ಸರಳ ವಿಧಾನ… ನೀವೇ ಮನೆಯಲ್ಲೇ ತಯಾರಿಸಿ; ಸ್ಪೆಷಲ್ ಎಗ್ ಕರ್ರಿ ರೆಸಿಪಿ
ಮಕ್ಕಳ ಎಲುಬು, ಮೆದುಳು, ಕಣ್ಣಿನ ದೃಷ್ಟಿಶಕ್ತಿ ಮೊದಲಾದವುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ
Team Udayavani, Nov 5, 2020, 6:20 PM IST
ಮೊಟ್ಟೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ದಿನಕ್ಕೊಂದು ಮೊಟ್ಟೆ ತಿಂದರೆ ಬಾಯಿ ರುಚಿಯೂ ತೀರಿತು,ದೇಹಕ್ಕೆ ಶಕ್ತಿ ಪೂರಕೈಯೂ ಆಯಿತು. ಮೊಟ್ಟೆಯಲ್ಲಿ ಏನೆಲ್ಲಾ ಇದೆ ಎನ್ನುವುದಕ್ಕಿಂತ, ಏನಿಲ್ಲ ಎಂದು ಕೇಳುವುದು ಹೆಚ್ಚು ಸರಿ. ಮಿಟಮಿನ್ ಎ, ಬಿ, ಡಿ, ಇ ಗಳ ಜತೆಗೆ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಷಿಯಂ ಉತ್ತಮ ಮಟ್ಟದ ಪ್ರೊಟೀನ್ ಅಂಶಗಳನ್ನು ಮತ್ತಿತರ ಹಲವು ಆರೋಗ್ಯ ಸಂಬಂಧ ಅಗತ್ಯಗಳನ್ನು ಸುಲಭವಾಗಿ ಪೂರೈಸುತ್ತದೆ. ಮಕ್ಕಳ ಎಲುಬು, ಮೆದುಳು, ಕಣ್ಣಿನ ದೃಷ್ಟಿಶಕ್ತಿ ಮೊದಲಾದವುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ, ಏಕಾಗ್ರತೆ, ಬುದ್ಧಿಮತ್ತೆ ಬೆಳವಣೆಗೂ ಸಹಾಯ ಮಾಡುತ್ತದೆ.
ಮೊಟ್ಟೆಯಿಂದ ಏನು ತಯಾರಿಸಿದರೂ ರುಚಿಯೇ ಅದರಲ್ಲೂ ಎಗ್ ಕರ್ರಿ ಎಲ್ಲರ ಬಾಯಿಯಲ್ಲಿ ನೀರೂರಿಸುತ್ತದೆ. ಹಾಗಾದರೆ ಇನ್ನೇಕೆ ತಡ ಸ್ವಾಧಿಷ್ಟಕರವಾಗಿ ಸ್ಪೆಷಲ್ಎಗ್ ಕರ್ರಿ ಮಾಡಿ ಸ್ವಾಧಿಷ್ಟವಾಗಿ ಸವಿಯಿರಿ…
ಸ್ಪೆಷಲ್ ಎಗ್ ಕರ್ರಿ;ಬೇಕಾಗುವ ಪದಾರ್ಥಗಳು
ಮೊಟ್ಟೆ 4, ಈರುಳ್ಳಿ 2ರಿಂದ 3, ಶುಂಠಿ ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ಧನಿಯಾ ಪುಡಿ ಅರ್ಧಚಮಚ, ಟೊಮೆಟೋ 3, ಅಚ್ಚ ಖಾರದ ಪುಡಿ 1 ಚಮಚ, ಬೆಳ್ಳುಳ್ಳಿ 8 ಎಸಳು, ಜೀರಿಗೆ 1 ಚಮಚ, ಹಸಿ ಮೆಣಸಿನ ಕಾಯಿ 2ರಿಂದ 4, ಗರಂ ಮಸಾಲೆ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ
ಮೊದಲು ಮೊಟ್ಟೆ ಬೇಯಿಸಿಕೊಂಡು ತಣ್ಣಗಾದ ನಂತರ ಮೇಲಿನ ಸಿಪ್ಪೆ ತೆಗೆದು ನಾಲ್ಕು ಭಾಗ ಮಾಡಿದಂತೆ ಬುಡ ಬಿಚ್ಚಿಕೊಳ್ಳದಂತೆ ಕಟ್ ಮಾಡಿ ಇಟ್ಟುಕೊಳ್ಳಿ. ಟೊಮೆಟೋ, ಈರುಳ್ಳಿ ಸಣ್ಣಗೆ ಕಟ್ ಮಾಡಿ. ಕೊತ್ತಂಬರಿ ಸೊಪ್ಪು ಸಹ ಸಣ್ಣಗೆ ಕಟ್ ಮಾಡಿಕೊಳ್ಳಿ. ಶುಂಠಿ-ಬೆಳ್ಳುಳ್ಳಿ ನುಣ್ಣಗೆ ಅರೆದು ಪೇಸ್ಟ್ ಮಾಡಿಕೊಳ್ಳಿ. ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎರಡು ಚಮಚ ಎಣ್ಣೆ ಹಾಕಿ ಬಿಸಿಯಾಗಿರುವ ಎಣ್ಣೆಗೆ ಜೀರಿಗೆ ಹಾಕಿ ಒಗ್ಗರಣೆ ಮಾಡಿ.
ಈರುಳ್ಳಿ ಚೂರುಗಳನ್ನು ಹಾಕಿ ಹಸಿಮೆಣಸಿನಕಾಯಿ ಸಹ ಹಾಕಿ ಕೆಂಪಗೆ ಹುರಿದುಕೊಳ್ಳಿ. ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಫ್ರೈ ಮಾಡಿ. ಅರಿಶಿನ ಹಾಕಿ ಅಚ್ಚ ಖಾರದ ಪುಡಿ , ಧನಿಯಾ ಪುಡಿ ಹಾಕಿ ಚೆನ್ನಾಗಿ ಕಲೆಸಿ. ಉಪ್ಪು ಹಾಕಿ ಕಲೆಸಿ. ಮಸಾಲೆ ಬೇಯಿಸಲು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಫ್ರೈ ಮಾಡಿದ ನಂತರ ಮಿಶ್ರಣ ಕೆಳಗೆ ಇಳಿಸಿ ನಾಲ್ಕು ಭಾಗ ಮಾಡಿರುವ ಮೊಟ್ಟೆಯ ನಡುವೆ ಮಸಾಲೆ ತುಂಬಿಸಿ.
ಇನ್ನೊಂದು ಬಾಣಲೆ ಒಲೆಯ ಮೇಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ. ಬಿಸಿಯಾದ ಎಣ್ಣೆಗೆ ಮಸಾಲೆ ತುಂಬಿರುವ ಮೊಟ್ಟೆ ಇಟ್ಟು ಎರಡು ಕಡೆ ಫ್ರೈ ಮಾಡಿ ಉಳಿದ ಮಸಾಲೆಗೆ ನೀರು ಸೇರಿಸಿ ಮೊಟ್ಟೆಯ ಮೇಲೆ ಹಾಕಿ. ನಂತರ ಗರಂ ಮಸಾಲೆ ಯನ್ನು ಹಾಕಿ , ಸಣ್ಣಗೆ ಹೆಚ್ಚಿರುವ ಕೊತ್ತಂಬರಿ ಸೊಪ್ಪು ಹಾಕಿರಿ. ಎರಡು ನಿಮಿಷಗಳ ನಂತರ ಕೆಳಗೆ ಇಳಿಸಿ. ರುಚಿಕರವಾದ ಸ್ವಾಧಿಷ್ಟಕರ ಸ್ಪೆಷಲ್ ಎಗ್ ಕರ್ರಿ ಸವಿಯಲು ರೆಡಿ. ಅನ್ನ ಹಾಗೂ ಚಪಾತಿ ಜೊತೆ ಈ ಕರ್ರಿ ತುಂಬಾನೇ ರುಚಿಯಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Inheritance Tax: ಸ್ಯಾಮ್ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!
MUST WATCH
ಹೊಸ ಸೇರ್ಪಡೆ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್