ವೈರಲ್ ಆಯಿತು ಆರಾಧ್ಯಾ ಬಚ್ಚನ್ ಮಹಿಳಾ ಸಬಲೀಕರಣ ಮಾತು
Team Udayavani, Dec 21, 2019, 9:21 PM IST
ಮುಂಬೈ: ಮಹಿಳೆಯರ ಸಬಲೀಕರಣದ ಬಗ್ಗೆ ಬಾಲಿವುಡ್ ದಂಪತಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಪುತ್ರಿ ಆರಾಧ್ಯಾ ಮಾಡಿದ ಭಾಷಣ ಈಗ ವೈರಲ್ ಆಗಿದೆ. ಪುತ್ರಿಯ ಶಾಲೆಯ ವಾರ್ಷಿಕ ದಿನ ಪ್ರಯುಕ್ತ ಈ ಕಾರ್ಯಕ್ರಮ ನಡೆದಿತ್ತು.
ಅದರಲ್ಲಿ ಮಹಿಳೆಯರ ಸಬಲೀಕರಣಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಆರಾಧ್ಯಾ ಹಸಿರು ಮತ್ತು ಕೆಂಪು ಬಣ್ಣದ ದಿರಿಸು ತೊಟ್ಟು, “ನಾನು ಕನ್ಯಾ, ನಾನು ಕನಸು. ಹೊಸ ದಿನಗಳ ಕನಸು. ಹೊಸ ಜಗತ್ತನ್ನು ನಾವು ಎಚ್ಚರಿಸುತ್ತೇವೆ. ಆ ಜಗತ್ತಿನಲ್ಲಿ ಸುರಕ್ಷಿತವಾಗಿರುತ್ತೇನೆ. ನಾನು ಅಲ್ಲಿ ಪ್ರೀತಿ, ಗೌರವ ಪಡೆಯುತ್ತೇನೆ. ಅಲ್ಲಿ ನನ್ನ ಧ್ವನಿಯನ್ನು ಹತ್ತಿಕ್ಕಲಾಗುವುದಿಲ್ಲ. ಆದರೆ ಪ್ರೌಢಿಮೆಯಿಂದ ಅಭಿಪ್ರಾಯಗಳಿಗೆ ಗೌರವ ಸೂಚಿಸಲಾಗುತ್ತದೆ. ಜೀವನ ಎಂಬ ಪುಸ್ತಕಗಳಿಂದ ಅನುಭವ ಹೊರ ಬರುತ್ತದೆ. ಇದರಿಂದಾಗಿ ಮಾನವತೆ ಎಂಬ ನದಿಯ ಜತೆಗೆ ಅದು ಹರಿಯುತ್ತದೆ. ನಾವು ಯಾರಿಗೂ ಕಮ್ಮಿ ಇಲ್ಲ’ ಎಂದು ಹೇಳಿರುವ ಮಾತುಗಳು ವೈರಲ್ ಆಗಿವೆ. ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್, ರವೀನಾ ಟಂಡನ್, ಶಾರುಖ್ ಖಾನ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ
Mumbai Hoarding Collapse; ರಾಜಸ್ಥಾನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಮುಖ ಆರೋಪಿ
Covishield ಲಸಿಕೆಯಿಂದ ಮತ್ತೊಂದು ಸೈಡ್ಎಫೆಕ್ಟ್!