ರಣಜಿ: ಪಾಂಡೆ ಗೈರಲ್ಲಿ ಕರುಣ್ ನಾಯರ್ ನಾಯಕ
Team Udayavani, Dec 5, 2019, 12:10 AM IST
ಬೆಂಗಳೂರು: ಸೋಮವಾರದಿಂದ ತಮಿಳುನಾಡು ವಿರುದ್ಧ ದಿಂಡಿಗಲ್ನಲ್ಲಿ ಆರಂಭವಾಗಲಿರುವ ರಣಜಿ ಕ್ರಿಕೆಟ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.
ಮನೀಷ್ ಪಾಂಡೆ ಅನುಪಸ್ಥಿತಿಯಲ್ಲಿ ಕರುಣ್ ನಾಯರ್ ತಂಡವನ್ನು ಮುನ್ನಡೆಸಲಿದ್ದಾರೆ. ಶ್ರೇಯಸ್ ಗೋಪಾಲ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.
ಈ ಸಲ ರಾಜ್ಯ ತಂಡ ಕೂಡಿಕೊಂಡಿರುವ ಹೊಸಮುಖವೆಂದರೆ ಮಧ್ಯಮ ವೇಗಿ ಕೆ.ಎಸ್. ದೇವಯ್ಯ.
ಕರ್ನಾಟಕ ತಂಡ: ಕರುಣ್ ನಾಯರ್ (ನಾಯಕ), ಮಾಯಾಂಕ್ ಅಗರ್ವಾಲ್, ದೇವದತ್ತ ಪಡಿಕ್ಕಲ್, ಡಿ.ನಿಶ್ಚಲ್, ಆರ್. ಸಮರ್ಥ್, ಪವನ್ ದೇಶಪಾಂಡೆ, ಕೆ. ಗೌತಮ್, ಶ್ರೇಯಸ್ ಗೋಪಾಲ್, ಜೆ. ಸುಚಿತ್, ಬಿ.ಆರ್. ಶರತ್, ಶರತ್ ಶ್ರೀನಿವಾಸ್, ರೋನಿತ್ ಮೋರೆ, ಡೇವಿಡ್ ಮಥಾಯಿಸ್, ವಿ. ಕೌಶಿಕ್, ಕೆ.ಎಸ್.ದೇವಯ್ಯ.