ಸಾಂತ್ವನ ಕೇಂದ್ರದಲ್ಲೇ ಪ್ರೇಮಿಗಳ ವಿವಾಹ
Team Udayavani, Dec 17, 2019, 4:47 PM IST
ಬೇತಮಂಗಲ: ಕಳೆದ ಎರಡು ವರ್ಷಗಳಿಂದ ಪ್ರೀತಿಸುತಿದ್ದ ಪ್ರೇಮಿಗಳಿಬ್ಬರಿಗೆ ಅವರ ಇಚ್ಛೆಯಂತೆ ವಿರೋಧ ವ್ಯಕ್ತಪಡಿಸಿದ್ದ ಪೋಷಕರ ಸಮ್ಮುಖದಲ್ಲೇ ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಿವಾಹ ನೆರವೇರಿಸಲಾಯಿತು.
ಗ್ರಾಮದ ಸಂತೆಗೇಟ್ ನಿವಾಸಿ ಜಯಪಾಲ್ ಅವರ ಪುತ್ರ ಪ್ರವೀಣ್ಕುಮಾರ್(23) ಮತ್ತು ಕೆಜಿಎಫ್ನ ಬಾಲಘಾಟ್ ನಿವಾಸಿ ತಿರುಮೂರ್ತಿ ಅವರ ಪುತ್ರಿ ಕವಿಯರಸಿ (20) ಇಬ್ಬರೂ ಅನ್ಯ ಕೋಮಿನವರಾಗಿದ್ದು, ದಾರಸಹೊಸ ಹಳ್ಳಿಯ ಡೆಕ್ಕೇನ್ ಹೈಡ್ರಾಲಿಕ್ನಲ್ಲಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ವಿವಾಹಕ್ಕೆ ಎರಡೂ ಮನೆಯವರ ಕಡೆ ವಿರೋಧವಿತ್ತು. ನಂತರ ಪ್ರೇಮಿಗಳಿಬ್ಬರು ಬೇತಮಂಗಲ ಮಹಿಳಾ ಸಾಂತ್ವನ ಕೇಂದ್ರಕ್ಕೆ ಮನವಿ ಸಲ್ಲಿಸಿ, ನಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆ ಮಾಡುವಂತೆ ಮನವಿ ಮಾಡಿದ್ದರು. ಸಾಂತ್ವನ ಕೇಂದ್ರದ ಕಾರ್ಯದರ್ಶಿ ಎಂ.ಗೋಪಾಲ್ ಮತ್ತು ಆಪ್ತ ಸಮಾಲೋಚಕಿ ಪವಿತ್ರಾ ಇಬ್ಬರೂ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ಮದುವೆಗೆ ಒಪ್ಪಿಸಿದ್ದರು.
ಅದರಂತೆ ಸೋಮವಾರ ಎರಡೂ ಕಡೆಯ ಪೋಷಕರಿಗೆ ಸೂಕ್ತ ಮಾಹಿತಿ ನೀಡಿ, ಸಮಾಲೋಚನೆ ಮೂಲಕ ಹಿಂದೂ ಸಾಂಪ್ರದಾ ಯದಂತೆ ಸಾಂತ್ವನ ಕೇಂದ್ರವನ್ನೇ ಕಲ್ಯಾಣ ಮಂದಿರ ಮಾಡಿ, ಹಾರ ಬದಲಿಸಿ, ತಾಳಿ ಕಟ್ಟಿಸಿ, ಎಲ್ಲರಿಗೂ ಅರಿಶಿಣ, ಕುಂಕುಮ ಅಕ್ಕಿ ನೀಡಿ ಆಶೀರ್ವಾದ ಮಾಡಿಸಿ, ವಿವಾಹ ನೆರವೇರಿಸಿದರು. ನಂತರ ಎರಡೂ ಕಡೆಯವರಿಗೆ ಊಟ ವ್ಯವಸ್ಥೆಯನ್ನೂ ಮಾಡಲಾಗಿತ್ತು ಸಾಂತ್ವನ ಕೇಂದ್ರದ ಆಪ್ತಸಮಾಲೋಚಕಿ ಪವಿತ್ರಾ ಮಾತನಾಡಿ, ಮಹಿಳೆಯರು ತಮ್ಮ ಯಾವುದೇ ಸಮಸ್ಯೆಗಳನ್ನು ಹೇಳಿಕೊಳ್ಳಲು, ತಮ್ಮ ಸಂಸಾರ ಸರಿಪಡಿಸಿಕೊಳ್ಳಲು ಸಾಂತ್ವನ ಕೇಂದ್ರ ಸಂಪೂರ್ಣ ಸಹಕಾರ ನೀಡುತ್ತಿದೆ. ಅಗತ್ಯ ಸಮಾಲೋಚನೆ ಮೂಲಕ ಅವರಿಗೆ ವರದಾನವಾಗುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
MUST WATCH
ಹೊಸ ಸೇರ್ಪಡೆ
Boeing aircraft: ಬೋಯಿಂಗ್ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್
BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ
Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ
Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್ ರೇವಣ್ಣನಂಥವರಾ?; ಜಿಗ್ನೇಶ್
MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು