ಯಾರೂ ಪಕ್ಷ ಬಿಟ್ಟು ಹೋಗಲ್ಲ; ಹೋಗೋರನ್ನ ಹಿಡಿದಿಡಲು ಆಗುತ್ತಾ?- ಎಚ್ಡಿಕೆ
Team Udayavani, Dec 18, 2019, 8:26 PM IST
ಬೆಂಗಳೂರು: “ಶಾಸಕರಾರೂ ಪಕ್ಷ ತೊರೆದು ಹೋಗುವುದಿಲ್ಲ ಎಂಬ ವಿಶ್ವಾಸ ಇದೆ. ಆದರೆ, ಬಿಟ್ಟು ಹೋಗುವವರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತದೆಯೇ?’
– ಉಪ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಜೆಡಿಎಸ್ನಲ್ಲಿ ಶುರುವಾಗಲಿದೆ ಎನ್ನಲಾದ ರಾಜೀನಾಮೆ ಪರ್ವದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ಇದು.
“ನಾವಂತೂ ಈ “ಪವಿತ್ರ’ ಸರ್ಕಾರಕ್ಕೆ ತೊಂದರೆ ಕೊಡುವುದಿಲ್ಲ. ಆ ಪಕ್ಷದಲ್ಲಿ ಅಸಮಾಧಾನಗೊಂಡ ಶಾಸಕರನ್ನು ಖರೀದಿಯೂ ಮಾಡುವುದಿಲ್ಲ.
ನಮ್ಮಲ್ಲೂ ಯಾರೂ ಪಕ್ಷ ತೊರೆಯುವುದಿಲ್ಲ ಎಂಬ ವಿಶ್ವಾಸ ಇದೆ. ಆದರೆ, ಬಿಟ್ಟು ಹೋಗುವವರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಾ?’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಬಿಜೆಪಿ ಈಗಲೂ ಆಪರೇಷನ್ ಮಾಡುತ್ತಿದೆ. ಅದು ಆ ಪಕ್ಷದ ಸಂಸ್ಕೃತಿಯಾಗಿದ್ದು, ಅವರಿಗೆ (ಬಿಜೆಪಿಗೆ) ಇನ್ನೂ ಜೆಡಿಎಸ್ ಬಗ್ಗೆಯೇ ಭಯ ಇದೆ. ಜೆಡಿಎಸ್ ಶಾಸಕರನ್ನು ಮುಂದಿನ ಚುನಾವಣೆಯ ಭವಿಷ್ಯ ನಿಧಿಯಾಗಿಯಾದರೂ ಬಳಸಿಕೊಳ್ಳಲಿ ಅಥವಾ ಆಸ್ತಿಯನ್ನಾಗಿಯಾದರೂ ಇಟ್ಟುಕೊಳ್ಳಲಿ. ಆದರೆ, ಜೆಡಿಎಸ್ ಶಾಸಕರು ಪಕ್ಷ ತೊರೆಯುತ್ತಿ¨ªಾರೆ ಎನ್ನುವುದು ಊಹಾಪೋಹ. ಯಾವುದೋ ಒಂದು ವರ್ಗದಿಂದ ಬರುವಂತಹ ಸುದ್ದಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
“ಪಕ್ಷಕ್ಕೆ ಡ್ಯಾಮೇಜ್ ಮಾಡ್ಬೇಡಿ’
ಈ ಪಕ್ಷದಿಂದ ಸಾಕಷ್ಟು ಪಡೆದುಕೊಂಡಿದ್ದೀರಿ. ದುಡಿಮೆ ಮಾಡಿಕೊಂಡಿದ್ದೀರಾ. ಹಾಗಾಗಿ, ಪಕ್ಷಕ್ಕೆ ಡ್ಯಾಮೇಜ್ ಮಾತ್ರ ಮಾಡಬೇಡಿ ಎಂದು ಇದೇ ವೇಳೆ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
“ಕೆಲ ಭಾಗಗಳನ್ನು ಕಡೆಗಣಿಸಿದ್ದೇನೆ ಎಂಬ ಆರೋಪ ಕೆಲವರು ಮಾಡುತ್ತಾರೆ. ಆದ್ದರಿಂದ ನೀವೇ ಯಾರಾದರೂ ರಾಜ್ಯ ಘಟಕದ ಅಧ್ಯಕ್ಷರಾಗಬಹುದು. ಮುಂದೆ ಒಂದು ವೇಳೆ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿಯೂ ನಿಮ್ಮಲ್ಲಿಯೇ ಯಾರಾದರೂ ಆಗಲಿ. ನನ್ನದೇನೂ ಅಭ್ಯಂತರವಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ನೀವೂ (ಮುಖಂಡರು) ಈ ಪಕ್ಷದ ಕಾರ್ಯಕರ್ತರಿದ್ದೀರಿ ಹಾಗೂ ಸಾಕಷ್ಟು ಪಡೆದುಕೊಂಡಿದ್ದೀರಿ. ಪಕ್ಷಕ್ಕೆ ಹಾನಿ ಮಾತ್ರ ಮಾಡಬೇಡಿ’ ಎಂದರು.
ಅನುದಾನ ಕೊಡುವಾಗ ಪ್ರಾಮುಖ್ಯತೆಯನ್ನು ನೋಡಿ ಕೊಡಬೇಕು. ನಾನು ಮಂಡಿಸಿದ ಬಜೆಟ್ಗೆ ಇದೇ ಸರ್ಕಾರವು ಸದನದಲ್ಲಿ ಅನುಮತಿ ಪಡೆದಿದೆ. ಈಗ ಅದರಲ್ಲಿನ ಕಾರ್ಯಕ್ರಮಗಳನ್ನು ರದ್ದು ಮಾಡಿ, ಬೇರೆ ಕಡೆ ಕೊಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯೇ? ಬಜೆಟ್ನಲ್ಲಿ ನೀಡಿದ ಅನುದಾನ ಆ ಕ್ಷೇತ್ರಕ್ಕೆ ಹೊರತು, ಅಲ್ಲಿನ ಶಾಸಕರಿಗಲ್ಲ. ಅಷ್ಟಕ್ಕೂ ಬಿಜೆಪಿ ಸರ್ಕಾರವು ತನ್ನ ಪಕ್ಷದಿಂದ ಅನುದಾನ ನೀಡುತ್ತಿಲ್ಲ. ಜನರ ತೆರಿಗೆ ಹಣವನ್ನು ಹಂಚಿಕೆ ಮಾಡುತ್ತಿದೆ ಎಂಬುದು ನೆನಪಿರಲಿ ಎಂದು ಸೂಚ್ಯವಾಗಿ ಹೇಳಿದರು.
“ಮಂಡ್ಯದಲ್ಲಿ ಅರಳಿದ ಕಮಲ ಮುಂದೆ ಮುದುಡಲೂಬಹುದು’ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಮಂಡ್ಯದಲ್ಲಿ ಹಲವು ವರ್ಷಗಳ ಹಿಂದೆ ಕಾಂಗ್ರೆಸ್ ಗೆದ್ದಿತ್ತು. ನಂತರ ಅಲ್ಲಿ ಜೆಡಿಎಸ್ ಗೆಲುವು ಸಾಧಿಸುತ್ತಾ ಬಂದಿತು. ಅಷ್ಟೇ ಯಾಕೆ, ನಂಜನಗೂಡ, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೂ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಲಿಲ್ಲವೇ. ಹಾಗಾಗಿ, ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಈಗ ಮೊದಲ ಬಾರಿ ಮಂಡ್ಯದಲ್ಲಿ ಕಮಲ ಅರಳಿರಬಹುದು. ಹಾಗೆ ಅರಳಿದ್ದು ಮುದುಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ