ಬಿಸಗೋಡ ಶಾಲೆಗೆ 75ರ ಸಂಭ್ರಮ

1994ರಲ್ಲಿ ಆರಂಭಗೊಂಡ ಶಾಲೆಸ್ಮಾರ್ಟ್‌ ಕೊಠಡಿ-ಪ್ರವೇಶ ದ್ವಾರ ನಿರ್ಮಾಣ

Team Udayavani, Dec 26, 2019, 5:33 PM IST

26-December-21

ನರಸಿಂಹ ಸಾತೊಡ್ಡಿ

ಯಲ್ಲಾಪುರ: ಗ್ರಾಮದ ಒಬ್ಬರ ಮನೆ ಜಗುಲಿಯಿಂದ 1944 ರಲ್ಲಿ ಆರಂಭವಾದ ಶಾಲೆ ನಂತರ ಸೋಗೆ ಜೋಪಡಿ ಮಣ್ಣಿನ ಗೋಡೆ ಹೊಂದಿ, ಕಾಲಕ್ರಮೇಣ ಕಟ್ಟಡ ಹೊಂದಿ ಈಗ ಅದೇ ಶಾಲೆ 75 ವಸಂತಗಳನ್ನು ಪೂರೈಸಿ ಹಳಬರನ್ನು ಸ್ಮರಿಸುವ ಹೊಸಬರಿಗೆ ಹೊಸತನ ಕೊಡುವತ್ತ ದಾಪುಗಾಲಿಟ್ಟ ಬಿಸಗೋಡಿನ ಸಹಿಪ್ರಾ ಶಾಲೆ ಅಮೃತಹೋತ್ಸವಕ್ಕೆ ಕಾಲಿಟ್ಟಿದೆ.

ಮನೆಯೊಂದರಲ್ಲಿದ್ದ ಶಾಲೆ ಸುತ್ತಲ ಗ್ರಾಮದವರಿಗೆ ಅನುಕೂಲವಾಗುವ ಬಿಸಗೋಡಿಗೆ ಸ್ಥಳಾಂತರಗೊಂಡಿತು. 1946 ರ ಸುಮಾರಿಗೆ ಮಣ್ಣಿನ ಗೋಡೆ ಹಾಕಿ, ಸೋಗೆ ಮುಚ್ಚಿಗೆಯೊಂದಿಗೆ ಶಾಲಾ ನಿರ್ಮಾಣವಾಯಿತು. ಈ ಮೂಲಕ ಮಕ್ಕಳ ಭವಿಷ್ಯಕ್ಕೆ ಅಕ್ಷರದ ಬೀಜ ಬಿತ್ತುವ ಕಾರ್ಯಕ್ಕೆ ವೇಗ ಬಂದಿತು. ಹಲವು ವರ್ಷಗಳ ಕಾಲ ಹೀಗೇಯೇ ಶಾಲೆ ಮುಂದುವರಿಯಿತು. 10-15
ಮಕ್ಕಳು ಶಾಲೆಗೆ ಬರತೊಡಗಿದರು. ಊರವರ ಆಶ್ರಯದಲ್ಲಿ ಮಾಸ್ತರರು ಇದ್ದು ಶಾಲೆಗೆ ಬಂದು ಮಕ್ಕಳಿಗೆ ಕಲಿಸುತ್ತಿದ್ದರು.

ನಾಲ್ಕನೇ ತರಗತಿವರೆಗೆ ಶಿಕ್ಷಣದ ವ್ಯವಸ್ಥೆ ಇತ್ತು. ಕುಳಕುಂಡೆ ಮಾಸ್ತರರು, ನಂತರ ರಾಮಚಂದ್ರ ನಾರಾಯಣ ಭಟ್ಟ ಬೆತ್ತಗೇರಿ ಎಂಬ ಮಾಸ್ತರರು, ಕೊಟ್ಟೆ ಚಿದಂಬರ ಭಟ್ಟ, ಬಾರೆ ಮಾಸ್ತರರು ಹೀಗೆ ಶಿಕ್ಷಕರಾಗಿ ಶಾಲೆ ನಡೆಸುತ್ತಾ ಬಂದರು. 1946ರಲ್ಲಿ ಸ್ಕೂಲ್‌ ಬೋರ್ಡ್‌ ವ್ಯವಸ್ಥೆಗೆ ಶಾಲೆ ಸೇರಿ ಊರವರೆಲ್ಲ ಸೇರಿ ಕಟ್ಟಡ ಸಾಮಗ್ರಿ ಸಂಗ್ರಹಿಸಿ ಶಾಲೆಗೊಂದು ಗಟ್ಟಿಯಾದ ಕಟ್ಟಡವೊಂದು ದೊರಕುವಲ್ಲಿ ಶ್ರಮಿಸಿದರು.

ಜೂನ್‌ 1, 1946ರಲ್ಲಿ ಸರಕಾರದಿಂದ ಅಧಿಕೃತವಾಗಿ ಶಾಲೆ ಆರಂಭವಾಯಿತು. 1948 ರಿಂದ 1976ರ ವರೆಗೆ ಊರವರು ಶ್ರಮದಾನದ ಮೂಲಕ ಕಟ್ಟಿದ್ದ ಕಟ್ಟಡದಲ್ಲಿಯೇ ಶಾಲೆ ನಡೆಯುತ್ತ ಬಂದಿತು. ಮಕ್ಕಳ ಸಂಖ್ಯೆ ಹೆಚ್ಚಾಗಿ ಕಟ್ಟಡ ಸಾಲುತ್ತಿರಲಿಲ್ಲ.

1962ರಲ್ಲಿ ಕರ್ನಾಟಕ ಸರಕಾರದ ಅಂಗ ಸಂಸ್ಥೆಯಾದ ಮೈಸೂರು ಮಿನರಲ್ಸ್‌ ಲಿಮಿಟೆಡ್‌ ಮ್ಯಾಂಗನೀಸ್‌ ಅದಿರು ತೆಗೆಯಲು ಬಿಸಗೋಡಿಗೆ ಪ್ರವೇಶಮಾಡಿತು. ಕಾರ್ಮಿಕರ ಮಕ್ಕಳೆಲ್ಲ ಇದೇ ಶಾಲೆಗೆ ಸೇರತೊಡಗಿದರು. 1977-78 ರಲ್ಲಿ ಆರು ಏಳನೇ ತರಗತಿ
ಆರಂಭಗೊಂಡಿದ್ದು ಈ ಭಾಗದ ಮಕ್ಕಳಿಗೆ ಅನುಕೂಲವಾಯಿತು. ಮೈಸೂರು ಮಿನರಲ್ಸ್‌ ಲಿಮಿಟೆಡ್‌ ಕಂಪೆನಿಗೆ ಶಾಲೆಗೆ ಕೊಠಡಿ ಅವಶ್ಯಕತೆ ತೀವ್ರವಾಗಿ ಕಂಡು ಬಂದು ಮೂರು ಕೊಠಡಿಗಳನ್ನು ತಾನೇ ನಿರ್ಮಿಸಿಕೊಟ್ಟಿತು. ದಿನೇ ದಿನೇ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿ ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸುವ ಕಾಯಕ ಈ ಶಾಲೆಯಲ್ಲಿ ನಿರಂತರವಾಗಿ ನಡೆಯುತ್ತ ಸಾಗಿತು.

ಈ ಹಿನ್ನೆಲೆಯಲ್ಲಿ ಎಂಎಂಎಲ್‌ ಸಂಸ್ಥೆ ಹಿರಿಯ ಅಧಿಕಾರಿಗಳಾಗಿದ್ದ ದಿ| ಎ.ಎಸ್‌. ಗಿರಿರಾವ್‌ ಶಿಕ್ಷಣಕ್ಕಾಗಿ ನೀಡಿದ ಕೊಡುಗೆಗಳನ್ನು ಈ ಭಾಗದ ಜನ ಮರೆಯುವಂತಿಲ್ಲ. ಈವರೆಗೆ ಈ ಶಾಲೆಯಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉತ್ತಮ ಉದ್ಯೋಗಗಳಲ್ಲಿ ತೊಡಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತ ಸಾಗಿದ್ದಾರೆ. ಈ ಶಾಲೆಯಲ್ಲಿ ಸೇವೆ ಸಲ್ಲಿಸಿರುವ, ಸಲ್ಲಿಸುತ್ತಿರುವ ಎಲ್ಲ ಶಿಕ್ಷಕರನ್ನು, ಮಕ್ಕಳನ್ನು, ಶಾಲೆಗಾಗಿ ಹೆಗಲುಕೊಟ್ಟು ದುಡಿದವರನ್ನು ಸ್ಮರಿಸಲು ಅಮೃತಮಹೋತ್ಸವ ಹಮ್ಮಿಕೊಂಡಿದೆ.

ಅಮೃತ ಮಹೋತ್ಸವದಲ್ಲಿ ಹತ್ತಾರು ದಾನಿಗಳ ಕೊಡುಗೆ ಪಡೆದು ಸ್ಮಾರ್‌r ಕೊಠಡಿ, ಪ್ರವೇಶದ್ವಾರ, ಶಾಲೆಗೆ ಸುಣ್ಣಬಣ್ಣ ಅಲಂಕಾರ, ಆವರಣಗೋಡೆ, ಶೌಚಾಲಯ, ನೂತನ ಕಟ್ಟಡ, ಕಟ್ಟಡದ ಜೀಣೋದ್ಧಾರ ಹೀಗೆ ಒಂದಿಷ್ಟು ರಚನಾತ್ಮಕ ಯೋಜನೆಗಳನ್ನು ಹಾಕಿಕೊಂಡಿದೆ.

ಡಿ.27 ಮತ್ತು 28ರಂದು ವಿವಿಧ ಕಾರ್ಯಕ್ರಮದ ಮೂಲಕ ಅಮೃತಮಹೋತ್ಸವ ಆಚರಿಸಿಕೊಳ್ಳುತ್ತಿದೆ. ವಿಧಾನಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿಕ್ಷಣ ಸಚಿವ ಸುರೇಶಕುಮಾರ್‌,
ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಶಾಸಕರು ವಿವಿಧ ಸ್ಥರದ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವ ಮೂಲಕ ಮಹೋತ್ಸವ ವಿಶೇಷ ಮೆರಗನ್ನು ಪಡೆದುಕೊಳ್ಳುತ್ತಿದೆ.

ಯಕ್ಷಗಾನ ಪ್ರದರ್ಶನ, ಕುಂಚ ನರ್ತನ, ಯಕ್ಷದೃಶ್ಯ ಮಕ್ಕಳ ಮನರಂಜನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಎರಡು ದಿನ ಹಬ್ಬವನ್ನು ಬಿಸಗೋಡ ಭಾಗದ ಜನತೆಗೆ ಈ ಅಮೃತ ಮಹೋತ್ಸವ ಉಣಬಡಿಸುತ್ತಿದೆ.

ಟಾಪ್ ನ್ಯೂಸ್

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.