ಗಬ್ಬೂರು ಠಾಣೆಗೆ ಫಸ್ಟ್‌ ರ್‍ಯಾಂಕ್‌ ಗರಿ

ದೇಶದಲ್ಲಿ 17ನೇ ಸ್ಥಾನಜನಸಂಪರ್ಕಕ್ರೈಂ ರೇಟ್‌ ಮೇಲೆ ಶ್ರೇಣಿ

Team Udayavani, Dec 19, 2019, 12:13 PM IST

19-December-7

„ವಿಶೇಷ ವರದಿ
ದೇವದುರ್ಗ:
ಸಮೀಪದ ಗಬ್ಬೂರು ಪೊಲೀಸ್‌ ಠಾಣೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ದೇಶಕ್ಕೆ 17ನೇ ಸ್ಥಾನ ಗಳಿಸುವ ಮೂಲಕ ಜನಸ್ನೇಹಿ ಠಾಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದಲ್ಲಿ ಫಸ್ಟ್‌ ರ್‍ಯಾಂಕ್‌ ಪಡೆದಿದ್ದು, ಜಿಲ್ಲೆಯ ಪೊಲೀಸ್‌ ಇಲಾಖೆಗೆ ಕಿರೀಟದ ಗರಿ ಮುಡಿಗೇರಿದೆ.

ಪ್ರತಿವರ್ಷ ಕೇಂದ್ರ ಗೃಹ ಇಲಾಖೆ ದೇಶಾದ್ಯಂತ ಸಮೀಕ್ಷೆ ಮಾಡಿ ಟಾಪ್‌ 10 ಹಾಗೂ ಟಾಪ್‌ 20 ಶ್ರೇಣಿ ಬಿಡುಗಡೆ ಮಾಡುತ್ತದೆ. 2019-20ನೇ ಸಾಲಿನಲ್ಲಿ ಕೇಂದ್ರ ಸಚಿವ ಅಮಿತ್‌ ಷಾ ಬಿಡುಗಡೆ ಮಾಡಿದ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಗಬ್ಬೂರು ಪೊಲೀಸ್‌ ಠಾಣೆ 17ನೇ ರ್‍ಯಾಂಕ್‌ ಪಡೆದಿದ್ದರೆ, ರಾಜ್ಯದಲ್ಲಿ ಟಾಪ್‌ ಒನ್‌ ಸ್ಥಾನ ಪಡೆದಿದೆ. ಇದು ಗಬ್ಬೂರು ಠಾಣೆ ಪೊಲೀಸ್‌ ಸಿಬ್ಬಂದಿ ಮಾತ್ರವಲ್ಲ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಭ್ರಮಕ್ಕೆ ಕಾರಣವಾಗಿದೆ.

ಸಾರ್ವಜನಿಕರ ಜೊತೆ ಪೊಲೀಸರ ಉತ್ತಮ ಸಂಪರ್ಕ, ಅಪರಾಧ ಪ್ರಮಾಣ, ಪೊಲೀಸ್‌ ಠಾಣೆ ಕಟ್ಟಡ, ಸಿಬ್ಬಂದಿಗಳ ಶಿಸ್ತು, ಇನ್ನಿತರ ಅಂಶಗಳನ್ನು ಪರಿಗಣಿಸಿ ವಿವಿಧ ಮಾನದಂಡಗಳನ್ನು ಸರ್ವೇಯಲ್ಲಿ ಪರಿಗಣಿಸಲಾಗುತ್ತಿದೆ. ಪೊಲೀಸ್‌ ಠಾಣೆ ಎಂದರೆ ಮಾರು ದೂರ ಹೋಗುವ ಪರಿಸ್ಥಿತಿ ಇಂದು ಬದಲಾಗಿದೆ ಎನ್ನುವುದಕ್ಕೆ ಗಬ್ಬೂರು ಠಾಣೆಯೇ ಸಾಕ್ಷಿ. ಗೃಹ ಇಲಾಖೆ ಆರಂಭಿಸಿದ ಜನಸ್ನೇಹಿ ಪೊಲೀಸ್‌ ಠಾಣೆ ಯೋಜನೆ ತಾಲೂಕಿನಲ್ಲಿ ವರ್ಕ್‌ಔಟ್‌ ಆಗಿದ್ದು, ಆಗಾಗ ನಡೆಯುವ ಸಭೆ, ಸಮಾರಂಭ, ಕಾರ್ಯಕ್ರಮಗಳಿಗೆ ಸಾರ್ವಜನಿಕರು ಕೈಜೋಡಿಸುವ ಮೂಲಕ ಉತ್ತಮ ಸಂಬಂಧ  ಬೆಳೆಸಿಕೊಂಡಿದ್ದಾರೆ.

ಆಯ್ಕೆಗೆ ಮಾನದಂಡೆಗಳು ಏನು: ಕೇಂದ್ರ ಗೃಹ ಇಲಾಖೆ ಪೊಲೀಸ್‌ ಠಾಣೆಗೆ ರ್‍ಯಾಂಕ್‌ಗಳನ್ನು ನೀಡುವಾಗ ಹಲವು ಮಾನದಂಡಗಳನ್ನು ಪರಿಗಣಿಸುತ್ತದೆ. ಪೊಲೀಸರು ಸಾರ್ವಜನಿಕರೊಂದಿಗೆ ಸಂಪರ್ಕ, ಅಪರಾಧ ಪ್ರಮಾಣ, ಕ್ರೈಂ ರೇಟ್‌, ಠಾಣೆಯ ಸ್ವತ್ಛತೆ, ವಾತಾವರಣ, ಗಾರ್ಡನ್‌, ಮಹಿಳಾ ಸುರಕ್ಷತೆ, ಜನಸಂಪರ್ಕ ಸಭೆ, ಪೊಲೀಸ್‌ ಠಾಣೆ ಕಟ್ಟಡ, ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳ ಶಿಸ್ತು, ವಸತಿ ಸೌಲಭ್ಯ, ವ್ಯಾಜ್ಯಗಳ ವಿಲೇವಾರಿ ಸೇರಿ ಹತ್ತಾರು ಅಂಶಗಳನ್ನು ಪರಿಗಣಿಸಿ ರ್‍ಯಾಂಕಿಂಗ್‌ ನೀಡಲಾಗುತ್ತಿದೆ. 2018ರ ಸಾಲಿನಲ್ಲಿ ಧಾರವಾಡ ಜಿಲ್ಲೆ ಗುಡಗೇರಿ ದೇಶದಲ್ಲಿ ಐದನೇ ಹಾಗೂ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿತ್ತು.

ಈ ವರ್ಷ ರಾಜ್ಯದಲ್ಲಿ ರಾಯಚೂರು ಜಿಲ್ಲೆಯ ಗಬ್ಬೂರು ಪೊಲೀಸ್‌ ಠಾಣೆ, ವಿಜಯಪುರು ಜಿಲ್ಲೆಯ ಮನಗೂಳಿ ಪೊಲೀಸ್‌ ಠಾಣೆ, ಗದಗ ಜಿಲ್ಲೆಯ ಮುಂಡರಗಿ ಪೊಲೀಸ್‌ ಠಾಣೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅಂತಿಮ ವರದಿಯಲ್ಲಿ ರಾಯಚೂರು ಜಿಲ್ಲೆಯ ಗಬ್ಬೂರು ಪೊಲೀಸ್‌ ಠಾಣೆ ರಾಜ್ಯದಲ್ಲಿ ಬೆಸ್ಟ್‌ ಠಾಣೆ ಎನ್ನುವ ರ್‍ಯಾಂಕಿಂಗ್‌ ಪಡೆದಿದೆ. ಕೇಂದ್ರ ಗೃಹ ಇಲಾಖೆಯ ರ್‍ಯಾಂಕಿಂಗ್‌, ಠಾಣೆ ಸಿಬ್ಬಂದಿ ಖುಷಿ ಇಮ್ಮಡಿಗೊಳಿಸಿದೆ.

ಗಬ್ಬೂರು ಪೊಲೀಸ್‌ ಠಾಣೆ ದೇಶದಲ್ಲಿ 17ನೇ ಹಾಗೂ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ನಮಗೆ ಹೆಮ್ಮೆ ಎನಿಸಿದೆ. ಎಸ್ಪಿ ಅವರ ಮಾರ್ಗದರ್ಶದಲ್ಲಿ ಉತ್ತಮ ಜನಸ್ನೇಹಿ ಠಾಣೆ ನಿರ್ಮಾಣ ಮಾಡಿದ್ದೇವೆ.

ಕೇಂದ್ರ ಗೃಹ ಇಲಾಖೆ ಹಲವು ಅಂಶಗಳನ್ನು ಪರಿಗಣಿಸಿ ರ್‍ಯಾಂಕಿಂಗ್‌ ನೀಡುತ್ತದೆ. ಈ ಶ್ರೇಣಿಯನ್ನು ಹೀಗೆಯೇ ಕಾಪಾಡಿಕೊಂಡು ಹೋಗುತ್ತೇವೆ.
ರಂಗಯ್ಯ,
ಪಿಎಸ್‌ಐ, ಗಬ್ಬೂರು ಪೊಲೀಸ್‌ ಠಾಣೆ

ಗಬ್ಬೂರು ಠಾಣೆಯಲ್ಲಿ
ಲಾ ಆ್ಯಂಡ್‌ ಹಾರ್ಡರ್‌
ಕಟ್ಟುನಿಟ್ಟಾಗಿ ಪಾಲನೆಯಾಗಿದ್ದು,
ಇದರಿಂದ ಅಪರಾಧ, ಕಳ್ಳತನ ಸೇರಿ
ವಿವಿಧ ಕ್ರೈಂ ಗಳು ಇಳಿಕೆಯಾಗಿವೆ.
ರಾಜ್ಯದಲ್ಲಿ ಫಸ್ಟ್‌ ಹಾಗೂ ದೇಶದಲ್ಲಿ
17ನೇ ಸ್ಥಾನ ಪಡೆದಿರುವುದು ಹೆಮ್ಮೆಯ
ವಿಷಯ. ಗಬ್ಬೂರು ಠಾಣೆ ಸಿಬ್ಬಂದಿಗೆ
ಅಭಿನಂದಿಸುವೆ.
ಡಾ| ಸಿ.ಬಿ. ವೇದಮೂರ್ತಿ,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಯಚೂರು.

ಟಾಪ್ ನ್ಯೂಸ್

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.