕೃಷಿಯಲ್ಲಿ ಚತುರ ವ್ಯವಸ್ಥೆಗಳ ಪ್ರಯೋಗ) ಕುರಿತ ಗೋಷ್ಠಿಯಲ್ಲಿ ಭಾಗವಹಿಸಿ ನಂತರ “ಉದಯವಾಣಿ’ಯೊಂದಿಗೆ ಮಾತನಾಡಿದರು. ವಾರದಲ್ಲಿ 1.50 ಲಕ್ಷ ಹೆಕ್ಟೇರ್‌ ಪ್ರದೇಶದ ಕೃಷಿ ಬೆಳೆಗಳ ಚಿತ್ರಣವನ್ನು ನೀಡುವ ಸಾಮರ್ಥ್ಯವನ್ನು ಈ ವಿಮಾನ ಹೊಂದಿದೆ. ಇದೇ ಅವಧಿಯಲ್ಲಿ ಇಷ್ಟೊಂದು ಪ್ರದೇಶದ ನಿರ್ವಹಣೆಗೆ 35 ಡ್ರೋನ್‌ಗಳು ಬೇಕಾಗುತ್ತವೆ. ಸಾಮಾನ್ಯ ವಿಮಾನಗಳಿಗಿಂತ ಕೃಷಿ ನಿರ್ವಹಣೆಗಾಗಿ ಪರಿಚಯಿ ಸಿದ ಲೋಹದ ಹಕ್ಕಿಯ ವಿನ್ಯಾಸ ಭಿನ್ನವಾಗಿರುತ್ತದೆ. ಇದರ ರೆಕ್ಕೆಗಳಿಗೆ ಕ್ಯಾಮೆರಾಗಳನ್ನು ಅಳವಡಿ ಸಲಾ ಗಿರುತ್ತದೆ. ಇದರ ಹಾರಾಟಕ್ಕೆ ನಾಗರಿಕ ವಿಮಾನ ಯಾನ ಮಹಾ  ನಿರ್ದೇಶನಾಲಯದ ಅನುಮತಿ ಕಡ್ಡಾಯ. ಇದು ನಮಗೆ ಸವಾಲಾಗಿದ್ದು, ಸ್ಥಳೀಯ ಸರ್ಕಾರಗಳ ನೆರವಿನಿಂದ ಇದರ ಅನುಮತಿ ದೊರೆಯುವ ವಿಶ್ವಾಸವಿದೆ ಎಂದರು.

ಮಹಾರಾಷ್ಟ್ರ, ಗುಜರಾತ್‌ ಆಸಕ್ತಿ: “ಸಣ್ಣಹಿಡುವಳಿ ದಾ ರರಿಗೆ ಇದು ಅನುಕೂಲ ಆಗುವುದಿಲ್ಲ. ದೊಡ್ಡ ಹಿಡುವಳಿದಾರರು ಒಟ್ಟಾಗಿ ಮಾಡಬಹುದು. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್‌ ಸರ್ಕಾರಗಳು ಮುಂದೆಬಂದಿವೆ. ಯಾವ ಬೆಳೆಗಳ ನಿರ್ವಹಣೆ ಬೇಕಾದರೂ ಮಾಡಬಹುದು. ಸದ್ಯಕ್ಕೆ ಹತ್ತಿ, ದ್ರಾಕ್ಷಿ ಮತ್ತಿತರ ಬೆಳೆಗಳ ಮೇಲೆ ಪ್ರಯೋಗ ಮಾಡಲು ಚಿಂತನೆ ನಡೆದಿದೆ’ ಎಂದರು.

 

 

-ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

1-24-thursday

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

Karnataka ಉಷ್ಣ ಅಲೆ: ರಾಜ್ಯದ ಆರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Karnataka ಉಷ್ಣ ಅಲೆ: ರಾಜ್ಯದ ಆರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Prajwal Revanna ವೀಡಿಯೋ ಹೇಳಿಕೆ ನೀಡಲು ಸಂತ್ರಸ್ತೆಯರ ಹಿಂದೇಟು?

Prajwal Revanna ವೀಡಿಯೋ ಹೇಳಿಕೆ ನೀಡಲು ಸಂತ್ರಸ್ತೆಯರ ಹಿಂದೇಟು?

SUNIPL ಸನ್‌ರೈಸರ್ ಹೈದರಾಬಾದ್‌ ಎದುರಾಳಿ ರಾಜಸ್ಥಾನ್‌ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು

IPL ಸನ್‌ರೈಸರ್ ಹೈದರಾಬಾದ್‌ ಎದುರಾಳಿ ರಾಜಸ್ಥಾನ್‌ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು

SIT ವಿಚಾರಣೆಗೆ ರೇವಣ್ಣ,ಪ್ರಜ್ವಲ್‌ ಗೈರು; ನಾಳೆ ಜರ್ಮನಿಯಿಂದ ಬೆಂಗಳೂರಿಗೆ ವಾಪಸ್‌ ಸಾಧ್ಯತೆ

SIT ವಿಚಾರಣೆಗೆ ರೇವಣ್ಣ,ಪ್ರಜ್ವಲ್‌ ಗೈರು; ನಾಳೆ ಜರ್ಮನಿಯಿಂದ ಬೆಂಗಳೂರಿಗೆ ವಾಪಸ್‌ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

10

Bengaluru: ಫ್ಲೈಓವರ್‌ಗಳಲ್ಲೂ ಕಸ ಸುರಿಯುವ ವಾಹನ ಸವಾರರು 

7

Bengaluru: ಸೈಕಲ್‌ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಬಂಧನ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-thursday

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

Karnataka ಉಷ್ಣ ಅಲೆ: ರಾಜ್ಯದ ಆರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Karnataka ಉಷ್ಣ ಅಲೆ: ರಾಜ್ಯದ ಆರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Prajwal Revanna ವೀಡಿಯೋ ಹೇಳಿಕೆ ನೀಡಲು ಸಂತ್ರಸ್ತೆಯರ ಹಿಂದೇಟು?

Prajwal Revanna ವೀಡಿಯೋ ಹೇಳಿಕೆ ನೀಡಲು ಸಂತ್ರಸ್ತೆಯರ ಹಿಂದೇಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.