ಕರೆನ್ಸಿ ಚಸ್ಟ್ ಸೇವೆ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಖಂಡನೆ
Team Udayavani, Dec 12, 2019, 3:39 PM IST
ಕುಷ್ಟಗಿ: ಪಟ್ಟಣದ ಮಾರುತಿ ವೃತ್ತದ ಎಸ್ಬಿಐ ಬ್ಯಾಂಕ್ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಣ ಕ್ರೋಢೀಕರಣ ಘಟಕವನ್ನು (ಕರೆನ್ಸಿ ಚಸ್ಟ್) ಸೇವೆ ಇದೇ ಡಿ. 31ರಿಂದ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಉದ್ದಿಮೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಎಸ್ಬಿಐ ಶಾಖೆಯಲ್ಲಿದ್ದ ಕರೆನ್ಸಿ ಘಟಕಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಹಣ ಪೂರೈಕೆಯ ವ್ಯವಸ್ಥೆ ಇತ್ತು. ಆದರೆ ಈ ಸೇವೆ ಇದೇ ಡಿ. 31ಕ್ಕೆ ಬಂದ್ ಆಗುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬ್ಯಾಂಕಿನಿಂದ ಸ್ಥಳೀಯ ಅಂಚೆ ಕಚೇರಿ, ತಾವರಗೇರಾ, ಹನುಮಸಾಗರ, ಹೂಲಗೇರಾ ಮೊದಲಾದ ಎಸ್ಬಿಐ ಶಾಖೆಗಳಿಗೆ, ಸಹಕಾರ ಬ್ಯಾಂಕ್ ಸೇರಿದಂತೆ ಇತರೇ ಬ್ಯಾಂಕ್ ಹಣ ಸರಬರಾಜು ವ್ಯವಸ್ಥೆ ಇತ್ತು. ಇದರಿಂದ ಸಕಾಲದಲ್ಲಿ ಹಣ ಲಭ್ಯತೆ ಇರುತ್ತಿದ್ದು, ಯಾವಾಗಲೂ 10 ಕೋಟಿಗೂ ಅಧಿಕ ಹಣ ಮೀಸಲಿರುತ್ತಿತ್ತು. ಲಕ್ಷಕ್ಕೂ ಅಧಿಕ ಮೊತ್ತ ಅಗತ್ಯವಾದರೆ ಕೂಡಲೇ ಸಿಗುತ್ತಿತ್ತು. ಕರೆನ್ಸಿ
ಚಸ್ಟ್ ಸೇವೆ ಡಿ. 31ರಿಂದ ಸ್ಥಗಿತಗೊಂಡರೆ ಯಲಬುರ್ಗಾ ಎಸ್ಬಿಐ ಶಾಖೆಯಿಂದ ತರಿಸಿಕೊಳ್ಳಬೇಕಿದ್ದು, ಅಲ್ಲಿಯವರೆಗೂ ಕಾಯಬೇಕು. ಲಕ್ಷಕ್ಕೂ ಅಧಿಕ ಮೊತ್ತ ಅಗತ್ಯವಾದರೆ ಕ್ರೋಢಿಕೃತವಾಗುವರೆಗೂ ಕಾಯಬೇಕು. ಇಲ್ಲವೇ ದೊಡ್ಡ ಮೊತ್ತ ಹಣ ಅಗತ್ಯವಾದರೆ ಮುಂಚೆಯೇ ಶಾಖೆಗೆ ತಿಳಿಸುವ ಪರಿಸ್ಥಿತಿ ಬರಲಿದೆ.
ಮಾಹಿತಿ ಪ್ರಕಾರ ಆರ್ಬಿಐ ನಿರ್ದೇಶನದ ಮೇರೆಗೆ ಕರೆನ್ಸಿ ಚಸ್ಟ ಸೇವೆ ಸ್ಥಗಿತಕ್ಕೆ ಎಲ್ಲವೂ ಆನ್ಲೈನ್ನಲ್ಲಿ ವ್ಯವಹರಿಸಲು ಪೂರಕ ವ್ಯವಸ್ಥೆ ಇದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಒಪ್ಪುವುದಿಲ್ಲ. ಈ ಸೇವೆಯನ್ನು ಯಾವೂದೇ ಕಾರಣಕ್ಕೂ ಸ್ಥಗಿತಗೊಳಿಸದಿರಲಿ, ಇದೇ ಡಿ. 13ರಂದು ಬ್ಯಾಂಕ್ ಎಜಿಎಂ ಮೂಲಕ ಡಿಜಿಎಂಗೆ ಮನವಿ ಸಲ್ಲಿಸಲಾಗುತ್ತಿದೆ. ಅಲ್ಲದೇ ಕೊಪ್ಪಳ ಸಂಸದ ಕರಡಿ ಸಂಗಣ್ಣ ಹಾಗೂ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೂ ಸಲ್ಲಿಸಲಾಗುವುದು ಎಂದು ಹೈದ್ರಾಬಾದ್ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ್ ಗಾಣಗೇರ ತಿಳಿಸಿದರು. ಬ್ಯಾಂಕಿನಲ್ಲಿ ಗ್ರಾಹಕರಿಗೆ ಸೇವೆ ತೃಪ್ತಿಕರವಾಗಿಲ್ಲ. ತಾಸುಗಟ್ಟಲೇ ನಿಲ್ಲಬೇಕು ಇದನ್ನು ಸರಿಪಡಿಸದೇ ಬ್ಯಾಂಕಿನ ಕರೆನ್ಸಿ ಚಸ್ಟ್ ಸೇವೆ ಸ್ಥಗಿತಗೊಳಿಸಲು ಮುಂದಾಗಿರುವುದು ಖಂಡನೀಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ