ಗುಣಮಟ್ಟದ ಕೃಷಿಗೆ ಮಣ್ಣಿನ ಪರೀಕ್ಷೆ ಅಗತ್ಯ
Team Udayavani, Dec 12, 2019, 3:13 PM IST
ಶಿಗ್ಗಾವಿ: ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸಿ, ಕೊರತೆಯಾದ ಪೋಷಕಾಂಶವನ್ನು ಸರಿದೂಗಿಸುವ ಮೂಲಕ ಕೃಷಿ ಜಮೀನನ್ನು ಫಲವತ್ತಗೊಳಿಸಬೇಕು ಎಂದು ಧುಂಡಶಿ ರೈತ ಸಂಪರ್ಕ ಕೇಂದ್ರದ ಕೃಷಿ ಅ ಧಿಕಾರಿ ಎಸ್.ಆರ್. ದಾವಣಗೇರಿ ಹೇಳಿದರು.
ತಾಲೂಕಿನ ಕುನ್ನೂರ ಗ್ರಾಮದ ಗ್ರಾಮದೇವಿ ದೇವಸ್ಥಾನದದಲ್ಲಿ ರೈತ ಸಂಪರ್ಕ ಕೇಂದ್ರ ಧುಂಡಶಿ ಹೋಬಳಿಮಟ್ಟದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಣ್ಣಿನ ಆರೋಗ್ಯ ಕುರಿತು ಮಾತನಾಡಿದರು. ನಮ್ಮ ಪೂರ್ವಜರು ಸಾಂಪ್ರದಾಯಿಕ ಕೃಷಿ ಅನುಸರಿಸುತ್ತಿದ್ದರು. ಜತೆಗೆ ಸಾಕಷ್ಟು ಹಸುಗಳನ್ನು ಪಾಲನೆ ಪೋಷಣೆ ಮಾಡುವ ಮೂಲಕ ಅಧಿಕ ಪ್ರಮಾಣದಲ್ಲಿ ಸಾವಯವ ಗೊಬ್ಬರ ಉತ್ಪಾದನೆಗೆ ಆದ್ಯತೆ ನೀಡಿ ವ್ಯವಸಾಯಕ್ಕೆ ಬಳಸುತ್ತಿದ್ದರು. ಹೀಗಾಗಿ ಪ್ರತ್ಯೇಕ ಗೊಬ್ಬರಕ್ಕಾಗಿ ಹಣಕಾಸು ವಿನಿಯೋಗಿಸುವ ಅವಶ್ಯಕತೆಯೂ ಇರಲಿಲ್ಲ. ಹಸಿರು ಗೊಬ್ಬರ ಬಳಕೆ ಅವ್ಯಾಹತವಾಗಿತ್ತು. ಕೃಷಿ ಕ್ಷೇತ್ರ ಲಾಭದಾಯಿಕವಾಗಿ ಬೆಳೆಯಲು ಸಹಕಾರಿಯಾಗಿತ್ತು. ಕಾರಣ ಮಣ್ಣಿನ ಗುಣಮಟ್ಟ ಪ್ರತಿವರ್ಷ ಹೆಚ್ಚಳವಾಗುತ್ತಿತ್ತು ಎಂದರು.
ಪಿ.ಡಿ.ಕಾಳಿ ಮಾತನಾಡಿ, ಆಹಾರ ಉತ್ಪಾದನೆ ಕೊರತೆಯಿಂದ ರಸಾಯನಿಕ ಗೊಬ್ಬರ ಬಳಕೆ ಮಾಡುವಂತಾಯಿತು. ಇದರಿಂದಾಗಿ ಭೂಮಿಯ ಫಲವತ್ತತೆ ಕ್ಷೀಣಿಸುತ್ತ ಭೂಮಿ ಬರಡಾಗುತ್ತ ಸಾಗಿತ್ತು. ಪ್ರಸ್ತುತ ಪ್ರತಿಯೊಬ್ಬರೂ ಮಣ್ಣು ಪರೀಕ್ಷೆ ಮಾಡುವುದರ ಜತೆಗೆ ಸಾವಯವ ಕೃಷಿಗೆ ರೈತರು ಮುಂದಾಗಬೇಕಿದೆ ಎಂದು ಹೇಳಿದರು.
ಗ್ರಾಪಂ ಮಾಜಿ ಸದಸ್ಯ ವಿ.ವೈ. ಶೆಟ್ಟೆಪ್ಪನವರ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿ ಮಾಡಿದ್ದು, ಕೃಷಿ ಕಾರ್ಯಕ್ಕೆ ಅನುಕೂಲಕರವಾಗಿವೆ. ಇಂದು ನಾವೂ ಕೃಷಿ ಕಡೆಗೆ ಹೆಚ್ಚು ಗಮನ ನೀಡಲು ಆಸಕ್ತಿ ವಹಿಸುತ್ತಿಲ್ಲ. ಸಾವಯವ ಕೃಷಿ ಮಾಡುವುದರ ಜತೆಗೆ ಭೂಮಿಗೆ ಕೊಟ್ಟಿಗೆ ಗೊಬ್ಬರ ಹಾಕಿ ಫಲವತ್ತತೆ ಕಾಪಾಡಿಕೊಳ್ಳೋಣ ಎಂದರು.
ಪತ್ರಕರ್ತ ಬಿ.ಎಸ್.ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಬಸನಗೌಡ ಬ್ಯಾಹಟ್ಟಿ, ಬಾಬೂಲಾಲ ತಡಸ, ಪ್ರಗತಿ ಪರ ರೈತ ವೀರಪ್ಪ ಸೊಗಲಿ, ಯಮನಪ್ಪ ನವಲೂರ, ಶಾಂತಪ್ಪ ಸೋಗಲಿ, ರೈಮನ್ಸಾಬ ಮುಲ್ಲಾ, ಮಹಾದೇವಪ್ಪ ಮಾಳ್ಳೋಜಿ, ತಿಪ್ಪಣ್ಣಾ ಸಾವಂತಣ್ಣವರ ಸೇರಿದಂತೆ ರೈತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
ಹಾವೇರಿ: ಕಾಂಗ್ರೆಸ್ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ
ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ
MUST WATCH
ಹೊಸ ಸೇರ್ಪಡೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ