ತೀರ್ಥಗಳ ಸಂಗಮ ಪಾಜಕ

ಪರಶುರಾಮ ಸೃಷ್ಟಿಸಿದ ಜಲಾಶಯ

Team Udayavani, Jan 9, 2020, 6:30 AM IST

26

ಉಡುಪಿ: ಮಧ್ವಾಚಾರ್ಯರು ಜನಿಸಿದ ಪಾಜಕದ ಸುತ್ತ ಕೆಲವು ಕಿ.ಮೀ. ಅಂತರದಲ್ಲಿ ಪರಶುತೀರ್ಥ, ಧನುಸ್ತೀರ್ಥ, ಗದಾತೀರ್ಥ, ಬಾಣ ತೀರ್ಥ ಎಂಬ ಹೆಸರಿನ ನಾಲ್ಕು ತೀರ್ಥಗಳಿವೆ. ಇವುಗಳನ್ನು ಪರಶುರಾಮ ದೇವರು ಪರಶು, ಧನುಸ್ಸು, ಗದಾ, ಬಾಣಗಳಿಂದ ನಿರ್ಮಿಸಿದರು ಎಂಬ ನಂಬಿಕೆಗಳಿವೆ. ಈ ತೀರ್ಥಗಳೂ ಪರಶು, ಧನುಸ್ಸು, ಗದೆ, ಬಾಣಗಳ ಆಕಾರದಲ್ಲಿವೆ. ಇವು ನಾಲ್ಕೂ ಬಂಡೆಗಳಲ್ಲಿರುವ ಜಲಾಶಯಗಳಾದರೆ ಮಧ್ವರು ವಾಸುದೇವನಾಗಿದ್ದಾಗ ನಿರ್ಮಿಸಿದ ವಾಸುದೇವ ತೀರ್ಥ ಸಹಜವಾದ ಜಲಾಶಯ.

ಯಾವುದೇ ಒಂದು ವಸ್ತು ವಿವರಣೆಗೆ ಒಳಪಡುವುದು ನೋಡುವವನ ದೃಷ್ಟಿಗೆ ಅವ ಲಂಬಿತ. ಇಲ್ಲಿ ಧಾರ್ಮಿಕ, ವೈಜ್ಞಾನಿಕ ಎರಡು ರೀತಿಯಲ್ಲಿ ವಿಶ್ಲೇಷಿಸಬಹುದು. ಧಾರ್ಮಿಕವಾಗಿ ಪಾಪಪರಿಹಾರಕ, ಪುಣ್ಯಪ್ರದ ಎನ್ನಬಹುದಾದರೆ, ವಿಜ್ಞಾನದ ಆಧಾರದಲ್ಲಿ ನೀರಿನಲ್ಲಿನ ಅಂಶಗಳನ್ನು ಸಂಶೋಧಿಸಿದರೆ ಇದರಲ್ಲಿ ರೋಗಪರಿಹಾರಕ ಗುಣವಿದೆ ಎನ್ನಬಹುದು.

ಪ್ರಾಕೃತಿಕ ಅಚ್ಚರಿ
ಈ ಜಲಾಶಯಗಳಲ್ಲಿ ಕಡು ಬೇಸಗೆಯಲ್ಲೂ ನೀರಿರುವುದು ಪ್ರಾಕೃತಿಕ ಅಚ್ಚರಿ. ಸುಮಾರು ಮೂರು ದಶಕಗಳ ಹಿಂದೆ ಪಾಜಕದಲ್ಲಿ ಗಣಿಗಾರಿಕೆ ತಲೆ ಎತ್ತಿದಾಗ ಪ್ರತಿಭಟಿಸದಿದ್ದರೆ ಈ ಅಚ್ಚರಿ ಇಂದು ಇರುತ್ತಿರಲಿಲ್ಲ. ಪೇಜಾವರ ಶ್ರೀಗಳು ಸಹಿತ ವಿವಿಧ ಪೀಠಾಧಿಪತಿಗಳು, ಚಿಂತಕರಾದ ಡಾ| ಬನ್ನಂಜೆ ಗೋವಿಂದಾಚಾರ್ಯ,ಡಾ|ಯು.ಆರ್‌. ಅನಂತಮೂರ್ತಿ, ಡಾ| ರವೀಂದ್ರನಾಥ ಶ್ಯಾನುಭಾಗ್‌ ಮತ್ತಿತರರು ಹೋರಾಟದಲ್ಲಿದ್ದರು.

ಬಾಣತೀರ್ಥ
ಪರಶುರಾಮ ಬೆಟ್ಟಕ್ಕೆ ಇದಿರಾಗಿ ಕುಂಜಾರು ಗಿರಿಯ ಒಂದೆಡೆ ಪರಶು ರಾಮರು ಅರ್ಧಚಂದ್ರಾಕೃತಿಯ ಬಾಣದಿಂದ ಶಿಲೆಯಲ್ಲಿ ತೀರ್ಥ ನಿರ್ಮಿಸಿದರು. ಇದುವೇ ಸರ್ವತೀರ್ಥಮಯವಾದ ಬಾಣತೀರ್ಥ. ಸ್ಕಂದ ಪುರಾಣದಲ್ಲಿ ಈ ತೀರ್ಥದ ಬಗ್ಗೆ ಉಲ್ಲೇಖವಿದೆ.

ಇದರ ತಟದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವಿದೆ. ಇದು ಅದಮಾರು ಮಠದ ಆಡಳಿತದಲ್ಲಿದ್ದು ಇದೇ ಮಠಕ್ಕೆ ಸೇರಿದ ಇಬ್ಬರು ಸ್ವಾಮೀಜಿಯವರ ವೃಂದಾವನಗಳಿವೆ. ಮಠದ ಪರಂಪರೆಯನ್ನು ಅವಲೋಕಿಸಿದಾಗ ಮೂವರು ಸ್ವಾಮೀಜಿಯವರ ವೃಂದಾವನಗಳನ್ನು ಇಲ್ಲಿ ನಿರ್ಮಿ ಸಿದ್ದರು ಎಂದು ತಿಳಿಯುತ್ತದೆ. ಪರಂಪರೆಯಲ್ಲಿ 12ನೆಯವರಾದ ಶ್ರೀ ವೇದಗರ್ಭತೀರ್ಥರು, 13ನೆಯವರಾದ ಶ್ರೀ ಹಿರಣ್ಯಗರ್ಭತೀರ್ಥರು, 18ನೆಯವರಾದ ಶ್ರೀ ವಾದೀಂದ್ರತೀರ್ಥರು ಇಲ್ಲಿ ವೃಂದಾ ವನಸ್ಥರಾಗಿದ್ದರು ಎಂಬ ಉಲ್ಲೇಖವಿದೆ.

ಪರಶುತೀರ್ಥ
ಪರಶುತೀರ್ಥವು ಪಾಜಕ ಕ್ಷೇತ್ರದಿಂದ ಪೂರ್ವಕ್ಕೆ ಮೂರು ಕಿ.ಮೀ. ದೂರದಲ್ಲಿರುವ ಬೆಳ್ಳೆ ಗ್ರಾಮದ ಬಳಿಯ ಬಂಡೆಯ ಬೆಟ್ಟದ ಮಧ್ಯದಲ್ಲಿದೆ. ಇದು ಪರಶುವಿನಿಂದ ಉದ್ಭವಿಸಿದ ತೀರ್ಥ. ಇದರ ಮಗ್ಗುಲಲ್ಲಿ ಗೋಪಾಲಕೃಷ್ಣ ದೇವಸ್ಥಾನವಿದೆ. ಇದು ಬೆಳ್ಳೆ ಸಾಮಗರ ವಂಶಕ್ಕೆ ಸೇರಿದೆ.

ಧನುಸ್ತೀರ್ಥ
ಪಾಜಕದಿಂದ ದಕ್ಷಿಣಕ್ಕೆ ಸುಮಾರು 6 ಕಿ.ಮೀ. ದೂರ ದಲ್ಲಿ ದೊಡ್ಡ ಏಕಶಿಲಾ ಬ ಬೆಟ್ಟದ ಮಧ್ಯೆ ಧನುಸ್ತೀರ್ಥ ವಿದೆ. ಸುಮಾರು 50 ಅಡಿ ಎತ್ತರದ ಬಂಡೆಯಲ್ಲಿ ಜಲಾಶಯವಿ ರುವುದು ಅಚ್ಚರಿ ತರುತ್ತದೆ. ಇಲ್ಲಿ ವರ್ಷವಿಡೀ ನೀರು ಇರುವುದೂ ಇನ್ನೊಂದು ಅಚ್ಚರಿ. ಶಾಧನುಸ್ಸಿನಿಂದ ಪರಶುರಾಮ ಈ ತೀರ್ಥವನ್ನು ನಿರ್ಮಿಸಿದ ಎಂಬ ಕಥೆ ಇದೆ.

ಗದಾತೀರ್ಥ
ಕುಂಜಾರು ಗಿರಿ ಬೆಟ್ಟದ ಎದುರಿನ ಪರಶುರಾಮ ಬೆಟ್ಟದಲ್ಲಿ ಪರಶುರಾಮ ದೇವಾಲಯವಿದೆ. ಇದಕ್ಕೆ ಹೊಂದಿ ಕೊಂಡಂತೆ ಉತ್ತರದಲ್ಲಿ ಬಂಡೆಯೊಳಗೆ ಪರಶುರಾಮ ತನ್ನ ಕೌಮೋದಕೀ ಗದೆಯಿಂದ ಉದ್ಭವಿಸಿದ ತೀರ್ಥ ಗದಾತೀರ್ಥ. ಒಂದೊಂದು ತೀರ್ಥಕ್ಕೂ ವಿಭಿನ್ನ ಹಿನ್ನೆಲೆ ಇದೆ ಮತ್ತು ಪ್ರತಿ ತೀರ್ಥದ ಸ್ನಾನಕ್ಕೂ ಪ್ರತ್ಯೇಕ ಫ‌ಲಗಳಿವೆ.

ವಾಸುದೇವತೀರ್ಥ
ಮಧ್ವರು ವಾಸುದೇವನಾಗಿದ್ದಾಗ ಉಪನಯ ನವಾದ ಸಮಯ ನಾಲ್ಕೂ ತೀರ್ಥಗಳಲ್ಲಿ ಸ್ನಾನ ಮಾಡಿ ಬರುತ್ತಿದ್ದರಂತೆ. ಚಿಕ್ಕ ಮಗ ಒಬ್ಬನೇ ದೂರ ಹೋಗಿ ಸ್ನಾನ ಮಾಡಿ ಬರುವುದಕ್ಕೆ ತಾಯಿ ಆತಂಕ ವ್ಯಕ್ತಪಡಿಸಿದರು. ತಮ್ಮ ದಂಡದಿಂದ ನಾಲ್ಕೂ ತೀರ್ಥಗಳ ಸನ್ನಿಧಾನವಿರುವಂತೆ ತೀರ್ಥ ವೊಂದನ್ನು ನಿರ್ಮಿಸಿದರು. ಇದೇ ವಾಸುದೇವ ತೀರ್ಥ. ಇದು ಪಾಜಕದ ಮುಖ್ಯ ಕ್ಷೇತ್ರದ ಆವರಣದಲ್ಲಿದೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.