ಕಾರಂತರ ಹುಟ್ಟೂರಲ್ಲೇ “ಮೂಕಜ್ಜಿ…’ಗೆ ನೀರಸ ಪ್ರತಿಕ್ರಿಯೆ; ನಿರ್ದೇಶಕ ಶೇಷಾದ್ರಿ ಬೇಸರ


Team Udayavani, Dec 1, 2019, 5:10 AM IST

mookajjiya-kanasugalu

ಕುಂದಾಪುರ/ಉಡುಪಿ/ ಮಂಗಳೂರು: ಡಾ| ಶಿವರಾಮ ಕಾರಂತರ ಕಾದಂಬರಿ ಆಧಾರಿತ “ಮೂಕಜ್ಜಿಯ ಕನಸುಗಳು’ ಚಿತ್ರಕ್ಕೆ ಬೆಂಗಳೂರು ಮೊದಲಾದೆಡೆ ಉತ್ತಮ ಸ್ಪಂದನೆ ಲಭಿಸಿದೆ. ಆದರೆ ಕಾರಂತರ ಹುಟ್ಟೂರಿನಲ್ಲಿ, ಪ್ರಾದೇಶಿಕ ಭಾಷೆಯಲ್ಲೇ ಚಿತ್ರೀಕರಿಸಿರುವ ಈ ಚಿತ್ರಕ್ಕೆ ಕುಂದಾಪುರದಲ್ಲಿ ಮಾತ್ರ ಉತ್ತಮ ಪ್ರತಿಕ್ರಿಯೆ ಸಿಗದಿರುವುದು ಬೇಸರ ತಂದಿದೆ ಎಂದು ಚಿತ್ರದ ನಿರ್ದೇಶಕ ಪಿ. ಶೇಷಾದ್ರಿ ಬೇಸರ ವ್ಯಕ್ತಪಡಿಸಿದ್ದಾರೆ.

ಕುಂದಾಪುರದ ವಿನಾಯಕ ಚಿತ್ರಮಂದಿರದಲ್ಲಿ ಮತ್ತು ಮಣಿಪಾಲದ ಕೆನರಾ ಮಾಲ್‌ನ ಭಾರತ್‌ ಸಿನೆಮಾಸ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ರೀತಿಯ ಅನುಭವಗಳು ಕಲಾ ಚಿತ್ರ ಮಾಡುವಾಗ ಸಾಮಾನ್ಯ. ಆದರೆ ಇಲ್ಲಿರುವ ಲಕ್ಷಕ್ಕೂ ಮಿಕ್ಕಿ ಜನರಲ್ಲಿ ಶೇ. 10ರಷ್ಟು ಮಂದಿ ಚಿತ್ರ ವೀಕ್ಷಿಸಿದರೂ ಆ ಚಿತ್ರ ಗೆದ್ದಂತೆ. ಚಿತ್ರ ಲಾಭ ಗಳಿಸದಿದ್ದರೂ ನಿರ್ಮಾಪಕರು ಹಾಕಿದ ಹಣವಾದರೂ ಸಿಗುವಂತಾಗಲಿ ಎಂದವರು ಹೇಳಿದರು.

50ರ ಸಂಭ್ರಮ ಯಾರಲ್ಲೂ ಇಲ್ಲ!
ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿ ರಚನೆಯಾಗಿ ಈಗ ಸುವರ್ಣ ಸಂಭ್ರಮ. ನಾವೆಲ್ಲ ಇದನ್ನು ಸಂಭ್ರಮಿಸಬೇಕಿತ್ತು. ಸರಕಾರದಲ್ಲಾಗಲೀ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಾಗಲೀ ಸಾಹಿತ್ಯ ಲೋಕದಲ್ಲಾಗಲೀ ಸಾರ್ವಜನಿಕರಲ್ಲಾಗಲೀ ಯಾರಲ್ಲೂ ಈ ಸಂಭ್ರಮವೇ ಕಾಣುತ್ತಿಲ್ಲ. ಈ ಕಾರಣಕ್ಕಾಗಿಯೇ ಇದನ್ನೊಂದು ದೃಶ್ಯ ರೂಪದಲ್ಲಿ ತೆರೆಗೆ ತಂದಿದ್ದೇನೆ. ಈ ಸಂಭ್ರಮ ಐದೇ ದಿನಗಳಲ್ಲಿ ಮುಗಿಯುವ ಹಂತಕ್ಕೆ ತಲುಪದಿರಲಿ ಎಂದು ಶೇಷಾದ್ರಿ ಹೇಳಿದರು.

ಬೆಂಗಳೂರಿನಲ್ಲಿ ಶುಕ್ರವಾರ ಬಿಡುಗಡೆ
ಗೊಂಡ 45 ಚಿತ್ರಗಳಲ್ಲಿ 9 ಚಿತ್ರಗಳು ಮಾತ್ರ ಕನ್ನಡದ್ದು. ಭೋಜಪುರಿ ಸಿನೆಮಾವೂ ಒಂದಿತ್ತು.ಅದೇ 10 ಲಕ್ಷ ಕನ್ನಡಿಗರು ಇರುವ ಚೆನ್ನೈನಲ್ಲಿ,25 ಲಕ್ಷ ಕನ್ನಡಿಗರು ಇರುವ ಮುಂಬಯಿಯಲ್ಲಿ ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳುತ್ತಿಲ್ಲ. ಮಣಿಪಾಲದ ಚಿತ್ರಮಂದಿರದ 200 ಆಸನಗಳಲ್ಲಿ 19 ಆಸನಗಳಷ್ಟೇ ಭರ್ತಿಯಾಗಿದ್ದವು ಎಂದು ವಿಷಾದಿಸಿದರು.

ಬಾಲನಟಿ ಶ್ಲಾಘಾ ಸಾಲಿಗ್ರಾಮ ಮಾತನಾಡಿ, ನನಗೆ ಇದೊಂದು ಉತ್ತಮ ಅನುಭವ ತಂದುಕೊಟ್ಟ ಚಿತ್ರವಾಗಿದ್ದು, ಇಂತಹ ಚಿತ್ರಗಳನ್ನು ನೋಡುವ ಮೂಲಕ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.

ನಟರಾದ ಅರವಿಂದ ಹುಬ್ಳೀಕರ್‌, ಅನಂತ್‌ ವಿ.ಎನ್‌., ನೀಲಕಂಠ ಕರಬ, ಉದಯ ಹಾಲಂಬಿ, ಪ್ರದೀಪ್‌ಚಂದ್ರ, ಶಿಖೀನ್‌ ಸಾಲಿಗ್ರಾಮ, ಬಾಲನಟಿ ಶ್ಲಾಘಾ ಸಾಲಿಗ್ರಾಮ ಪತ್ರಿಕಾಗೋಷ್ಠಿಯಲ್ಲಿದ್ದರು.

ವಿದ್ಯಾರ್ಥಿಗಳಿಗೆ ವಿಶೇಷ ಪ್ರದರ್ಶನ
ಶಾಲಾ – ಕಾಲೇಜುಗಳಲ್ಲಿ 100ಕ್ಕೂ ಅಧಿಕ ಮಕ್ಕಳು ವೀಕ್ಷಿಸುವು ದಾದರೆ ರಿಯಾಯಿತಿ ದರದಲ್ಲಿ ವಿಶೇಷ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಈ ಕುರಿತಂತೆ ಶಿಕ್ಷಣ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಪ್ರದರ್ಶನ ಏರ್ಪಡಿಸಬಹುದು ಎಂದು ಶೇಷಾದ್ರಿ ಹೇಳಿದರು.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.