ಪರ್ಸೆಂಟೇಜ್‌ ಪ್ರೀತಿ


Team Udayavani, Jan 9, 2020, 7:01 AM IST

Present-Prapancha

ಪ್ರೀತಿಯನ್ನು ಪರ್ಸೆಂಟೇಜ್‌ ಲೆಕ್ಕದಲ್ಲಿ ಅಳೆಯೋಕೆ ಸಾಧ್ಯನಾ? ಇಂಥದ್ದೊಂದು ಪ್ರಶ್ನೆ ಕೇಳಿದರೆ, ಬಹುತೇಕರು ತಲೆ ಕೆರೆದುಕೊಳ್ಳೋಕೆ ಶುರು ಮಾಡಬಹುದು. ಆದರೆ ಇಲ್ಲೊಂದು ಚಿತ್ರತಂಡ, ಪ್ರೀತಿಯನ್ನು ಪರ್ಸೆಂಟೇಜ್‌ ಲೆಕ್ಕದಲ್ಲಿ ಅಳೆಯೋಕೆ ಸಾಧ್ಯ ಅನ್ನೋದನ್ನ ತನ್ನ ಚಿತ್ರದ ಮೂಲಕ ಹೇಳಲು ಹೊರಟಿದೆ. ಹೌದು, ಆ ಚಿತ್ರದ ಹೆಸರು “ಪ್ರಸೆಂಟ್‌ ಪ್ರಪಂಚ 0% ಲವ್‌’ ಈ ಹಿಂದೆ “ಸಂಯುಕ್ತ-2′ ಚಿತ್ರವನ್ನು ನಿರ್ದೇಶಿಸಿದ್ದ ಅಭಿರಾಮ್‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಅದೇ “ಸಂಯುಕ್ತ-2′ ಚಿತ್ರವನ್ನು ನಿರ್ಮಿಸಿದ್ದ ಅರ್ಜುನ್‌ ಮಂಜುನಾಥ್‌ ಈ ಚಿತ್ರದಲ್ಲಿ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಸದ್ಯ ಭರದಿಂದ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇದೇ ವೇಳೆ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಮಾಧ್ಯಮಗಳನ್ನು ಆಹ್ವಾನಿಸಿದ್ದ ಚಿತ್ರತಂಡ, “ಪ್ರಸೆಂಟ್‌ ಪ್ರಪಂಚ 0% ಲವ್‌’ ಚಿತ್ರದ ಬಗ್ಗೆ ಒಂದಷ್ಟು ಮಾತನಾಡಿತು. “ಇಂದು ಪ್ರಪಂಚದಲ್ಲಿ ಪ್ರೀತಿ ಅನ್ನೋದು ಶೇಕಡ ಸೊನ್ನೆ ಆಗಿದೆ.

ಅದು ಹೇಗೆ ಅನ್ನೋದನ್ನು ನಾವು ಈ ಚಿತ್ರದಲ್ಲಿ ಹೇಳುತ್ತಿದ್ದೇವೆ. ಇಂದಿನ ಕೌಟುಂಬಿಕ ಸಂಬಂಧಗಳು, ಜೀವನ ಶೈಲಿ ಎಲ್ಲವನ್ನೂ ಚಿತ್ರದಲ್ಲಿ ಹೇಳುತ್ತಿದ್ದೇವೆ. ಟೆಕ್ಕಿಗಳ ಬದುಕನ್ನ ಇಟ್ಟುಕೊಂಡು ಕಥೆ ಯನ್ನು ಹೇಳುತ್ತಿದ್ದೇವೆ. ಅದೆಲ್ಲ ವನ್ನು ನೋಡಿದಾಗ ಕೊನೆಯಲ್ಲಿ ಪ್ರೇಕ್ಷಕರಿಗೆ, ನಾವು ಯಾಕೆ ಇಂಥದ್ದೊಂದು ಟೈಟಲ್‌ ಇಟ್ಟಿದ್ದೇವೆ ಅನ್ನೋದು ಅರ್ಥ ವಾಗುತ್ತದೆ’ ಎನ್ನುತ್ತದೆ ಚಿತ್ರತಂಡ. “ಆ್ಯಕ್ಷನ್‌ ಕಂ ರೊಮ್ಯಾಂಟಿಕ್‌-ಥ್ರಿಲ್ಲರ್‌ ಶೈಲಿಯಲ್ಲಿ ಮೂಡಿ ಬರುತ್ತಿರುವ “ಪ್ರಸೆಂಟ್‌ ಪ್ರಪಂಚ 0% ಲವ್‌’ ಚಿತ್ರದಲ್ಲಿ ಕುತೂಹಲದ ಅಂಶಗಳು,

ಮನಸ್ಸಿಗೆ ಮುಟ್ಟುವ ಭಾವನೆ ಗಳು, ನವಿರಾದ ಹಾಸ್ಯ ಕೊನೆಗೆ ಅರ್ಥಪೂರ್ಣ ವಾದ ಸಂದೇಶ ಎಲ್ಲವೂ ಇದೆ. ನಾವು ಊಹೆ ಮಾಡಿದ ಸನ್ನಿವೇಶಗಳು ಬರುತ್ತದೆ ಅಂದುಕೊಂಡರೆ, ಪರದೆ ಮೇಲೆ ಬೇರೆಯದೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಅದು ಪ್ರಸಕ್ತ ಸನ್ನಿವೇಶಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಹೇಳುವುದೇ ಚಿತ್ರದ ಸಸ್ಪೆನ್ಸ್‌’ ಎನ್ನುವುದು ಚಿತ್ರದ ಬಗ್ಗೆ ನಿರ್ದೇಶಕರ ವಿವರಣೆ. ನವ ನಾಯಕ ಅರ್ಜುನ್‌ ಮಂಜುನಾಥ್‌ ಚಿತ್ರದಲ್ಲಿ ಲವರ್‌ ಬಾಯ್‌ ಹಾಗೂ ಸಂಸಾರಸ್ಥನಾಗಿ ಎರಡು ಶೇಡ್‌ನ‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಸಂಭ್ರಮ ಶ್ರೀ, ಅಕ್ಷರಾ ನಾಯಕಿ ಯರಾಗಿದ್ದಾರೆ.

ಉಳಿದಂತೆ ಎಸ್‌. ನಾರಾಯಣ್‌, ಓಂಪ್ರಕಾಶ್‌ರಾವ್‌, ಗೋವಿಂದೇಗೌಡ, ಯಶಸ್‌ ಅಭಿ ಮೊದಲಾದವರು ಅಭಿನಯಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಕೆ.ವಿ. ರವಿಚಂದ್ರ ಸಂಗೀತ ಸಂಯೋ ಜನೆಯಿದ್ದು, ನಾಗೇಂದ್ರ ಪ್ರಸಾದ್‌ ಸಾಹಿತ್ಯವಿದೆ. ಚಿತ್ರಕ್ಕೆ ಈಶ್ವರಿ ಸುರೇಶ್‌ ಛಾಯಾಗ್ರಹಣ, ವೆಂಕಿ ಯು.ಡಿ.ವಿ ಸಂಕಲನವಿದೆ. ಹಾಡುಗಳಿಗೆ ಹರಿಕೃಷ್ಣ ನೃತ್ಯ ಸಂಯೋ ಜನೆ ಮತ್ತು ಕುಂಗ್‌ಫ‌ು ಚಂದ್ರು ಸಾಹಸ ಸಂಯೋ ಜನೆಯಿದೆ. ಕೃಷ್ಣಮೂರ್ತಿ.ಎಲ್‌ ಮತ್ತು ರವಿಕುಮಾರ್‌ ಹೆಚ್‌.ಪಿ ಜಂಟಿಯಾಗಿ ನಿರ್ಮಿಸುತ್ತಿರುವ “ಪ್ರಸೆಂಟ್‌ ಪ್ರಪಂಚ 0% ಲವ್‌’ ಚಿತ್ರವನ್ನು ಮುಂಬರುವ ಪ್ರೇಮಿಗಳ ದಿನದಂದು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

ಟಾಪ್ ನ್ಯೂಸ್

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

22

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ‘ಇದು ನಮ್‌ ಶಾಲೆ’ಯ ಹಾಡುಗಳು ಬಂತು

Sandalwood: ‘ಇದು ನಮ್‌ ಶಾಲೆ’ಯ ಹಾಡುಗಳು ಬಂತು

god promise kannada movie

Kannada Cinema; ‘ಗಾಡ್‌ ಪ್ರಾಮಿಸ್‌’ ಮುಹೂರ್ತ ಮಾಡಿದ್ರು

ಅರ್ಜುನ ಸಮಾಧಿಗೆ ದರ್ಶನ್‌ ಫ್ಯಾನ್ಸ್‌ ಸಾಥ್‌

Actor Darshan; ಅರ್ಜುನ ಸಮಾಧಿಗೆ ದರ್ಶನ್‌ ಫ್ಯಾನ್ಸ್‌ ಸಾಥ್‌

15

Vidhyarthi Vidyarthiniyare Trailer: ಟ್ರೇಲರ್‌ನಲ್ಲಿ ಟೀನೇಜ್‌ ಸ್ಟೋರಿ

Brinda Acharya: ಸಾವಿರ ಗುಂಗಲ್ಲಿ ಬೃಂದಾ ಆಚಾರ್ಯ; ಆಲ್ಬಂ ಸಾಂಗ್‌ನಲ್ಲಿ ನಟನೆ

Brinda Acharya: ಸಾವಿರ ಗುಂಗಲ್ಲಿ ಬೃಂದಾ ಆಚಾರ್ಯ; ಆಲ್ಬಂ ಸಾಂಗ್‌ನಲ್ಲಿ ನಟನೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

baby 2

Ballari: ತಿಪ್ಪೆಗುಂಡಿಯಲ್ಲಿ ಸಿಕ್ಕಿದ್ದ ಹೆಣ್ಣುಮಗುವನ್ನು ದತ್ತು ಪಡೆದ ವಿದೇಶಿ ದಂಪತಿ

1-wqewqewqe

MLC Election; ಕೊರಿಯರ್‌ ಕಚೇರಿಯಲ್ಲಿ ಅಪಾರ ಗಿಫ್ಟ್ ಬಾಕ್ಸ್‌!!

school

RTE; ಶಿಕ್ಷಣ ಹಕ್ಕು ಕಾಯ್ದೆ ಅರ್ಜಿ ಅವಧಿ ವಿಸ್ತರಣೆ

crime (2)

Belagavi: ಇರಿದು ಯುವಕನ ಕೊಲೆ; ಆರೋಪಿಯ ಸೋದರಿಯನ್ನು ಪ್ರೀತಿಸುತ್ತಿದ್ದುದು ಕಾರಣ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.