ಇಲಾಖೆಯಿಂದಲೇ ಕಡಂದಲೆ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಕೆ
ಪ್ರಥಮ ಬಾರಿ ಫೈಬರ್ ಹಲಗೆ ಬಳಕೆ ; ಅಕ್ಕಪಕ್ಕದ ಗದ್ದೆಗಳು ಜಲಾವೃತ
Team Udayavani, Dec 20, 2019, 6:18 AM IST
ವಿಶೇಷ ವರದಿ –ಬೆಳ್ಮಣ್: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಮೂಡಬಿದಿರೆ ಮಾಜಿ ಶಾಸಕ ಅಭಯಚಂದ್ರ ಜೈನ್ ಅವರ ಮುತುವರ್ಜಿಯಲ್ಲಿ ಕಡಂದಲೆ ಕಲ್ಲೋಳಿಯಲ್ಲಿ ನವೀಕರಣಗೊಂಡು ಹಿಂದಿನ ಕಿಂಡಿ ಆಣೆಕಟ್ಟುವಿನ ಪಕ್ಕ ದಲ್ಲೇ ನಿರ್ಮಾಣಗೊಂಡ ನೂತನ ಕಿಂಡಿ ಆಣೆಕಟ್ಟುವಿಗೆ ಈ ಬಾರಿ ಸಣ್ಣ ನೀರಾವರಿ ಇಲಾಖೆಯಿಂದಲೇ ಹಲಗೆ ಅಳವಡಿಸಲಾಗಿ ಶಾಂಭವಿ ನದಿ ತುಂಬಿ ತುಳುಕಿದೆ.
ಉತ್ತಮ ಗುಣಮಟ್ಟದ ಫೈಬರ್ ಹಲಗೆ ಮೂಲಕ ಅಣೆಕಟ್ಟುವಿನ ನಿರ್ವಹಣೆ ನಡೆದಿದ್ದು ಗುರುವಾರ ನೀರು ಉಕ್ಕಿ ಹರಿದಿದ್ದು ಪಕ್ಕದ ಗದ್ದೆಗಳು ಜಲಾವೃತವಾಗಿ ಹಳೆ ಕಿಂಡಿ ಅಣೆಕಟ್ಟುವಿನ ಕಿರು ಸೇತುವೆಯೂ ಮುಳುಗಿದ ಪರಿಣಾಮ ಅಣೆಕಟ್ಟುವಿನ ಒಂದು ಕಿಂಡಿ ತೆರೆಯಲಾಯಿತು. ಇತ್ತೀಚೆಗಿನವರೆಗೂ ಮಳೆ ನಿರಂತರವಾಗಿದ್ದರಿಂದ ನೀರಿನ ಪ್ರಮಾಣ ಅಧಿಕವಾಗಿ ಶಾಂಭವಿ ನದಿಯಲ್ಲಿ ಇನ್ನೂ ನೀರಿನ ಹರಿವು ಇದೆ ಎಂದು ಈ ಭಾಗದ ಕೃಷಿಕರು ತಿಳಿಸಿದ್ದಾರೆ. ಕಾರ್ಕಳ ತಾ.ಪಂ. ಮಾಜಿ ಸದಸ್ಯೆ ಶಕುಂತಳಾ ಶೆಟ್ಟಿಯವರ ಗದ್ದೆ ಜಲಾವೃತಗೊಂಡಿದೆ.
ಮುಂಡ್ಕೂರು ಪಂ. ಮುತುವರ್ಜಿ
ಈ ಅಣೆಕಟ್ಟು ನಿರ್ವಹಣೆಯ ಬಗ್ಗೆ ಸಣ್ಣ ನೀರಾವರಿ ಇಲಾಖೆ ಜವಾಬ್ದಾರಿ ವಹಿಸಿದ್ದರೂ ಮುಂಡ್ಕೂರು ಗ್ರಾಮ ಪಂಚಾಯತ್ ಸಂಪೂರ್ಣ ಜವಾಬ್ದಾರಿ ವಹಿಸಿದೆ ಎಂದು ಪಂಚಾಯತ್ ಅಧ್ಯಕ್ಷೆ ಶುಭಾ ಪಿ. ಶೆಟ್ಟಿ ತಿಳಿಸಿದ್ದಾರೆ.
ನೂರಾರು ಎಕರೆ ಕೃಷಿ ಭೂಮಿ ಹಸಿರು
ಕಲ್ಲೋಳಿ ಅಣೆಕಟ್ಟುವಿನ ಸಮರ್ಪಕ ನಿರ್ವಹಣೆಯಿಂದ ಶಾಂಭವಿ ನದಿ ತುಂಬಿ ತುಳುಕಿದ ಪರಿಣಾಮ ಕಡಂದಲೆ, ಬೋಳ ಭಾಗದ ಕೃಷಿಕರಿಗೆ ಬಹಳಷ್ಟು ಅನುಕೂಲವಾಗಲಿದ್ದು ಈ ಭಾಗದಲ್ಲಿ ಸುಮಾರು 500 ಎಕರೆಗಳಷ್ಟು ಕೃಷಿ ಭೂಮಿ ಹಸಿರಾಗಲಿದೆ.
ನಿರ್ವಹಣೆ ಮಾಡಲಾಗುವುದು
ಈ ಕಿಂಡಿ ಅಣೆಕಟ್ಟುವಿನ ನಿರ್ವಹಣೆಯ ಬಗ್ಗೆ ಮುಂಡ್ಕೂರು ಗ್ರಾಮ ಪಂಚಾಯತ್ ಕಾಳಜಿ ವಹಿಸಲಿದೆ.
-ಶುಭಾ ಪಿ. ಶೆಟ್ಟಿ. ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ
ಜನರಿಗೆ ಪ್ರಯೋಜನವಾಗಲಿ
ಜನರಿಗೆ ಉಪಕಾರವಾಗುವುದಾದರೆ ನನ್ನ ಕೃಷಿ ಭೂಮಿ ಮುಳುಗಿದರೂ ತೊಂದರೆ ಇಲ್ಲ.
-ಶಕುಂತಳಾ ಶೆಟ್ಟಿ ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಸದಸ್ಯೆ
ನೀಗಿದ ನೀರಿನ ಬವಣೆ
ಈ ಅಣೆಕಟ್ಟು ನಿರ್ವಹಣೆಯಿಂದ ಈ ಭಾಗದ ಕೃಷಿಕರ ನೀರಿನ ಬವಣೆ ನೀಗಿದೆ.
-ಶರತ್ ಶೆಟ್ಟಿ ಸಚ್ಚೇರಿಪೇಟೆ,ಉದ್ಯಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ