ಮೀನುಗಾರನಿಗೆ ಎದೆನೋವು: ರಕ್ಷಣೆ
Team Udayavani, Nov 24, 2019, 12:47 AM IST
ಸಾಂದರ್ಭಿಕ ಚಿತ್ರ
ಪಣಂಬೂರು/ಮಲ್ಪೆ: ಮಲ್ಪೆಯಿಂದ 8.5 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬೋಟ್ನಲ್ಲಿದ್ದ ಮೀನುಗಾರನಿಗೆ ಎದೆನೋವು ಕಾಣಿಸಿದ್ದು, ಮಾಹಿತಿ ಪಡೆದ ಕರಾವಳಿ ಕಾವಲು ಪೊಲೀಸ್ ಪಡೆ ತುರ್ತು ರಕ್ಷಣೆಗೆ ಧಾವಿಸಿ, ರಕ್ಷಿಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದೆ.
ಚಬೆಳಗ್ಗೆ ಮಂಗಳೂರಿನಿಂದ ಮಲ್ಪೆ ಕಡೆಗೆ ಮೀನುಗಾರಿಕೆ ತೆರಳಿತ್ತು. ಬೋಟ್ನಲ್ಲಿದ್ದ ಮೀನುಗಾರ ರೂಪೇಶ್ (45) ಎಂಬವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿತ್ತು. ತತ್ಕ್ಷಣ ಬೋಟ್ನಲ್ಲಿದ್ದ ಮೀನುಗಾರರು ಕರಾವಳಿ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದರು.
ಮಲ್ಪೆ ಠಾಣೆ ಕರಾವಳಿ ಕಾವಲು ಪೊಲೀಸರು ಇಲಾಖೆಯ ಬೋಟ್ ಬಳಿಗೆ ತೆರಳಿ ತಮ್ಮ ಬೋಟ್ನಲ್ಲಿ ದಡ ಸೇರಿಸಿದ್ದಾರೆ. ಬಳಿಕ ಅವರನ್ನು ಪೊಲೀಸ್ ಹೈವೇ ಮೊಬೈಲ್ ವಾಹನದಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಕರಾವಳಿ ಕಾವಲು ಪೊಲೀಸ್ ಮಲ್ಪೆ ಠಾಣೆ ಎಎಸ್ಐ ಗೋಪಾಲ ನಾಯ್ಕ, ಸಿಬಂದಿ ರಮೇಶ್, ಬೋಟ್ನ ಕ್ಯಾಪ್ಟನ್ ಮಲ್ಲಿಕಾರ್ಜುನ, ಪೊಲೀಸ್ ನಿರೀಕ್ಷಕ ರಾಘವೇಂದ್ರ ಕಂಡಿಕೆ, ಪಿಎಸ್ಐ ಗಜೇಂದ್ರ, ಎಎಸ್ಐಗಳಾದ ಉಮೇಶ್ ಜೋಗಿ, ಮೋನಾ ಪೂಜಾರಿ, ಸಿಬಂದಿ ಶ್ರೀಧರ್, ಮೀನುಗಾರ ಸುಂದರ್ರಾಜ್ ರಕ್ಷಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು