ಕೋರ್ಟ್‌ ಆಜ್ಞೆ ಉಲ್ಲಂಘಿಸಿ ಮಳಿಗೆ ಹರಾಜು!


Team Udayavani, Dec 16, 2019, 3:00 AM IST

court-ajne

ಹುಳಿಯಾರು: ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳ ಇ-ಹರಾಜಿಗೆ ಉತ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಆದೇಶ ಉಲ್ಲಂಘಿಸಿ ಇ-ಹರಾಜು ಪ್ರಕ್ರಿಯೆ ನಡೆದಿದೆ. ಆದರೆ ಅಧಿಕಾರಿಗಳು ಒಬ್ಬರ ಮೇಲೊಬ್ಬರ ಮೇಲೆ ಗೂಬೆ ಕೂರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.

ಪಪಂನ 52 ವಾಣಿಜ್ಯ ಮಳಿಗೆಗಳನ್ನು 3-4ದಶಕಗಳಿಂದ ಕಾನೂನು ಬಾಹಿರವಾಗಿ ಹಾಲಿ ಬಾಡಿಗೆದಾರರಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ನವೀಕರಿಸಿ ಕೊಡುತ್ತಿದ್ದು, ಇದರಿಂದ ಪಪಂ ಅಧಿವೃದ್ಧಿಗೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದರು. ಅದರಂತೆ 52 ಮಳಿಗೆಗಳನ್ನೂ ಇ-ಹರಾಜು ಮೂಲಕ ವಿಲೇವಾರಿಗೆ ನಿರ್ಧರಿಸಿ ಪ್ರಕಟಣೆಯನ್ನೂ ಹೊರಡಿಸಿತ್ತು. ಆದರೆ ಹಾಲಿ ಬಾಡಿಗೆದಾರರ ತೆರವು ಮಾಡದೆ ಹರಾಜು ಪ್ರಕ್ರಿಯೆ ನಡೆಸುವುದು ನಿಯಮಬಾಹಿರ ಎಂದು ಹಾಲಿ ಬಾಡಿಗೆದಾರರು ತಡೆಯಾಜ್ಞೆ ತಂದಿದ್ದರು.

6 ವಾರ ತಡೆಯಾಜ್ಞೆ ನೀಡಿತ್ತು: 52 ಮಳಿಗೆಗಳ ಪೈಕಿ ಒಂದು ಮಳಿಗೆಯ ಬಾಡಿಗೆದಾರ ಪುಟ್ಟರಾಜು ಮರಣ ಹೊಂದಿದ್ದರಿಂದ, ಇನ್ನೊಂದು ಮಳಿಗೆಯ ಬಾಡಿಗೆದಾರ ಡಿ.ಆರ್‌.ನರೇಂದ್ರಬಾಬು ಕೋರ್ಟ್‌ ಮೆಟ್ಟಿಲೇರಲು ಇಚ್ಛಿಸದ್ದರಿಂದ 50 ಮಳಿಗೆಗಳ ಇ-ಹರಾಜಿಗೆ ಕೋರ್ಟ್‌ 2019 ಡಿ.2 ಮತ್ತು ಡಿ.9 (ಎರಡು ಪ್ರತ್ಯೇಕ) ರಂದು 6 ವಾರ ತಡೆಯಾಜ್ಞೆ ನೀಡಿತ್ತು. ಅದರಂತೆ ಹುಳಿಯಾರು ಪಪಂ ಮುಖ್ಯಾಧಿಕಾರಿ ಇ-ಹರಾಜು ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ನೋಟಿಸ್‌ ನೀಡಿದ್ದರು.

ಆದರೆ 52 ಮಳಿಗೆಗಳ ಪೈಕಿ 13 ಮಳಿಗೆ ಇ-ಹರಾಜು ಮಾಡಲಾಗಿದ್ದು, ಇದರಲ್ಲಿ 1 ಮಳಿಗೆ 16 ಸಾವಿರಕ್ಕೂ ಹೆಚ್ಚಿನ ಮಾಸಿಕ ಬಾಡಿಗೆಗೆ ವಿಲೆಯಾಗಿದೆ. ಇತ್ತ ಕೋರ್ಟ್‌ ತಡೆಯಾಜ್ಞೆ ಇದ್ದರೂ ಅತ್ತ ಪಪಂ ಅಧಿಕಾರಿ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದರೂ ಇ-ಹರಾಜು ನಡೆದಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ಬಗ್ಗೆ ಆಡಳಿತಾಧಿಕಾರಿಗಳನ್ನು ಪ್ರಶ್ನಿಸಿದರೆ ಯೋಜನಾ ನಿರ್ದೇಶಕರತ್ತ ಕೈ ತೋರಿಸುತ್ತಾರೆ. ಯೋಜನಾ ನಿರ್ದೆಶಕರನ್ನು ಪ್ರಶ್ನಿಸಿದರೆ ಪಪಂ ಅಧಿಕಾರಿಗಳ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಾರೆ.

ಸಾರ್ವಜನಿಕರ ಆಕ್ರೋಶ: ಅಧಿಕಾರಿಗಳು ಒಬ್ಬರ ಮೇಲೋಬ್ಬರು ಜವಾವಾªರಿ ವರ್ಗಾಯಿಸಿ ನುಣುಚಿಕೊಳ್ಳುತ್ತಿದ್ದು, ನ್ಯಾಯಾಲಯದ ತಡೆಯಾಜ್ಞೆ ಸ್ಪಷ್ಟವಾಗಿ ಉಲ್ಲಂಘನೆಯಾಗಿದೆ ಎಂಬುದನ್ನು ಸಾಬೀತು ಮಾಡಿದೆ. ಇದರಿಂದ ತಡೆಯಾಜ್ಞೆ ತಂದವರ ನೆಮ್ಮದಿ ಹಾಳಾಗಿದೆ. ಅಲ್ಲದೆ ಪಪಂ ಅಧಿಕಾರಿಯ ತಾತ್ಕಾಲಿಕ ಸ್ಥಗಿತದ ಹೇಳಿಕೆ ನಂಬಿ ಅನೇಕರು ಇ-ಹರಾಜು ಪ್ರಕ್ರಿಯೆಯಿಂದ ವಂಚಿತರಾಗಿದ್ದಾರೆ. ಇದು ಸಹಜವಾಗಿಯೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಡೆಯಾಜ್ಞೆ ತಂದವರು ಮತ್ತೆ ಕೋರ್ಟ್‌ ಮೆಟ್ಟಿಲೇರುತ್ತಿದ್ದು, ಯಾವ ಅಧಿಕಾರಿಗಳ ತಲೆದಂಡವಾಗಲಿದೆ ಎಂಬುದು ಕಾದು ನೋಡಬೇಕು.

ಹರಾಜು ನಡೆದ ಮಳಿಗೆಗಳು: 50 ಮಳಿಗೆಗಳಿಗೆ ಕೋರ್ಟ್‌ ತಡೆಯಾಜ್ಞೆ ನೀಡಿದ್ದರೂ ಕೋರ್ಟ್‌ ಆಜ್ಞೆ ಉಲ್ಲಂಘಿಸಿ 13 ಮಳಿಗೆ ಇ-ಹರಾಜು ಮಾಡಲಾಗಿದೆ. ಇದರಲ್ಲಿ ಎ ಬ್ಲಾಕ್‌ನಲ್ಲಿದ್ದ 22 ಮಳಿಗೆಗಳ ಪೈಕಿ 2, ಬಿ ಬ್ಲಾಕ್‌ನಲ್ಲಿನ 12 ಮಳಿಗೆಗಳ ಪೈಕಿ 3, ಸಿ ಬ್ಲಾಕ್‌ನಲ್ಲಿನ 11 ಮಳಿಗೆಗಳ ಪೈಕಿ 5, ಡಿ.ಬ್ಲಾಕ್‌ನಲ್ಲಿನ 7 ಮಳಿಗೆಗಳ ಪೈಕಿ 2 ಮಳಿಗೆ ಇ-ಹರಾಜು ನಡೆಸಲಾಯಿತು.

13 ಮಳಿಗೆ ಇ-ಹರಾಜು: 52 ಮಳಿಗೆಗಳ ಪೈಕಿ ಮೊದಲ ಹಂತದಲ್ಲಿ 30, ನಂತರದ ಹಂತದಲ್ಲಿ 9 ಒಟ್ಟು 39 ಬಾಡಿಗೆದಾರರು ಇ-ಹರಾಜಿಗೆ ತಡೆಯಾಜ್ಞೆ ತಂದಿದ್ದರು. ಹಾಗಾಗಿ ಉಳಿದ 13 ಮಳಿಗೆ ಇ-ಹರಾಜು ಮಾಡಲಾಗಿದೆ ಎಂಬುದು ಅಧಿಕಾರಿಗಳ ವಲಯದ ವಾದವಾಗಿದೆ. ಆದರೆ ಕೋರ್ಟ್‌ ಮೆಟ್ಟಿಲೇರಿರುವ ಬಾಡಿಗೆದಾರರ ಪೈಕಿ ಕೆಲವರ ಹೆಸರಿಗೆ ಎರಡೆರಡು ಮಳಿಗೆಗಳಿದ್ದು, ಕೋರ್ಟ್‌ ಇವರ ಹೆಸರಿನಲ್ಲಿರುವ ಅಷ್ಟೂ ಮಳಿಗೆಗಳಿಗೆ ತಡೆಯಾಜ್ಞೆ ನೀಡಿದೆ.

ಇ-ಹರಾಜಿಗೆ ತಡೆಯಾಜ್ಞೆ ತಂದಿರುವ ಆದೇಶ ಪ್ರತಿಯನ್ನು ಇ-ಪ್ರಕ್ಯೂರ್‌ವೆುಂಟ್‌ ನಡೆಸುವ ಏಜೆನ್ಸಿಗೆ ನೀಡಿ ಸ್ಥಗಿತಗೊಳಿಸುವಂತೆ ಸೂಚಿಸಿ ಕರ್ತವ್ಯಕ್ಕೆ ರಜೆ ಹಾಕಿ ಕುಟುಂಬ ಸಮೇತ ತಿರುಪತಿಗೆ ತೆರಳಿದ್ದೇನೆ. ಆದರೆ ಕೋರ್ಟ್‌ ಆಜ್ಞೆ ಉಲ್ಲಂಘಿಸಿ ಇ-ಹರಾಜು ನಡೆಸಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸರ್ಕಾರಿ ವಕೀಲರ ಸಂಪರ್ಕಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.
-ಮಂಜುನಾಥ್‌, ಪಪಂ ಮುಖ್ಯಾಧಿಕಾರಿ, ಹುಳಿಯಾರು

13 ಮಳಿಗೆ ಇ-ಹರಾಜು ಮಾಡಿರುವುದು ನ್ಯಾಯಾಲಯದ ಆಜ್ಞೆ ಉಲ್ಲಂಘಿಸಿರುವುದು ಸ್ಪಷ್ಟವಾಗಿದ್ದು, ತಡೆಯಾಜ್ಞೆ ತಂದವರು ಕೋರ್ಟ್‌ ಮೆಟ್ಟಿಲೇರಿದರೆ ನ್ಯಾಯಾಂಗ ನಿಂದನೆಗೆ ಅಧಿಕಾರಿ ಹೊಣೆಯಾಗಬೇಕಾಗುತ್ತದೆ. ಜೊತೆಗೆ ನ್ಯಾಯಾಂಗ ನೀಡುವ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ತಡೆಯಾಜ್ಞೆ ಉಲ್ಲಂಘಿಸಿ ನಡೆದಿರುವ ಹರಾಜು ವಜಾವಾಗುತ್ತದೆ.
-ಎಚ್‌.ಆರ್‌.ರಮೇಶ್‌ಬಾಬು, ವಕೀಲ, ಹುಳಿಯಾರು

* ಎಚ್‌.ಬಿ.ಕಿರಣ್‌ ಕುಮಾರ್‌

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.