ಚುನಾವಣೆ ಮರೆತು ನಗರದಲ್ಲಿ ಸೈಕಲ್ ತುಳಿಯುತ್ತಿರುವ ಶಾಸಕ ಯತ್ನಾಳ!
Team Udayavani, Nov 24, 2019, 1:13 PM IST
ವಿಜಯಪುರ: ನೆರೆಯ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆ ಕಾವು ಇದ್ದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಯುವಕರೊಂದಿಗೆ ಸೈಕಲ್ ತುಳಿಯುತ್ತಿದ್ದಾರೆ.
ಪಕ್ಕದ ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ, ಗೋಕಾಕ ವಿಧಾನಸಭೆ ಕ್ಷೇತ್ರದಲ್ಲಿ ಉಪ ಚುನಾವಣೆ ಕಾವು ಜೋರಾಗಿದೆ. ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗುವಂತೆ ಸಿ.ಎಂ. ಯಡಿಯೂರಪ್ಪ ಎಲ್ಲ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಗರದಲ್ಲಿ ಯುವಕರೊಂದಿಗೆ ಸೈಕಲ್ ಸವಾರಿ ನಡೆಸಿದ್ದಾರೆ.
ಪರಿಸರ ಜಾಗೃತಿಗಾಗಿ ಕಳೆದ ಕೆಲ ತಿಂಗಳಿಂದ ಸೈಕಲ್ ಸವಾರಿ ಆರಂಭಿಸಿರುವ ಡಾ.ಮಹಾಂತೇಶ ಬಿರಾದಾರ ನೇತೃತ್ವದ ತಂಡಕ್ಕೆ ಸ್ಫೂರ್ತಿ ನೀಡಲು ಶಾಸಕ ಯತ್ನಾಳ, ತಾವೂ ಸೈಕಲ್ ಸವಾರಿ ನಡೆಸಿದರು.
ಐತಿಹಾಸಿಕ ಗೋಲಗುಮ್ಮಟ ಸ್ಮಾರಕ ಆವರಣದಿಂದ ಆರಂಭಗೊಂಡು ನಗರದ ವಿವಿಧ ಪ್ರದೇಶದಲ್ಲಿ ಸೈಕಲ್ ತುಳಿಯುತ್ತ ಸಾಗಿ, ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ದಲ್ಲಿ ಮುಕ್ತಾಯ ಕಂಡಿತು.
ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಸ್ವಾಮಿ ವಿವೇಕಾನಂದ ಸಂಸ್ಥೆಯ ರಾಘವ ಅಣ್ಣಿಗೇರಿ ಸೇರಿದಂತೆ ನೂರಾರು ಯುವಕರು ಸೈಕಲ್ ತುಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ram Mandir ಆಯ್ತು ಈಗ ಬಿಜೆಪಿ ಸೀತಾ ದೇಗುಲ ಭರವಸೆ!
ಸುಳ್ಳು ವರದಕ್ಷಿಣೆ ಪ್ರಕರಣ ತಡೆಗೆ ಮದುವೆಯಲ್ಲಿ ದೊರೆತ ಉಡುಗೊರೆ ಪಟ್ಟಿ ಇರಿಸಿಕೊಳ್ಳಿ
Naxal ಶರಣಾದರೆ ಸರಕಾರದಿಂದ ಪ್ರೋತ್ಸಾಹ: ಡಾ| ಬಂಜಗೆರೆ ಜಯಪ್ರಕಾಶ್
India vs South Africa: 48 ವರ್ಷಗಳ ಬಳಿಕ ಚೆನ್ನೈಯಲ್ಲಿ ಮಹಿಳಾ ಟೆಸ್ಟ್ ಪಂದ್ಯ ಆಯೋಜನೆ
Anjali ಹತ್ಯೆ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ವಶಕ್ಕೆ