Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ


Team Udayavani, May 1, 2024, 2:51 PM IST

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

ಬೆಂಗಳೂರು: ನಿಮ್ಮ ಮನೆಗೆ ಯಾವ ದಿನ, ಸಮಯಗಳಲ್ಲಿ ಕಾವೇರಿ ನೀರು ಪೂರೈಕೆಯಾಗಲಿದೆ, ವ್ಯತ್ಯಯವಾಗಲಿದೆ, ಕುಡಿಯುವ ನೀರು, ಒಳಚರಂಡಿ ಸಮಸ್ಯೆಗಳ ಬಗ್ಗೆ ದೂರು ನೀಡುವುದು ಸೇರಿದಂತೆ ಜಲಮಂಡಳಿ ವ್ಯಾಪ್ತಿಯಲ್ಲಿ ಬರುವ ನೀರಿನ ವಿಚಾರಗಳ ಬಗ್ಗೆ ಇನ್ನು ಮುಂದೆ ಕುಳಿತಲ್ಲೇ ಮೊಬೈಲ್‌ ಮೂಲಕ ತಿಳಿದುಕೊಳ್ಳಬಹುದು…!

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾವೇರಿ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಫ‌ಲಾನುಭವಿಗಳಿಗೆ ಸಂಪೂರ್ಣವಾಗಿ ಮಾಹಿತಿ ನೀಡಲೆಂದೇ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಸಾಫ್ಟ್ವೇರ್‌ನ್ನು ಅಭಿವೃದ್ಧಿಪಡಿಸಿದೆ. ಪ್ರಸ್ತುತ ಈ ತಂತ್ರಜ್ಞಾನವು ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾಗಿದ್ದು, ಮೇ ತಿಂಗಳ ಮೊದಲ ವಾರದಲ್ಲಿ ಕಾರ್ಯ ರೂಪಕ್ಕೆ ಬರಲಿದೆ. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾದ ಬೆನ್ನಲ್ಲೇ ಕಾವೇರಿ ನೀರನ್ನು ಆಶ್ರಯಿಸುವವರ ಪ್ರಮಾಣ ದುಪ್ಪಟ್ಟಾಗಿದೆ. ಕಳೆದ ಒಂದೂವರೆ ತಿಂಗಳಿಂದ ತಮ್ಮ ಬಡಾವಣೆಗಳಿಗೆ ಕಾವೇರಿ ನೀರಿನ ಪೂರೈಕೆ, ವ್ಯತ್ಯಯ ಹಾಗೂ ದೂರುಗಳನ್ನು ನೀಡಲು ಸಾರ್ವಜನಿಕರು ಪರದಾಡುತ್ತಿದ್ದರು. ಈ ಸಂಗತಿ ಜಲಮಂಡಳಿ ಗಮನಕ್ಕೆ ಬಂದ ಬಳಿಕ ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ಹೊಸ ಸಾಫ್ಟ್ವೇರ್‌ ರೂಪಿಸಲಾಗಿದೆ.

ಮಾಹಿತಿ ಪಡೆದುಕೊಳ್ಳುವುದು ಹೇಗೆ?: ಜಲಮಂಡಳಿಯು ಮೇ ತಿಂಗಳ ಮೊದಲ ವಾರದಲ್ಲಿ ಈ ಸಾಫ್ಟ್ವೇರ್‌ ಬಿಡುಗಡೆಯಾಗುತ್ತಿದ್ದಂತೆ ಮೊಬೈಲ್‌ ನಂಬರ್‌ ಅನ್ನು ನೀಡಲಿದ್ದಾರೆ. ಈ ನಂಬರ್‌ಗೆ ವಾಟ್ಸ್‌ಆಪ್‌ನಲ್ಲಿ ಕೇವಲ ಹಾಯ್‌ ಎಂದು ಕಳುಹಿಸಿದರೆ ಸಾಕು. ಕ್ಷಣ ಮಾತ್ರದಲ್ಲಿ ನಿಮ್ಮ ವಾಟ್ಸ್‌ ಆ್ಯಪ್‌ಗೆ “ನಿಮ್ಮ ಬಡಾವಣೆಗೆ ಕಾವೇರಿ ನೀರಿನ ಪೂರೈಕೆ, ವ್ಯತ್ಯಯ, ಕಾವೇರಿ ನೀರಿಗೆ ಸಂಬಂಧಿಸಿದ ದೂರುಗಳು, ಕುಡಿಯುವ ನೀರು ಹಾಗೂ ಒಳಚರಂಡಿ ಸಮಸ್ಯೆ, ಜಲಮಂಡಳಿಯ ಸಂಸ್ಕರಿಸಿದ ನೀರಿನ ಖರೀದಿ, ನೀರಿನ ಸೋರಿಕೆ, ಕೊಳವೆ ಬಾವಿಗಳ ಕುರಿತ ಮಾಹಿತಿ, ಜಲಮಾಪನ, ನೀರಿನ ಬಿಲ್ಲಿನ ಸಮಸ್ಯೆ, ಒಳಚರಂಡಿಯಿಂದ ತ್ಯಾಜ್ಯ ಹೊರ ಬರುತ್ತಿರುವುದು, ನೀರು ಮತ್ತು ಒಳಚರಂಡಿ ಸಂಪರ್ಕ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆಗೆ ಪರಿವರ್ತನೆಯಲ್ಲಿ ವಿಳಂಬ ಎಂಬಿತ್ಯಾದಿ ವಿಚಾರಗಳ ಕುರಿತ 10ಕ್ಕೂ ಹೆಚ್ಚಿನ ಆಯ್ಕೆಗಳಿರುವ ಸಂದೇಶಗಳು ನಿಮ್ಮ ವಾಟ್ಸ್‌ ಆ್ಯಪ್‌ಗೆ ಬರಲಿವೆ.

ನೀವು ಮಾಹಿತಿ ಪಡೆಯಲು ಇಚ್ಛಿಸುವ ವಿಚಾರಗಳ ಪಕ್ಕದಲ್ಲಿರುವ ನಂಬರ್‌ ಅನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳಿಸಿದರೆ ಕೆಲ ಸೆಕೆಂಡ್‌ಗಳಲ್ಲಿ ಅದಕ್ಕೆ ಪೂರಕವಾದ ಸಂಪೂರ್ಣ ಮಾಹಿತಿ ನಿಮ್ಮ ವಾಟ್ಸ್‌ಆ್ಯಪ್‌ಗೆ ಜಲಮಂಡಳಿ ಕಳುಹಿಸಲಿದೆ. ಉದಾಹರಣೆಗೆ ಕಾವೇರಿ ನೀರು ಪೂರೈಕೆ ಎಂಬ ಆಯ್ಕೆಯ ನಂಬರ್‌ ಪ್ರಸ್‌ ಮಾಡಿ, ನಿಮ್ಮ ಬಡಾವಣೆ ಹೆಸರು ಉಲ್ಲೇಖೀಸಿದರೆ ಇಂತಹ ವಾರಗಳಂದು, ಇಷ್ಟು ಸಮಯದಲ್ಲಿ ನಿಮ್ಮ ಬಡಾವಣೆಗೆ ಕಾವೇರಿ ನೀರು ಪೂರೈಕೆಯಾಗಲಿದೆ ಎಂಬ ವಿವರಗಳನ್ನು ಈ ಎಐ ತಂತ್ರಜ್ಞಾನ ನೀಡಲಿದೆ.

ದೂರುಗಳ ಸಮರ್ಪಕ ನಿರ್ವಹಣೆಗೆ ಕ್ರಮ: ಜಲಮಂಡಳಿ ನೀರಿನ ಪೂರೈಕೆ ಸಂಬಂಧಿತ ದೂರುಗಳನ್ನು ಹೊಸ ಸಾಫ್ಟ್ವೇರ್‌ ಮೂಲಕ ನೀಡಿದರೆ ಜಲಮಂಡಳಿಯ ಎಂಜಿನಿಯರ್‌ಗಳು, ಸಿಬ್ಬಂದಿ ಕೂಡಲೇ ಸ್ಪಂದಿಸಲಿದ್ದಾರೆ. ಅಲ್ಲದೆ, ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯಗುವ ಆಯಾ ಬಡಾವಣೆ ನಿವಾಸಿಗಳಿಗೆ ಈ ಸಾಫ್ಟ್ವೇರ್‌ ಮೂಲಕ ಜಲಮಂಡಳಿಯೇ ಮಾಹಿತಿ ಒದಗಿಸಲಿದೆ. ಸಮಯಕ್ಕೆ ಸರಿಯಾಗಿ ನೀರಿನ ಸಮಸ್ಯೆ ನೀಗಿಸಲು, ಸಾರ್ವಜನಿಕರಿಗೆ ನೀರಿನ ಸೌಲಭ್ಯಗಳ ಬಗ್ಗೆ ಅಧಿಕೃತವಾಗಿ ಮಾಹಿತಿ ಪಡೆದುಕೊಳ್ಳಲು ಈ ಸಾಫ್ಟ್ ವೇರ್‌ ಸಹಕಾರಿಯಾಗಿದೆ.

ಪ್ರತಿದಿನ ಕಾವೇರಿ ಮೂಲದಿಂದ ಬೆಂಗಳೂರಿಗೆ 1,470 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದ್ದು, 10.64 ಲಕ್ಷ ಸಂಪರ್ಕಗಳಿವೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಜಲಮಂಡಳಿಯಿಂದಲೇ ಸಾಫ್ಟ್ವೇರ್‌ ನಿರ್ವಹಣೆ :

ಹೊಸ ಸಾಫ್ಟ್ವೇರ್‌ ಅನ್ನು ಜಲಮಂಡಳಿಯ ಐಟಿ ವಿಭಾಗವು ನಿರ್ವಹಣೆ ಮಾಡಲಿದೆ. ವಾಟ್ಸ್‌ಆ್ಯಪ್‌ ಚಾಟ್‌ಬಾಟ್‌ ಮಾದರಿಯಲ್ಲಿ ಸಾಫ್ಟ್ವೇರ್‌ ಕಾರ್ಯ ನಿರ್ವಹಿಸಲಿದೆ. ಈ ವ್ಯವಸ್ಥೆ ವಿನ್ಯಾಸಗೊಳಿಸುವ (ಡಿಸೈನ್‌) ಜವಾಬ್ದಾರಿಯನ್ನು ಖಾಸಗಿ ಸಾಫ್ಟ್ವೇರ್‌ ಕಂಪನಿಯೊಂದಕ್ಕೆ ನೀಡಲಾಗಿತ್ತು. ಈಗಾಗಲೇ ವಿನ್ಯಾಸ ಪ್ರಕ್ರಿಯೆಯು ಮುಗಿದು ಇದನ್ನು ನಿರ್ವಹಣೆ ಮಾಡುವ ಬಗ್ಗೆ ಸಾಫ್ಟ್ವೇರ್‌ ಕಂಪನಿಯು ಜಲಮಂಡಳಿ ಐಟಿ ವಿಭಾಗಕ್ಕೆ ಮಾಹಿತಿ ನೀಡಿದೆ. ಆದರೆ, ನೂತನ ಸಾಫ್ಟ್ವೇರ್‌ಗೆ ಅಧಿಕೃತವಾಗಿ ಹೆಸರಿಡಬೇಕಿದೆ.

ಕಾವೇರಿ ನೀರಿನ ವಿಚಾರಕ್ಕೆ ಸಂಬಂಧಿಸಿದ ಮಾಹಿತಿ ಪಡೆಯು ವುದು, ದೂರು ನೀಡುವ ಬಗ್ಗೆ ಬೆಂಗ ಳೂರಿನ ನಾಗರಿಕರಿಗೆ ಗೊಂದಲಗಳಿದ್ದರೆ ಈ ಸಾಫ್ಟ್ವೇರ್‌ ಸದ್ಬಳಕೆ ಮಾಡಿ ಕೊಳ್ಳಬಹುದು. ಮೇ ಮೊದಲ ವಾರದಲ್ಲಿ ಇದಕ್ಕೆ ಚಾಲನೆ ಸಿಗಲಿದೆ. ಕುಂದು ಕೊರತೆ ನಿವಾರಿಸಲು ಜಲಮಂಡಳಿ ಸದಾ ಸಿದ್ಧ.-ಡಾ.ರಾಮ್‌ ಪ್ರಸಾತ್‌ ಮನೋಹರ್‌, ಅಧ್ಯಕ್ಷ, ಜಲಮಂಡಳಿ

-ಅವಿನಾಶ್‌ ಮೂಡಂಬಿಕಾನ

ಟಾಪ್ ನ್ಯೂಸ್

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

IPL Eliminator match between RCB and RR

IPL 2024: ರಾಜಸ್ಥಾನಕ್ಕೆ ಬಿಸಿ ಮುಟ್ಟಿಸುವ ತವಕದಲ್ಲಿ ಆರ್‌ಸಿಬಿ

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Dina Bhavishya

ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಆಪ್ತರಿಂದ ಸಕಾಲದಲ್ಲಿ ಸ್ಪಂದನ

NIA Raid ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನಲ್ಲಿ ವೈದ್ಯ ವಶಕ್ಕೆ

NIA Raid ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನಲ್ಲಿ ವೈದ್ಯ ವಶಕ್ಕೆ

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

IPL Eliminator match between RCB and RR

IPL 2024: ರಾಜಸ್ಥಾನಕ್ಕೆ ಬಿಸಿ ಮುಟ್ಟಿಸುವ ತವಕದಲ್ಲಿ ಆರ್‌ಸಿಬಿ

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Dina Bhavishya

ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಆಪ್ತರಿಂದ ಸಕಾಲದಲ್ಲಿ ಸ್ಪಂದನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.