ಮರಳುಗಾರಿಕೆ ಆರಂಭ
Team Udayavani, Dec 11, 2019, 4:24 AM IST
ಕಂಡ್ಲೂರಿನಲ್ಲಿ ನಡೆಯುತ್ತಿರುವ ಮರಳುಗಾರಿಕೆ.
ಕುಂದಾಪುರ: ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಮರಳುಗಾರಿಕೆ ಮಂಗಳವಾರದಿಂದ ಆರಂಭವಾಗಿದೆ. ಕೆಲವು ವರ್ಷಗಳಿಂದ ನಿಂತಿದ್ದ ಮರಳುಗಾರಿಕೆಗೆ ಅನುಮತಿ ದೊರೆತು ಒಂದಷ್ಟು ದಿನ ಮರಳು ಸಾಗಾಟವಾಗಿತ್ತು. ಅನಂತರ ಲಾರಿಯಲ್ಲಿ ಮರಳು ತುಂಬಿಸಿದ ಬಳಿಕ ವೇ ಬ್ರಿಡ್ಜ್ನಲ್ಲಿ ತೂಕ ಮಾಡಿಯೇ ವಿತರಿಸಬೇಕೆಂದು ಜಿಲ್ಲಾಡಳಿತ ಶರತ್ತು ವಿಧಿಸಿದ ಕಾರಣ ಮರಳುಗಾರಿಕೆ ಸ್ಥಗಿತವಾಗಿತ್ತು. ತೂಗದೇ ಮರಳು ನೀಡಿದರೆ ಒದ್ದೆ ಮರಳು ಲಾರಿಯಲ್ಲಿ ತುಂಬಿಸಿ ಹೆಚ್ಚು ತೂಕ ಬಂದು, ಖರೀದಿಸಿದವರಿಗೆ ಮೋಸವಾಗುವ ಸಾಧ್ಯತೆಯನ್ನು ಜಿಲ್ಲಾಡಳಿತ ಮನಗಂಡಿತ್ತು. ಪರಿಣಾಮವಾಗಿ ಗಣಿ ಇಲಾಖೆಯು ಮರಳುಗಾರಿಕೆಗೆ ನೀಡಿದ್ದ ಪರವಾನಿಗೆಯನ್ನು ಅಮಾನತು ಮಾಡಿತ್ತು.
ನೂರಾರು ಲಾರಿಗಳು ಮರಳು ತುಂಬಿಸಿ ಸಾಗಾಟ ಮಾಡಲಾಗದ ಪರಿಸ್ಥಿತಿಯಿದ್ದು, ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬಳಿಕ ಲೋಡು ಮಾಡಿದ ಲಾರಿಗಳನ್ನು ಕಳುಹಿಸಲು ಗಣಿ ಇಲಾಖೆ ಕ್ರಮ ಕೈಗೊಂಡಿತ್ತು. ಮಂಗಳವಾರದಿಂದ ಮತ್ತೆ ಮರಳುಗಾರಿಕೆ ಆರಂಭವಾಗಿದೆ. ಕಂಡ್ಲೂರು ಮತ್ತು ಬಳ್ಕೂರಿನಲ್ಲಿ ಮರಳು ತೆಗೆಯಲು ಅನುಮತಿ ಇದ್ದು, ಸೋಮವಾರದಿಂದ ಶನಿವಾರದ ವರೆಗೆ ನಿಗದಿಪಡಿಸಿದ ಹಣ ಪಾವತಿಸಿ ಮರಳು ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !