ಗ್ರಾಮೀಣ ಜೀವನ ಶೈಲಿಯಲ್ಲಿ ವಿಜ್ಞಾನ ಹಬ್ಬ


Team Udayavani, Dec 14, 2019, 3:58 PM IST

kolar-tdy-1

ಬಂಗಾರಪೇಟೆ: ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ವಿಜ್ಞಾನ ಸಮಿತಿ ಹಮ್ಮಿಕೊಂಡಿರುವ ಎರಡು ದಿನಗಳ ಕಾಲ ಕ್ಲಸ್ಟರ್‌ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಪೂರ್ವಜರು ಬಳಕೆ ಮಾಡುತ್ತಿದ್ದ ಹಾಗೂ ಅಳಿದುಳಿದ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಿದ್ದು, ಶಿಕ್ಷಕರು, ವಿದ್ಯಾರ್ಥಿಗಳ ಕಣ್ಮನ ಸೆಳೆಯುತ್ತಿವೆ.

ಗರಿಕೆ ಸಾಂಸ್ಕೃತಿಕ ಕೇಂದ್ರವು ಶಾಲೆಯ ಆವರಣದಲ್ಲಿ ವಿಜ್ಞಾನದ ಜೊತೆಗೆ ಜಾನಪದ ಹಾಗೂ ಹಿಂದೆ ಹಳ್ಳಿಯ ಜನರು ಬಳಸುತ್ತಿದ್ದ ಸಂಗೀತ ವಾಧ್ಯಗಳು, ವ್ಯವಸಾಯ ಉಪಕರಣಗಳು ಹಾಗೂ ನಿತ್ಯ ಬಳಕೆಗೆ ಬಳಸುತ್ತಿದ್ದ ವಸ್ತುಗಳನ್ನು ಮಕ್ಕಳಿಗೆ ಪರಿಚಯಿಸುವ ಪ್ರಯತ್ನವೂ ನಡೆಯಿತು.

ವೇದಿಕೆಯ ಪಕ್ಕದಲ್ಲಿ ಪುರಾತನ ಕಾಲದಲ್ಲಿ ತಾಂತ್ರಿಕತೆಯ ಮುಕ್ತವಾಗಿ ವಾಸವಾಗಿದ್ದ ಜನರ ಜೀವನ ಮಟ್ಟವನ್ನು ಪರಿಚಯಿಸುವ ಒಂದು ಗುಡಿಸಲನ್ನು ನಿರ್ಮಾಣ ಮಾಡಿ, ಅದರ ಒಳಗೆ ಹಸುವೊಂದನ್ನು ಕಟ್ಟಿ ಪಕ್ಕದಲ್ಲಿಯೇ ಮೇಕೆ, ಕೋಳಿಗಳನ್ನು ಬಿಟ್ಟು ಒಂದು ಹಳ್ಳಿಯ ವಾತಾವರಣ ನಿರ್ಮಾಣ ಮಾಡಲಾಗಿದೆ. ಹಬ್ಬಕ್ಕೆ ಬಂದಿದ್ದ ಸಾವಿರಾರು ಮಕ್ಕಳು ಗುಡಿಸಲಿನ ಅಟ್ಟ ಏರಿ ಖುಷಿಪಟ್ಟರು.

ದನಗಳ ಅಲಂಕಾರಿಕ ವಸ್ತುಗಳು: ಪುರಾತನ ಕಾಲದಲ್ಲಿ ಈ ಹಿಂದೆ ಬಳಸುತ್ತಿದ್ದ ಅಡುಗೆ ಮನೆಯ ಉಪಕರಣಗಳಾದ ಮಣ್ಣಿನ ಒಲೆ, ಮಡಕೆ, ತಾಮ್ರದ ತಟ್ಟೆ, ಚಂಬು, ಬೆಳಕಿನ ದೀಪ, ಒನಕೆ, ರಾಗಿಕಲ್ಲು, ಹೊರಳು ಕಲ್ಲು, ನಸೆಗೋಲು, ಸಲಗುತ್ತಿ ಇತ್ಯಾದಿ ವಸ್ತುಗಳು. ದನಗಳ ಅಲಂಕಾರಿಕ ವಸ್ತುಗಳಾದ ಕಾಲ್ಗೆಜ್ಜೆ, ಕುಂಚ, ಬಗೆ ಬೆಗೆಯ ಮೂಗುದಾರಗಳು, ಸಿಕ್ಕುಗಳು, ಗಂಟೆಗಳು, ಚಾಟಿ ಕೋಲು, ಕೊರಳಿನ ಗಂಟೆ ಸರಗಳು ಇತ್ಯಾದಿಗಳು ನೋಡಿ ಮನಸೂರೆಗೊಂಡವು.

ಗಮನ ಸೆಳೆದ ಆಟ ಸಾಮಾನು: ಪ್ರಾಚೀನ ಕಾಲದಲ್ಲಿ ಯಾವುದೇ ತಾಂತ್ರಿಕತೆ ಇಲ್ಲದೇ ಕೃಷಿ ಚಟುವಟಿಕೆಗಳನ್ನು ನಿರ್ವಹಣೆ ಮಾಡುತ್ತಿದ್ದ ರೈತರಿಗೆ ಚಿರಪರಿಚಿತವಾಗಿರುವ ಕೃಷಿ ಉಪಕರಣಗಳಾದ ಮಂಕರಿ, ಹಲುಬೆ, ಗಡಾರಿ, ಕೂರಿಗೆ ಇತ್ಯಾದಿಗಳು. ಅಳತೆ ಮಾಪನಗಳಾದ ಶೇರು, ಇಬ್ಬಳಿಗೆ, ಪಾವು ಮಕ್ಕಳ ಆಟದ ವಸ್ತುಗಳಾದ ಅಚ್ಚಕಲ್ಲು, ಪಗಡೆ ದಾಳಗಳು, ಚಿಣ್ಣಿ ದಾಂಡು, ಲಗೋರಿ ಚಕ್ಕೆ ಮತ್ತು ಚೆಂಡು, ಗೋಲಿಗಳು, ಸಂಗೀತ ವಾದ್ಯಗಳಾದ ತಂಬೂರಿ, ಚರ್ಮದ ತಮಟೆ, ಚಕ್ಕೆ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಕರ್ಷಣೆಯಾಗಿದ್ದವು.

ಗತಕಾಲದ ವಸ್ತುಗಳ ಪ್ರದರ್ಶನ: ಪ್ರಾಚೀನ ಗ್ರಾಮೀಣ ಉಪಕರಣಗಳಾದ ಕಬ್ಬಿಣದ ಪೆಟ್ಟಿಗೆ, ಕಂಬಳಿ, ಮಣ್ಣಿನ ದೀಪ, ಮರದ ತೊಟ್ಟಿಲು, ಸುಣ್ಣದ ಡಬ್ಬಿ, ಕೋಳಿ ಪಂಜರ, ಊರುಗೋಲು ಇತ್ಯಾದಿಗಳನ್ನು ಪ್ರದರ್ಶನಕ್ಕೆ ಇಟ್ಟು ಗತಕಾಲದ ಹಾಗೂ ಇಂದಿನ ಜೀವನದ ಶೈಲಿಯ ಬಗ್ಗೆ ಮಕ್ಕಳಿಗೆ ವಿವರಣೆ ನೀಡಲಾಯಿತು.

ಗತಕಾಲದ ವಸ್ತುಗಳ ಪ್ರದರ್ಶನ: ಸಿರಿ ಧಾನ್ಯಗಳಾದ ಸಾಮೆ, ಆರ್ಕಾ, ನವಣೆ, ಕೊರಲೆ ಇತ್ಯಾದಿಗಳನ್ನು ಇಟ್ಟು ಸಿರಿಧಾನ್ಯಗಳ ಹಾಗೂ ಅದರ ಪ್ರಯೋಜನಗಳ ಬಗ್ಗೆ ಮಕ್ಕಳು ಮಾಹಿತಿ ಪಡೆದರು. ಗರಿಕೆ ಸಾಂಸ್ಕೃತಿಕ ಕೇಂದ್ರ ನೂತನವಾಗಿ ಆಯೋಜಿಸಿದ್ದ ಗತಕಾಲದ ಹಲವು ವಸ್ತುಗಳ ಪ್ರದರ್ಶನದಿಂದ ಮತ್ತೂಮ್ಮೆ ಗತವೈಭವಕ್ಕೆ ಹೋದ ಅನುಭವ ಸಿಕ್ಕಂತಾಯಿತು ಎಂದು ಶಿಕ್ಷಕರು ಹಾಗೂ ಮಕ್ಕಳು ಸಂತಸ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.