ವಿಸ್ಮಯ ಮೂಡಿಸಿದ ಒಂಭತ್ತು ಕವಲಿನ ಅಡಕೆ ಮರ!


Team Udayavani, Nov 30, 2019, 3:50 PM IST

30-November-19

ಶಿವಮೊಗ್ಗ: ಪ್ರಕೃತಿಯು ತನ್ನ ಮಡಿಲೊಳಗೆ ಹತ್ತು ಹಲವು ಕುತೂಹಲವನ್ನು ಹುದಿಗಿಟ್ಟುಕೊಂಡಿದೆ. ಕೆಲವೊಮ್ಮೆ ವಿಚಿತ್ರಗಳನ್ನು ತೋರಿಸುತ್ತದೆ. ಹೌದು, ಆಗಾಗ ಪ್ರಕೃತಿಯಲ್ಲಿ ಅಲ್ಲೊಂದು ಇಲ್ಲೊಂದು ವಿಸ್ಮಯಗಳು ಕಾಣಸಿಗುತ್ತವೆ. ಅಂಥದ್ದೇ ಒಂದು ವಿಸ್ಮಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದಲ್ಲಿ ನಡೆದಿದೆ. ಹೌದು ಇಂಥ ವಿಸ್ಮಯಕ್ಕೆ ಕಾರಣವಾಗಿರುವ ಅಪರೂಪದ ಅಡಕೆ ಮರ. ಅಡಕೆ ಮರದಲ್ಲಿ ಎಂಥ ವಿಶೇಷವಿದೆ ಎಂಬ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಭದ್ರಾವತಿ ತಾಲೂಕು ಎಮ್ಮೆಹಟ್ಟಿ ಗ್ರಾಮದ ಮಂಜಪ್ಪ ಅವರ ತೋಟದಲ್ಲಿರುವ 18 ವರ್ಷದ ಅಡಕೆ ಮರ ಎಲ್ಲ ಮರಗಳಂತೆ ಸಾಮಾನ್ಯವಾಗಿಲ್ಲ. ಈ ಮರದ ಬುಡ ಒಂದಾದರೆ ತಲೆ ಮೇಲೆ ಒಂಭತ್ತು ಸುಳಿಗಳಿವೆ. ಇಂಥ ಅಪರೂಪದ ಅಡಕೆ ಮರ ಇದೀಗ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಹತ್ತು ವರ್ಷದವರೆಗೆ ಈ ಅಡಕೆ ಮರವೂ ಎಲ್ಲ ಅಡಕೆ ಮರಗಳಂತೆಯೇ ಇತ್ತು. ಹತ್ತು ವರ್ಷವಾದ ಬಳಿಕ ಆರಂಭದಲ್ಲಿ ಮೊದಲಿಗೆ ಅಡಕೆ ಮರದ ತುದಿಯಲ್ಲಿ ಒಂದು ರೆಂಬೆ ಕವಲೊಡೆಯಿತು. ಬಳಿಕ ಹೀಗೆಯೇ ಒಂಭತ್ತು ಕವಲುಗಳು ಒಡೆದು ಒಂಭತ್ತು ಸುಳಿಗಳು ಬಂದಿವೆ. ಕೇವಲ ಸುಳಿಗಳು ಬಂದಿರುವುದು ಮಾತ್ರವಲ್ಲ, ಎಲ್ಲ ಸುಳಿಗಳಲ್ಲಿಯೂ ಅಡಕೆ ಗೊನೆಗಳು ಬಂದಿರುವುದು ವಿಶೇಷ. ಜೊತೆಗೆ ಮತ್ತೆ ಮತ್ತೆ ರೆಂಬೆ ಕವಲುಗಳು ಒಡೆಯುತ್ತಲೇ ಇವೆ.

ಆರಂಭದಲ್ಲಿ ಒಂದೇ ಅಡಕೆ ಮರದಲ್ಲಿ ರೆಂಬೆಯ ಕವಲುಗಳು ಒಡೆಯಲಾರಂಭಿಸಿದಾಗ ತೋಟದ ಮಾಲೀಕ ಮಂಜಪ್ಪ ಹೆದರಿಕೊಂಡಿದ್ದರು. ಅಡಕೆ ಮರ ಸತ್ತು ಹೋಗುತ್ತದೆಯೇನೋ ಎಂದು ಭಾವಿಸಿದ್ದರು. ಆದರೆ ಎಲ್ಲ ಕವಲುಗಳಲ್ಲಿಯೂ ಅಡಕೆ ಫಸಲುಗಳು ಬರುತ್ತಿರುವುದರಿಂದ ಇದೀಗ ಮಂಜಪ್ಪ ಹೆಚ್ಚು ಖುಷಿ ಪಡುತ್ತಿದ್ದಾರೆ. ಈ ವಿಚಿತ್ರವಾದ ಅಡಕೆ ಮರದಲ್ಲಿ ನಾಲ್ಕು ಅಡಕೆ ಮರಗಳಲ್ಲಿ ಬರುವಷ್ಟು ಫಸಲು ಬರುತ್ತಿದೆ. ಇಂಥ ಅಡಕೆ ಮರಗಳಿರುವ ಒಂದು ಎಕರೆ ಅಡಕೆ ತೋಟವಿದ್ದರೆ ನಾಲ್ಕೈದು ಎಕರೆ ಜಾಗದಲ್ಲಿ ಬೆಳೆಯುವಷ್ಟು ಅಡಕೆಯನ್ನು ಬೆಳೆಯಬಹುದು ಎಂದು ಜನ ಮಾತನಾಡುತ್ತಿದ್ದಾರೆ.

ಒಂಭತ್ತಕ್ಕೂ ಹೆಚ್ಚು ಸುಳಿಗಳಿರುವ ಅಡಕೆ ಮರ ಇದೀಗ ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಹೀಗೆ ಅಡಕೆ ಮರವೊಂದರಲ್ಲಿ ದಿನೇ ದಿನೇ ಕವಲುಗಳು ಒಡೆದು ಹೆಚ್ಚುವರಿ ಸುಳಿಗಳು ಬರುತ್ತಿರುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಸಸ್ಯಶಾಸ್ತ್ರ ವಿಭಾಗದ ವಿಜ್ಞಾನಿಗಳು ಸಂಶೋಧನೆ ನಡೆಸಬೇಕು ಎಂಬುದು ಜನರ ಒತ್ತಾಯವಾಗಿದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.