ಮಲಿನವಾಗುತ್ತಿದೆ ರಾಮಸಮುದ್ರದ ಒಡಲು


Team Udayavani, Jan 10, 2020, 5:59 AM IST

RAMASAMUDRA

ನೀರಿನ ಮೂಲಗಳನ್ನು ಸಂರಕ್ಷಿಸಬೇಕೆನ್ನುವ ಘೋಷಣೆ ಬರೆಯ ಘೋಷಣೆಯಾಗಿ ಮಾತ್ರ ಉಳಿದಿದೆ. ಈ ಬಗ್ಗೆ ಆಡಳಿತಗಳು ಬದ್ಧತೆ ತೋರದೇ ಇರುವುದರಿಂದ ನಾವು ನೀರಿನ ಮೂಲಗಳನ್ನು ಕಳೆದುಕೊಳ್ಳುತ್ತಿದ್ದೇವೆ.

ಕಾರ್ಕಳ: ನೀರು ಅತ್ಯಮೂಲ್ಯ. ಜೀವಜಲದ ರಕ್ಷಣೆ ಪ್ರತಿಯೋರ್ವನ ಆದ್ಯತೆ. ನಗರಕ್ಕೆ ವರದಾನವಾಗಿರುವ ರಾಮಸಮುದ್ರದ ಒಡಲು ಇತ್ತೀಚೆಗೆ ಮಲಿನವಾಗುತ್ತಿದ್ದು, ಕುಡಿಯುವುದಕ್ಕೆ ಅಸಾಧ್ಯ ಎಂಬಂತಿದೆ. ಕಡು ಬೇಸಗೆಯಲ್ಲಿ ನಗರಕ್ಕೆ ರಾಮಸಮುದ್ರ ನೀರಿನ ಮೂಲ. ಆದರೆ ಇದೇ ನೀರಿನಲ್ಲಿ ಅಮೂಲ್ಯವಾದ ನೀರಿನಲ್ಲೇ ಬಟ್ಟೆ ಒಗೆಯುವುದು, ಈಜುವುದು, ಪ್ರಾಣಿಗಳನ್ನು ಸ್ನಾನ ಮಾಡಿಸುವುದು, ತ್ಯಾಜ್ಯ ಎಸೆಯುವುದು ಕಂಡುಬರುತ್ತಿದೆ. ಈ ರೀತಿ ನೀರು ಕಲುಷಿತಗೊಳಿಸುವುದರಿಂದ ಬೇಸಗೆ ಸಂದರ್ಭ ಇದೇ ಮಾಲಿನ್ಯ ಯುಕ್ತ ನೀರನ್ನು ಬಳಸಬೇಕಾಗಿರುವುದು ವಿಪರ್ಯಾಸ.

ಅತಿ ವಿಸ್ತಾರದ ಕೆರೆ
ಸುತ್ತಲೂ ಪ್ರಕೃತಿದತ್ತ ಕಲ್ಲುಬಂಡೆಗಳಿಂದಲೇ ಆವೃತವಾಗಿರುವ ಈ ಬೃಹತ್‌ ಕೆರೆ ಸುಮಾರು 47 ಎಕ್ರೆಯಷ್ಟು ವಿಸ್ತಾರದಿಂದ ಕೂಡಿದೆ. ಸರ್ವೆ ನಂಬರ್‌ 540/1ರಲ್ಲಿ 4. 18 ಎಕ್ರೆ, 542/1ರಲ್ಲಿ 20.11 ಎಕ್ರೆ, 551/1ಎಯಲ್ಲಿ 22.56 ಎಕ್ರೆ ಹೊಂದಿದ್ದು, ಇಲ್ಲಿ ಸಮೃದ್ಧವಾಗಿ ನೀರು ತುಂಬಿದೆ. ಈ ಬಾರಿ ಬೇಸಗೆಯಲ್ಲಿ ಇಡೀ ನಗರದಲ್ಲಿ ನೀರಿನ ಅಭಾವವಿದ್ದಾಗ ಇದೇ ಕೆರೆ ನೀರು ಪೂರೈಸಿತ್ತು.

ಹೂಳೆತ್ತುವ ಕಾರ್ಯವಾಗಲಿ
ಈ ಕೆರೆಯಲ್ಲಿ ಸಂಪೂರ್ಣ ಹೂಳು ತುಂಬಿ ಹೋಗಿದೆ. ಅದನ್ನು ತೆಗೆದಲ್ಲಿ ಕಾರ್ಕಳಕ್ಕೆ ನೀರಿನ ಬರ ಬಂದೊದಗದು. ಬೇಸಗೆ ಕಾಲದಲ್ಲಿ ತಾತ್ಕಾಲಿಕವಾಗಿ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕೋಟಿಗಟ್ಟೆಲೆ ರೂ. ಖರ್ಚು ಮಾಡುವ ಸರಕಾರ ಇಂತಹ ಕೆರೆಗಳ ಅಭಿವೃದ್ಧಿಪಡಿಸಿ, ಶಾಶ್ವತವಾಗಿ ನೀರಿನ ಕೊರತೆಯನ್ನು ಬಹುತೇಕ ಕಡಿಮೆ ಮಾಡಬಹುದಾಗಿದೆ. ಸಾರ್ವಜನಿಕರಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಬಾವಿ, ಬೋರ್‌ವೆಲ್‌ ಕೊರೆಸಲು ಮುಂದಾಗುತ್ತದೆಯೇ ವಿನಾ ರಾಮಸಮುದ್ರ ಅಭಿವೃದ್ಧಿ ಪಡಿಸುವತ್ತ ಗಮನ ಹರಿಸುತ್ತಿಲ್ಲ.

ನೀರಿನ ಸಂರಕ್ಷಣೆ
ಜೀವಜಲದ ಸಂರಕ್ಷಣೆ ನಮ್ಮೆಲ್ಲ ಹೊಣೆಯಾಗಬೇಕು. ಹನಿನೀರಿಗೂ ಪರದಾಡುವಂತಹ ಪರಿಸ್ಥಿತಿ ಎದುರಾದಾಗ ಅದರ ಬವಣೆ ಅರಿವಿಗೆ ಬರುವುದು. ನೀರಿನ ಮೂಲವನ್ನು ಕಲುಷಿತಗೊಳಿಸದೇ ಸಂರಕ್ಷಣೆ ಮಾಡುವುದು ಅತಿ ಅಗತ್ಯ. ಮಲಿನಗೊಂಡ ನೀರನ್ನು ಬಳಕೆ ಮಾಡುವುದರಿಂದ ಆರೋಗ್ಯ ಮೇಲೆ ಪರಿಣಾಮ ಬೀರುವುದು. ಜಾಂಡಿಸ್‌ (ಹೆಪಟೈಟಿಸ್‌ ಎ) ಟೈಫಾçಡ್‌, ಜ್ವರ, ವಾಂತಿ ಭೇದಿ, ಚರ್ಮರೋಗ ಸಂಬಂಧಿ ಕಾಯಿಲೆಗಳು ಸಂಭವಿಸುವ ಸಾಧ್ಯತೆ ಅಧಿಕ.

ಪಾರ್ಕ್‌ ನಿರ್ಮಾಣವಾಗಿತ್ತು
1996ರಲ್ಲಿ ರಾಮಸಮುದ್ರ ಮೇಲ್ಭಾಗದಲ್ಲಿ ಕಲ್ಲಿನ ಬೆಂಚು ಅಳವಡಿಸಿ, ಮಕ್ಕಳಿಗೆ ಉಯ್ನಾಲೆಯಂತ ಪರಿಕರ ಜೋಡಿಸಿ ಸುಂದರವಾದ ಪಾರ್ಕ್‌ ನಿರ್ಮಾಣ ಮಾಡಲಾಗಿತ್ತು.

ಕೆಲ ಈಜುಪಟುಗಳು ರಾಮಸಮುದ್ರವನ್ನು ಈಜಾಡಲು ಬಳಸುತ್ತಾರೆ. ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಸರಕಾರದ ವತಿಯಿಂದಲೇ ನಿರ್ಮಾಣವಾಗಿರುವ ಈಜುಕೊಳವಿರುವಾಗ ರಾಮಸಮುದ್ರದಲ್ಲಿ ಈಜುವುದಾದರೂ ಏತಕ್ಕೆ ? ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರದ್ದು.

ನೀರಾವರಿ
ರಾಮಸಮುದ್ರ ಕೆರೆ ಸುಸ್ಥಿತಿಯಲ್ಲಿಡುವುದು ಕಾರ್ಕಳ ಪುರಸಭೆಯ ಮುಖ್ಯ ಆದ್ಯತೆಯಾಗಲಿ ಎಂಬುದು ಆಶಯ.

ಭಕ್ತರಲ್ಲೂ ಆತಂಕ
ಕೆಲವೊಂದು ವಾರ್ಷಿಕ ಧಾರ್ಮಿಕ ವಿಧಿ ವಿಧಾನಗಳು ಇದೇ ರಾಮಸಮುದ್ರದಲ್ಲಿ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ರಾಮಸಮುದ್ರ ಇದೇ ರೀತಿ ಮಲಿನಗೊಳ್ಳುತ್ತಾ ಹೋದರೆ ಮುಂದೆ ಇಲ್ಲಿ ಹೇಗೆ ಧಾರ್ಮಿಕ ವಿಧಿ ವಿಧಾನಗಳನ್ನು ಮುಂದುವರೆಸಿಕೊಂಡು ಹೋಗುವುದು ಎಂಬುದು ಭಕ್ತರ ಆತಂಕ. ನೀರು ಮಲಿನಗೊಳಿಸುವುದನ್ನು ತಡೆಯಬೇಕು ಎಂಬುದು ಭಕ್ತರ ಆಗ್ರಹವಾಗಿದೆ.

ಚರ್ಚಿಸಿ ಸೂಕ್ತ ಕ್ರಮ
ಕುಡಿಯುವ ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಈ ಕುರಿತು ಕಾರ್ಕಳ ಪುರಸಭೆ ಮುಖ್ಯಧಿಕಾರಿಯವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಜಿ.ಜಗದೀಶ್‌,
ಜಿಲ್ಲಾಧಿಕಾರಿಗಳು

ಕ್ರಿಯಾಯೋಜನೆ
ಬಟ್ಟೆ ಒಗೆಯಲು ಅಲ್ಲಿಗಾಗಮಿಸುವ ಜನರಿಗೆ ಪತ್ಯೇಕ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ರಾಮಸಮುದ್ರದ ಸುತ್ತು ತಡೆಬೇಲಿ ನಿರ್ಮಾಣ ಮಾಡುವ ಕುರಿತು ಕ್ರಿಯಾಯೋಜನೆ ರೂಪಿಸಲಾಗುವುದು.
-ರೇಖಾ ಜೆ. ಶೆಟ್ಟಿ,
ಪುರಸಭೆ ಮುಖ್ಯಾಧಿಕಾರಿ ಕಾರ್ಕಳ

ರೋಗ ಸಂಭವ
ಕಲುಷಿತ ನೀರು ಕುಡಿಯುವುದರಿಂದ ಅಥವಾ ಅಡುಗೆ ಕಾರ್ಯಕ್ಕೆ ಬಳಸುವುದರಿಂದ ಜಾಂಡಿಸ್‌ (ಹೆಪಟೈಟಿಸ್‌ ಎ) ಟೈಫಾçಡ್‌, ಜ್ವರ, ವಾಂತಿ ಭೇದಿ ಇತ್ಯಾದಿ ರೋಗಗಳು ಬರುವ ಸಂಭವ ಹೆಚ್ಚು.
-ಡಾ| ಕೃಷ್ಣಾನಂದ ಶೆಟ್ಟಿ,
ತಾಲೂಕು ಆರೋಗ್ಯಾಧಿಕಾರಿ

-ರಾಮಚಂದ್ರ ಬರೆಪ್ಪಾಡಿ

ಟಾಪ್ ನ್ಯೂಸ್

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.