11ರಂದು ನಗರ ನೀಲಕಂಠೇಶ್ವರ ಸಂಘದ ಚುನಾವಣೆ
Team Udayavani, Jan 5, 2020, 1:26 PM IST
ಹೊಸನಗರ: ಸಹಕಾರಿ ಕ್ಷೇತ್ರದಲ್ಲಿ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ಗಳಲ್ಲಿ ಒಂದಾಗಿರುವ ನಗರ ನೀಲಕಂಠೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ ಚುನಾವಣೆ ಜ.11ರಂದು ನಡೆಯಲಿದೆ.
ಸಾಲಗಾರರ ಕ್ಷೇತ್ರದಿಂದ 11 ಸ್ಥಾನ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ 1 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಜ.4 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, ಒಟ್ಟು 30 ನಾಮಪತ್ರಗಳು ಸಲ್ಲಿಕೆಯಾಗಿದೆ. ಸಾಲಗಾರರ ಕ್ಷೇತ್ರದಿಂದ ಮೂಡುಗೊಪ್ಪ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಮಾನ್ಯ(1), ಸಾಮಾನ್ಯ ಮಹಿಳೆ(1), ಬಿಸಿಎಂ(ಎ)(2) ಮತ್ತು ಪಪಂ(1) ಸ್ಥಾನ, ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ 2 ಸ್ಥಾನವಿದ್ದು, ಒಂದು ಮಹಿಳೆ ಮತ್ತು ಮತ್ತೂಂದು ಸಾಮಾನ್ಯಕ್ಕೆ ಮೀಸಲಾಗಿದೆ. ಅಂಡಗದೋದೂರು ಗ್ರಾಪಂ ವ್ಯಾಪ್ತಿಯಲ್ಲಿ 2 ಸ್ಥಾನಗಳಿದ್ದು, ಎರಡು ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕರಿಮನೆ ಗ್ರಾಪಂ ವ್ಯಾಪ್ತಿಯಲ್ಲಿ 2 ಸ್ಥಾನಕ್ಕೆ ಆಯ್ಕೆ ನಡೆಯಬೇಕಿದ್ದು, ಒಂದು ಪರಿಶಿಷ್ಟ ಜಾತಿ ಮತ್ತೂಂದು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಒಟ್ಟು 11 ಸ್ಥಾನಗಳಿಗೆ ಮತ್ತು ಸಾಲ ಪಡೆಯದ ಕ್ಷೇತ್ರದಿಂದ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಬಿಜೆಪಿಗೆ ಪ್ರತಿಷ್ಠೆ: ಕಾಂಗ್ರೆಸ್ ಜೆಡಿಎಸ್ಗೆ ಸವಾಲು: ಕಳೆದ ಬಾರಿ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹೊಂದಿದ್ದ ಬಿಜೆಪಿಗೆ ಈ ಬಾರಿ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಳೆದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆಯಿಂದಾಗಿ ಎಲ್ಲಾ 12 ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ವಾದ ವಿವಾದದ ಗೂಡಾಗಿ ಉಪಾಧ್ಯಕ್ಷರು ಸೇರಿದಂತೆ ಐವರು ಸದಸ್ಯರು ರಾಜೀನಾಮೆ ನೀಡಿದ್ದರು.
ಇನ್ನೇನು ಆಡಳಿತಾಧಿ ಕಾರಿ ನೇಮಕ ಮತ್ತು ಒಮ್ಮೆ ಚುನಾವಣೆ ದಿನಾಂಕ ಘೋಷಣೆ ಆಗಿತ್ತಾದರೂ ಸಂಘದ ಅಧ್ಯಕ್ಷೆ ರೇಖಾ ಆದಿರಾಜ್ ಕಾನೂನು ಹೋರಾಟ ನಡೆಸಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಕಾಂಗ್ರೆಸ್ ಜೆಡಿಎಸ್ ಮೈತ್ರಿ: ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳಿಗೆ ಬಿಜೆಪಿ ಏಕಾಂಗಿಯಾಗಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪೂರ್ವ ಮೈತ್ರಿ ಮಾಡಿಕೊಂಡು ಅಭ್ಯರ್ಥಿಗಳನ್ನು ಇಳಿಸಿದೆ.
ಒಟ್ಟು 30 ನಾಮಪತ್ರ: ಸಾಲಗಾರರ ಕ್ಷೇತ್ರದ 11 ಸ್ಥಾನಗಳಿಗೆ ನಾಮಪತ್ರ ಕೊನೆದಿನ ಶನಿವಾರ ಒಟ್ಟು 27 ನಾಮಪತ್ರ ಸಲ್ಲಿಕೆಯಾಗಿದೆ. ಸಾಲಗಾರರಲ್ಲದ ಕ್ಷೇತ್ರದ ಒಂದು ಸ್ಥಾನಕ್ಕೆ 3 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಸಿದವರು: ಸಂಘದ ಅಧ್ಯಕ್ಷೆ ರೇಖಾ ಆದಿರಾಜ್, ಗ್ರಾಪಂ ಉಪಾಧ್ಯಕ್ಷ ಕರುಣಾಕರಶೆಟ್ಟಿ, ಸದಸ್ಯರಾದ ಹಿಲ್ಕುಂಜಿ ಕುಮಾರ್, ಮಾಜಿ ಸದಸ್ಯ ಬಿ.ಟಿ.ರಮೇಶ್, ಪ್ರಮುಖರಾದ ನಾಡಗಂಟಿ ಚಂದ್ರ ಶೇಖರ್, ವ್ಯಾಸರಾಯ ಆಚಾರ್, ಕಿಶೋರ್ ಸಿ.ವಿ, ಬಿ.ಟಿ.ಚಂದ್ರಪಪ್, ಎಚ್.ಕೆ.ಪ್ರದೀಪ್, ಎನ್.ಎಸ್.ನಾಗರಾಜ ಶೆಟ್ಟಿ, ಎಚ್.ಜಿ.ಚಂದ್ರನಾಯ್ಕ, ಬಿ.ಮಾರುತಿ, ಕೆ.ಜಿ.ಸುರೇಶ್, ರವಿರಾಜ್, ಬಿ.ಎಸ್. ಮಧುಕರಶೆಟ್ಟಿ, ಜಿ.ಸಿ.ರಾಜಶೇಖರ್, ಡಿ.ಎಸ್. ಗುರುರಾಜ, ಸುಮಿತ್ರ ಎಸ್.ಬಾಯಾರ್, ಎಸ್. ಎಂ ಹರೀಶ್, ಎಂ.ಎನ್.ವಿಠೊಬ, ವಿಶ್ವನಾಥ ಎಂ, ಉದಯಕುಮಾರ ಶೆಟ್ಟಿ, ಬಿ.ಈಶ್ವರಪ್ಪ, ಎಸ್. ಎಚ್.ಗುಂಡಪ್ಪ, ನಾಗಪ್ಪಗೌಡ, ಜಯಮ್ಮ, ಎಂ.ಕೆ. ಲೀಲಾಕೃಷ್ಣ, ಎಂ.ಎನ್.ತಿಮ್ಮಪ್ಪ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನಗರ ನೀಲಕಂಠೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಮೂಡುಗೊಪ್ಪ, ಕರಿಮನೆ, ಅರಮನೆಕೊಪ್ಪ, ದೋದೂರು ವ್ಯಾಪ್ತಿಯ ಒಟ್ಟು 12 ಕ್ಷೇತ್ರಗಳಿಗೆ 30 ನಾಮಪತ್ರ ಸಲ್ಲಿಕೆಯಾಗಿವೆ. ಇದರಲ್ಲಿ ಸಾಲಗಾರರ ಕ್ಷೇತ್ರದ ಒಟ್ಟು 11 ಸ್ಥಾನ ಮತ್ತು ಸಾಲಗಾರರಲ್ಲದ ಕ್ಷೇತ್ರದ ಒಂದು ಸ್ಥಾನ ಕೂಡ ಸೇರಿದೆ. ಜ.4 ಅಂದರೆ ಶನಿವಾರ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ನಾಮಪತ್ರ ವಾಪಾಸ್ ಪಡೆಯಲು ಜನವರಿ 6 ಕಡೆ ದಿನವಾಗಿದೆ. ಮಂಜುನಾಥ ಒಡೆಯರ್,
ರಿಟರ್ನಿಂಗ್ ಆಫೀಸರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್