ಕೊಠಡಿಯಲ್ಲಿ ಒಂದು ಮಂಚ ಬಿಟ್ಟರೆ ಎಲ್ಲೆಲ್ಲೂ ಪುಸ್ತಕಗಳೇ


Team Udayavani, Jan 12, 2020, 3:06 AM IST

kotadiyalli

ಬೆಂಗಳೂರು: ಸಂಶೋಧನೆಗೆ ಸಾಕ್ಷಿಪ್ರಜ್ಞೆಯಾಗಿದ್ದ ಡಾ.ಎಂ.ಚಿದಾನಂದ ಮೂರ್ತಿಯವರು ಮನೆ, ಮನದಲ್ಲಿ ಪುಸ್ತಕ, ಸಂಶೋಧನಾ ಕಡತಗಳನ್ನೇ ತುಂಬಿಕೊಂಡಿದ್ದು, ತಾವು ಮಲಗುವ ಕೊಠಡಿಯನ್ನು ಗ್ರಂಥಭಂಡಾರ ಮಾಡಿಕೊಂಡಿದ್ದರು.

ಮಲಗುವ ಕೊಠಡಿ, ವಿಶ್ರಾಂತಿ ಪಡೆಯುತ್ತಿದ್ದ ಕೊಠಡಿ ಸಹಿತವಾಗಿ ಮನೆಯ ಬಹುತೇಕ ಭಾಗಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನ ಶ್ರೇಷ್ಠ ಗ್ರಂಥಗಳು, ಸಂಶೋಧನಾ ಕೃತಿಗಳು, ಸಂಶೋಧನೆಗೆ ಬೇಕಾಗಿದ್ದ ಆಯ್ದ ಗ್ರಂಥಮಾಲಿಕೆಗಳು ಹೀಗೆ ಜೀವನ ಪೂರ್ತಿ ಪುಸ್ತಕದ ಜತೆಗೆ ಜೀವಿಸಿ, ಮನೆಯೊಳಗೆ ದೊಡ್ಡ ಗ್ರಂಥಭಂಡಾರವನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.

ಒಂದಿಂಚು ಜಾಗವಿಲ್ಲದಷ್ಟು ಪುಸ್ತಕವನ್ನು ಓದಿ, ಸಂರಕ್ಷಿಸಿಟ್ಟಿದ್ದಾರೆ. ಈ ಮಧ್ಯೆ ಅವರ ತಂದೆ- ತಾಯಿ ಫೋಟೋ ಒಂದನ್ನು ನೇತು ಹಾಕಿ ಕೊಂಡಿದ್ದಾರೆ. ರನ್ನ, ಪೊನ್ನ, ಜನ್ನ, ಕುವೆಂಪು, ಬೇಂದ್ರೆ, ಮಾಸ್ತಿ ಸಹಿತ ನವ್ಯ, ನವೋದಯ, ಬಂಡಾಯ ಹಾಗೂ ಎಲ್ಲ ರೀತಿಯ ಸಾಹಿತ್ಯವನ್ನು ಓದುವ ಅಭಿರುಚಿ ಅವರಲ್ಲಿತ್ತು.

ಇಂಗ್ಲಿಷ್‌ನ ದೊಡ್ಡ ದೊಡ್ಡ ಕೃತಿಗಳು ಅವರ ಮನೆಯಲ್ಲಿದೆ. ಇಡೀ ಮನೆಯೇ ಗ್ರಂಥಾಲಯವಾಗಿದ್ದರೂ, ಹಂಪಿ ನಗರದ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ಬಿಡುವು ಸಿಕ್ಕಾಗಲೆಲ್ಲಾ. ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಬೇಕಿರುವ ಪುಸ್ತಕವನ್ನು ಹುಡುಕಿ ಓದುತ್ತಿದ್ದ ಪ್ರವೃತ್ತಿ ಅವರದ್ದಾಗಿತ್ತು ಎಂದು ಒಡನಾಡಿಯೊಬ್ಬರು ಮಾಹಿತಿ ನೀಡಿದರು.

ಸಂಶೋಧನೆಗೆ ಓದು ಮೂಲವಾದರೆ ಸಂಶೋಧಕನಿಗೆ ಕ್ಷೇತ್ರ ಪರಿಚಯ ಅತಿಮುಖ್ಯ ಎಂಬಂತೆ, ಚಿದಾನಂದ ಮೂರ್ತಿಯವರು ತಾವು ಕೈಗೊಳ್ಳುವ ಯಾವುದೇ ಸಂಶೋಧನಾ ಕಾರ್ಯಕ್ಕಾಗಿ ಕ್ಷೇತ್ರ ಸರ್ವೆಗೆ ಹೋಗುವ ಮೊದಲು ಪುಸ್ತಕಾಧ್ಯಯನವನ್ನು ನಡೆಸುತ್ತಿದ್ದರು. ಸಂಶೋಧನೆಗೆ ಪೂರಕವಾದ ಎಲ್ಲ ಮಾಹಿತಿಗಳನ್ನು ಅಚ್ಚುಕಟ್ಟಾಗಿ ಕಲೆ ಹಾಕುತ್ತಿದ್ದರು. ಸಂಶೋಧನೆಯ ನೂರಾರು ಕಡತಗಳು ಅವರ ಮನೆಯಲ್ಲಿವೆ.

ಅಗೆದರು ಕಡಿಮೆಯಾಗದಷ್ಟು ಚಿನ್ನದ ಗಣಿ(ಪುಸ್ತಕಭಂಡಾರ) ಬಿಟ್ಟು ಹೋಗಿದ್ದಾರೆ. ಬಿಡುವಿನ ವೇಳೆ ಏನಾದರೂ ಬರೆಯುತ್ತಿದ್ದರು. ಇನ್ನು ಫೋನಿನಲ್ಲಿ ಹೆಚ್ಚು ಸಂಶೋಧನೆ ಕುರಿತ ಚರ್ಚೆ, ಸಂವಾದ ಮಾಡುತ್ತಿದ್ದರು ಎಂದು ಚಿ.ಮೂ. ಅವರ ಮಗ ವಿನಯಕುಮಾರ್‌ ವಿವರಿಸಿದರು.

ಹಿಂದೂಪರ ಚಿಂತನೆ ಹಾಗೂ ಸಿದ್ಧಾಂತ ಮೈಗೂಡಿಸಿಕೊಂಡಿದ್ದರೂ, ಭಾರತೀಯತೇ ಅಂತಿಮವೆಂದು ಪರಿಪಾಲಿಸುತ್ತಿದ್ದರು. ಕೇವಲ ಸಾಹಿತ್ಯಾತ್ಮಕವಾಗಿ ಪರಿಚಯವಾಗಿರಬಹುದು. ಆದರೆ, ಭಾರತವನ್ನು ಸಾಹಿತ್ಯಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದರು.
-ವಿನಯಕುಮಾರ್‌, ಚಿ.ಮೂ. ಅವರ ಮಗ

* ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.