ರಿಲಯನ್ಸ್‌ ಇಂಡಸ್ಟ್ರೀಸ್‌ ಹೊಸ ಮೈಲುಗಲ್ಲು


Team Udayavani, Nov 28, 2019, 8:09 PM IST

reliance

– 10 ಲಕ್ಷ ಕೋಟಿ ರೂ. ದಾಟಿದ ಮಾರುಕಟ್ಟೆ ಮೌಲ್ಯ
– ಈ ಸಾಧನೆಗೈದ ಭಾರತದ ಮೊದಲ ಕಂಪನಿ ಎಂಬ ಖ್ಯಾತಿಋ
– 1,579.95 ರೂ.ಗೆ ತಲುಪಿದ ರಿಲಯನ್ಸ್‌ ಷೇರು ದರ

ನವದೆಹಲಿ: ಉದ್ಯಮಿ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ಹೊಸ ದಾಖಲೆ ಸೃಷ್ಟಿಸಿದೆ. 10 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿರುವ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ರಿಲಯನ್ಸ್‌ ಪಾತ್ರವಾಗಿದೆ. ಗುರುವಾರದ ಷೇರು ಮಾರುಕಟ್ಟೆಯ ವಹಿವಾಟಿನಲ್ಲಿ ಕಂಪನಿಯ ಷೇರು ಮೌಲ್ಯ ಏರಿದ ಬೆನ್ನಲ್ಲೇ ಕಂಪನಿಗೆ ಇಂಥದ್ದೊಂದು ಗರಿಮೆ ದೊರೆತಿದೆ.

ತೈಲದಿಂದ ದೂರಸಂಪರ್ಕದವರೆಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ನ ಷೇರು ಮೌಲ್ಯ ಮುಂಬೈ ಷೇರುಪೇಟೆಯಲ್ಲಿ ಗುರುವಾರ 10,01,555.42 ಕೋಟಿ ರೂ.ಗೆ ತಲುಪಿತು. ಕಂಪನಿಯ ಷೇರು ಶೇ.0.65ರಷ್ಟು ಏರಿಕೆ ಕಂಡಿದ್ದು, ಒಂದು ಷೇರಿನ ಮೌಲ್ಯ 1,579.95 ರೂ.ಗೆ ತಲುಪಿತು. ನಿಫ್ಟಿಯಲ್ಲಿ ಇದರ ಮೌಲ್ಯ 1,582 ರೂ. ಆಗಿತ್ತು. ಗುರುವಾರ ಒಂದೇ ದಿನ ಬಿಎಸ್‌ಇನಲ್ಲಿ ರಿಲಯನ್ಸ್‌ನ 2.73 ಲಕ್ಷ ಷೇರುಗಳನ್ನು ಹೂಡಿಕೆದಾರರು ಖರೀದಿಸಿದರೆ, ಎನ್‌ಎಸ್‌ಇನಲ್ಲಿ ಸುಮಾರು 62 ಲಕ್ಷ ಷೇರುಗಳ ಖರೀದಿ ನಡೆದಿದೆ.

ಈ ಮೂಲಕ ರಿಲಯನ್ಸ್‌ ಕಂಪನಿಯು ಈಗ ಎಷ್ಟು ದೈತ್ಯವಾಗಿ ಹೊರಹೊಮ್ಮಿದೆಯೆಂದರೆ, ಇದರ ಮಾರುಕಟ್ಟೆ ಮೌಲ್ಯವು ನಿಫ್ಟಿಯಲ್ಲಿ ಲಿಸ್ಟ್‌ ಆಗಿರುವ 19 ಕಂಪನಿಗಳು ಅಥವಾ ಸರ್ಕಾರಿ ಸ್ವಾಮ್ಯದ 35 ಕಂಪನಿಗಳು, ಬ್ಯಾಂಕುಗಳಿಗೆ ಸಮನಾಗಿವೆ.

ಮುಕೇಶ್‌ ಈಗ ಜಗತ್ತಿನ 12ನೇ ಸಿರಿವಂತ
ಈ ವರ್ಷವೇ ಮುಕೇಶ್‌ ಅಂಬಾನಿ ಅವರ ಆಸ್ತಿಯಲ್ಲಿ 13.70 ಬಿಲಿಯನ್‌ ಡಾಲರ್‌ ಏರಿಕೆಯಾಗಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ರಿಲಾಯನ್ಸ್‌ ಷೇರುಗಳ ಮೌಲ್ಯ ಹೆಚ್ಚಾಗಿದ್ದರಿಂದ ಆಸ್ತಿ ಮೌಲ್ಯವೂ ಹೆಚ್ಚಾಗುತ್ತಿದೆ. ಈಚೆಗಷ್ಟೇ ಬಿಡುಗಡೆಯಾದ ಬ್ಲೂಮಬರ್ಗ್‌ ಬಿಲಿಯನೇರ್‌ ಇಂಡೆಕ್ಸ್‌ನಲ್ಲಿ 14ನೇ ಸ್ಥಾನದಲ್ಲಿದ್ದ ಮುಕೇಶ್‌ ಅಂಬಾನಿ ಈಗ 12ನೇ ಸ್ಥಾನಕ್ಕೇರಿದ್ದಾರೆ. ಈಗ ಅವರ ಒಟ್ಟಾರೆ ಆಸ್ತಿ ಮೌಲ್ಯ 61.50 ಬಿಲಿಯನ್‌ ಡಾಲರ್‌.

ಕಾರಣ ಏನಿರಬಹುದು?
ಕಂಪನಿಯ ಸಾಲ ಕಡಿತ ಯೋಜನೆ, ಸದ್ಯದಲ್ಲೇ ಜಾರಿಯಾಗಲಿರುವ ಸೇವಾ ಶುಲ್ಕ ಏರಿಕೆ ಮತ್ತು ಗ್ರಾಹಕ ವ್ಯವಹಾರದತ್ತ ಹೆಚ್ಚಿನ ಗಮನ ನೆಟ್ಟಿರುವುದು ರಿಲಯನ್ಸ್‌ ಷೇರು ಮೌಲ್ಯ ಹೆಚ್ಚಲು ಕಾರಣ ಎಂದು ವಿಶ್ಲೇಷಿಸಲಾಗಿದೆ. ಚಿಲ್ಲರೆ ವಹಿವಾಟಿನಲ್ಲಿ ಕಂಪನಿಯ ಆದಾಯ ಕಳೆದ 6 ವರ್ಷಗಳಲ್ಲಿ 7 ಪಟ್ಟು ಮತ್ತು ಲಾಭದ ಪ್ರಮಾಣ 14 ಪಟ್ಟು ಹೆಚ್ಚಳವಾಗಿದೆ. ಇನ್ನು ಜಿಯೋ ದೇಶದ ಅತಿದೊಡ್ಡ ದೂರಸಂಪರ್ಕ ಸೇವಾದಾರ ಕಂಪನಿಯಾಗಿ ಹೊರಹೊಮ್ಮಿದ್ದು, ಪ್ರತಿ ತಿಂಗಳು 1 ಕೋಟಿ ಹೊಸ ಗ್ರಾಹಕರು ಜಿಯೋಗೆ ಸೇರ್ಪಡೆಯಾಗುತ್ತಿದ್ದಾರೆ. ಸದ್ಯದಲ್ಲೇ ಜಿಯೋ ಸೇವಾ ಶುಲ್ಕ ಹೆಚ್ಚಳ ಮಾಡುವುದಾಗಿಯೂ ಘೋಷಿಸಿದೆ. ಇದಲ್ಲದೇ ಇತರೆ ಕ್ಷೇತ್ರಗಳಲ್ಲೂ ಕಂಪನಿಯು ತನ್ನದೇ ಆದ ಛಾಪು ಮೂಡಿಸಿದೆ.

– 2018ರ ಆಗಸ್ಟ್‌- 8 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆ

– 2019ರ ಅಕ್ಟೋಬರ್‌- 9 ಲಕ್ಷ ಕೋಟಿ ರೂ. ತಲುಪಿದ ರಿಲಯನ್ಸ್‌ ಇಂಡಸ್ಟ್ರೀಸ್‌ ಮಾರುಕಟ್ಟೆ ಮೌಲ್ಯ

– 2019 ನವೆಂಬರ್‌ – 10 ಲಕ್ಷ ಕೋಟಿ ರೂ. ಎಂ-ಕ್ಯಾಪ್‌ ಹೊಂದಿದ ದೇಶದ ಮೊದಲ ಕಂಪನಿ ಎಂಬ ಖ್ಯಾತಿ

ಎಂ-ಕ್ಯಾಪ್‌ ಯಾರದ್ದು ಹೆಚ್ಚು?
1. ರಿಲಯನ್ಸ್‌ ಇಂಡಸ್ಟ್ರೀಸ್‌- 10 ಲಕ್ಷ ಕೋಟಿ ರೂ.
2. ಟಿಸಿಎಸ್‌- 7.79 ಲಕ್ಷ ಕೋಟಿ ರೂ.
3. ಎಚ್‌ಡಿಎಫ್ಸಿ ಬ್ಯಾಂಕ್‌- 6.92 ಲಕ್ಷ ಕೋಟಿ ರೂ.
4. ಹಿಂದುಸ್ಥಾನ್‌ ಯುನಿಲಿವರ್‌ – 4.51 ಲಕ್ಷ ಕೋಟಿ ರೂ.
(ಪ್ರತಿ ದಿನದ ಷೇರು ದರದ ಏರಿಳಿತದ ಆಧಾರದಲ್ಲಿ ಕಂಪನಿಗಳ ಎಂ-ಕ್ಯಾಪ್‌ ಅಂಕಿಅಂಶಗಳು ಬದಲಾಗುತ್ತಿರುತ್ತವೆ)

ಸೆನ್ಸೆಕ್ಸ್‌ ದಾಖಲೆಯ ಓಟ ಮುಂದುವರಿಕೆ
ರಿಲಯನ್ಸ್‌ ಇಂಡಸ್ಟ್ರೀಸ್‌ ಹಾಗೂ ಐಸಿಐಸಿಐ ಬ್ಯಾಂಕ್‌ನ ಷೇರು ಮೌಲ್ಯ ವೃದ್ಧಿಸುತ್ತಲೇ ಮುಂಬೈ ಷೇರುಪೇಟೆ ಸತತ 2ನೇ ದಿನವೂ ನಾಗಾಲೋಟ ಮುಂದುವರಿಸಿದ್ದು, ಮತ್ತೆ ಸಾರ್ವಕಾಲಿಕ ದಾಖಲೆ ಬರೆದಿದೆ. ಷೇರು ಖರೀದಿಯು ಭರದಿಂದ ಸಾಗಿದ ಪರಿಣಾಮ ಗುರುವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 109 ಅಂಕ ಏರಿಕೆ ಕಂಡು, 41,130ರಲ್ಲಿ ವಹಿವಾಟು ಅಂತ್ಯಗೊಳಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿತು. ನಿಫ್ಟಿ ಕೂಡ 50 ಅಂಕ ಏರಿಕೆ ದಾಖಲಿಸಿ, 12,151ರಲ್ಲಿ ಕೊನೆಗೊಂಡಿತು. ಇಂಡಸ್‌ಇಂಡ್‌ ಬ್ಯಾಂಕ್‌ ಷೇರುಗಳು ಶೇ.2.68 ಹಾಗೂ ಐಸಿಐಸಿಐ ಬ್ಯಾಂಕ್‌ ಷೇರುಗಳು ಶೇ.2.68ರಷ್ಟು ಏರಿಕೆ ಕಂಡವು.

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.