ಆರದ ಸಿಎಎ-ಎನ್ಆರ್ಸಿ ಕಾವು
Team Udayavani, Jan 3, 2020, 10:49 AM IST
ಹುಬ್ಬಳ್ಳಿ: ದೇಶದ ಭದ್ರತೆ ದೃಷ್ಟಿಯಲ್ಲಿ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಲೇಬೇಕು ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ “ತಿರಂಗಾ ಯಾತ್ರೆ’ ಮಾಡುವ ಮೂಲಕ ಕಾಯ್ದೆಗೆ ಬೆಂಬಲ ಸೂಚಿಸಿತು. ವಿದ್ಯಾನಗರ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಆವರಣದಿಂದ ರಾಯಣ್ಣ ವೃತ್ತದ ವರೆಗೆ ಜಾಗೃತಿ ಜಾಥಾ ನಡೆಸಿದ ಸಾವಿರಾರು ವಿದ್ಯಾರ್ಥಿಗಳು ಬಸವವನದಿಂದ ತಿರಂಗಾ ಯಾತ್ರೆ ನಡೆಸಿ ದೇಶದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಘೋಷಣೆ ಮೊಳಗಿಸಿದರು. ರಾಯಣ್ಣ ವೃತ್ತದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಎಬಿವಿಪಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮೀಸೆ, ದೇಶದಲ್ಲಿ ಅಕ್ರಮ ನಸುಳುಕೋರರಿದ್ದು, ಅವರನ್ನು ಹೊರ ಹಾಕಬೇಕಾಗಿದೆ. ಆದ್ದರಿಂದ ಸಿಎಎ-ಎನ್ಆರ್ಸಿ ಜಾರಿಯಾಗಲೇಬೇಕು ಎಂದರು.
ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ದೇಶದಲ್ಲಿ ನಾವು ಭಾರತೀಯರು ಎಂದು ಹೇಳಿಕೊಳ್ಳಲು ಒಂದು ಗುರುತು ನೀಡಲು ಹೊರಟರೆ ಅದಕ್ಕೆ ಆಕ್ಷೇಪಗಳು ಕೇಳಿ ಬರುತ್ತವೆ. ನಾವೆಲ್ಲರೂ ಒಕ್ಕೊರಲಿನಿಂದ ಸಿಎಎ ಹಾಗೂ ಎನ್ಆರ್ಸಿಯನ್ನು ಬೆಂಬಲಿಸೋಣ ಎಂದು ಹೇಳಿದರು. ಎಬಿವಿಪಿ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ ಮಾತನಾಡಿ, ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಲು ಹೊರಟರೆ ಕೆಲವರು ವಿರೋಧಿಸುವ ಮೂಲಕ ಗಲಭೆ ಸೃಷ್ಟಿಸಲು ಮುಂದಾಗುತ್ತಾರೆ ಇದು ಸರಿಯಲ್ಲ ಎಂದರು.
ಡಾ| ಪುನೀತಕುಮಾರ, ಸ್ವಾತಿ, ಪ್ರತೀಕ ಮಾಳಿ, ರಮೇಶ ಮೊದಲಾದವರು ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ