ಉಜಿರೆ ಎಸ್ಡಿಎಂಗೆ ಸ್ಟಾರ್ ಕಾಲೇಜು ಮನ್ನಣೆ
Team Udayavani, Dec 15, 2019, 3:03 AM IST
ಬೆಳ್ತಂಗಡಿ: ವಿಜ್ಞಾನ ವಿಭಾಗಗಳನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜನ್ನು ಸ್ಟಾರ್ ಕಾಲೇಜು ಯೋಜನೆಯಡಿ ಆಯ್ಕೆ ಮಾಡಿದೆ. ಕೇಂದ್ರದ ವಿಜ್ಞಾನ ತಂತ್ರಜ್ಞಾನ ಸಚಿವಾಲಯದ ಬಯೋಟೆಕ್ನಾಲಜಿ ಘಟಕವು ಉಜಿರೆ ಕಾಲೇಜಿಗೆ ಈ ಯೋಜನೆಯಡಿ 82 ಲಕ್ಷ ರೂ.ಗಳ ಅನುದಾನದೊಂದಿಗೆ ವಿಜ್ಞಾನ ವಿಭಾಗಗಳನ್ನು ಮೇಲ್ದರ್ಜೆಗೆ ಏರಿಸಲು ಉತ್ತೇಜನ ದೊರಕಿದೆ.
ಕಾಲೇಜಿನ ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ಬಯೋಟೆಕ್ನಾಲಜಿ ವಿಭಾಗಗಳು ಸ್ಟಾರ್ ಕಾಲೇಜು ಯೋಜನೆಯಡಿ ಗುರುತಿಸಲ್ಪಟ್ಟಿವೆ. ವಿಭಾಗಗಳ ಪ್ರಯೋಗಾಲಯದ ಉತ್ಕೃಷ್ಟತೆ, ಅಗತ್ಯ ಸೌಕರ್ಯಗಳ ಲಭ್ಯತೆ ಹಾಗೂ ವಿಚಾರ ಸಂಕಿರಣ, ಸಂಶೋಧನಾ ಯೋಜನೆ, ವಿದ್ಯಾರ್ಥಿಕೇಂದ್ರಿತ ಚಟುವಟಿಕೆಗಳಿಗೆ ಅನುದಾನ ಬಳಕೆಯಾಗಲಿದೆ. ಕೇಂದ್ರ ಸರಕಾರವು ವಿಜ್ಞಾನ ವಿಭಾಗಗಳ ಗುಣಮಟ್ಟ ವೃದ್ಧಿಗೆ ರೂಪಿಸಿರುವ ವಿಶೇಷ ಯೋಜನೆಯಡಿ ಈ ಸ್ಟಾರ್ಕಾಲೇಜು ಪರಿಕಲ್ಪನೆಯೂ ಸೇರಿದೆ.
ಇತ್ತೀಚೆಗಷ್ಟೇ ಪರಾಮರ್ಶ್ ಯೋಜನೆಯಡಿ ಯುಜಿಸಿಯು ಉಜಿರೆ ಎಸ್.ಡಿ.ಎಂ. ಕಾಲೇಜನ್ನು ಮೆಂಟರ್ ಇನ್ಸ್ಸ್ಟಿಟ್ಯೂಟ್ ಎಂದು ನಿಯೋಜಿಸಿ ಸುತ್ತಮುತ್ತಲಿನ ಕಾಲೇಜುಗಳಿಗೆ ನ್ಯಾಕ್ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡುವ ಮಹತ್ವದ ಹೊಣೆಗಾರಿಕೆ ನಿಭಾಯಿಸುವ ಅವಕಾಶ ಒದಗಿಸಿದೆ. ಇದಲ್ಲದೆ ಯುಜಿಸಿಯು ಉದ್ಯೋಗಾಧಾರಿತ ಕೌಶಲ್ಯಾಧಾರಿತ ಮೂರು ಬಿ-ವೋಕೆಶನಲ್ ಕೋರ್ಸ್ಗಳನ್ನು ನಡೆಸಲು ಉಜಿರೆ ಕಾಲೇಜಿಗೆ ಮನ್ನಣೆ ನೀಡಿತ್ತು. ಇದರ ಜತೆಗೆ ಈಗ ಸ್ಟಾರ್ಕಾಲೇಜು ರೂಪದಲ್ಲಿ ಮತ್ತೂಂದು ಮನ್ನಣೆ ದೊರಕಿದಂತಾಗಿದೆ ಎಂದು ಪ್ರಾಂಶುಪಾಲ ಪ್ರೊ.ಎಸ್.ಸತೀಶ್ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ