ಸಂಚಾರ ನಿಯಮ ಪಾಲಿಸಿ

ಲೈಸೆನ್ಸ್‌ ಇಲ್ಲದೇ ವಾಹನ ಚಲಾಯಿಸಬೇಡಿವಾಹನ ವಿಮೆ ಮಾಡಿಸುವುದು ಕಡ್ಡಾಯ

Team Udayavani, Jan 13, 2020, 4:28 PM IST

13-Jnauary-24

ತಾಳಿಕೋಟೆ: ವಾಹನಗಳ ಚಲಾವಣೆ ಸಮಯದಲ್ಲಿ ರಸ್ತೆ ನಿಯಮಗಳ ಅರಿವು ಮತ್ತು ಪಾಲನೆ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಪಿಎಸೈ ವಸಂತ ಬಂಡಗಾರ ಹೇಳಿದರು.

ರಸ್ತೆ ಸುರಕ್ಷತಾ ಸಪ್ತಾಹ ನಿಮಿತ್ತ ಸಂಗಮೇಶ್ವರ ಸಭಾಭವನದಲ್ಲಿ ಪ್ರೌಢ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಸ್ತೆ ನಿಯಮ ಮತ್ತು ಪಾಲನೆ ಬಗ್ಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಸ್ತೆ ನಿಯಮಗಳನ್ನು ಬಹುತೇಕರು ಪಾಲಿಸುತ್ತಿಲ್ಲ. ರಸ್ತೆ ಮೇಲೆ ಅಡ್ಡಾದಿಡ್ಡಿ ವಾಹನ ನಿಲ್ಲಿಸುವದು, ಟಪ್ಪಾ ಮೇಲೆ ಪ್ರಯಾಣಿಕರನ್ನು ತುಂಬಿಕೊಂಡು ಹೋಗುವದು ಕಾಣುತ್ತಿದ್ದೇವೆ. ಅಂತವರಿಗೆ ಈಗಾಗಲೇ ಕೇಸು ಕೂಡಾ ಕೊಡಲಾಗಿದೆ. ದ್ವಿಚಕ್ರ ವಾಹನ ವಿರಲಿ, ದೊಡ್ಡ ವಾಹನವೇ ಇರಲಿ ಕಡ್ಡಾಯವಾಗಿ ಲೈಸೆನ್ಸ್‌, ಆರ್‌ಸಿ ಬುಕ್‌, ಇನ್ಸೂರೆನ್ಸ್‌ ಹೊಂದುವದು ಅಗತ್ಯವಾಗಿದೆ ಎಂದರು.

ಬೈಕ್‌ ಸವಾರರ ಪೈಕಿ ವಿದ್ಯಾರ್ಥಿಗಳು ಹೊಸ ಹುರುಪಿನಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ಚಲಾಯಿಸುವದನ್ನು ಕಾಣುತ್ತೇವೆ. ಹೆಲ್ಮೇಟ್‌, ಲೈಸೆನ್ಸ್‌ ಮತ್ತು ಇನ್ಸೂರೆನ್ಸ್‌ ಅಥವಾ ಪಾಸಿಂಗ್‌ ಇಲ್ಲದೇ ವಾಹನ ಓಡಿಸುವದು ಅಪರಾಧವಾಗಿದೆ. ಎಲ್ಲಾದರೂ ಅಪಘಾತ ಸಂಭವಿಸಿದರೆ ವಾಹನ ಮಾಲೀಕನ ನೇರ ಹೊಣೆಗಾರನಾಗುವದರ ಜೊತೆಗೆ ಆಗು ಹೋಗುವುಗಳಿಗೆ ಜವಾಬ್ದಾರನಾಗುತ್ತಾನೆ. ಅದಕ್ಕೆ ಯಾರೂ ಲೈಸೆನ್ಸ್‌ ಮತ್ತು ಸಂಬಂಧಿಸಿದ ಕಾಗದ ಪತ್ರಗಳು ಇಲ್ಲದೇ ವಾಹನಗಳನ್ನು ಓಡಿಸಬೇಡಿ. ವಾಹನವನ್ನು ರಾತ್ರಿ
ಸಮಯದಲ್ಲಿ ಮನೆ ಹೊರಗೆ ಹಚ್ಚುವಾಗ ಸರಿಯಾಗಿ ಕೀಲಿ ಹಾಕಿ ಹ್ಯಾಂಡಲ್‌ ಲಾಕ್‌ ಮಾಡಲಾಗಿದೆಯೇ ಎಂಬುದನ್ನು ಪರಿಕ್ಷೀಸಿಕೊಳ್ಳಬೇಕು ಎಂದರು.

ತಾಲೂಕು ವೈದ್ಯಾಧಿಕಾರಿ ಸತೀಶ ತಿವಾರಿ ಮಾತನಾಡಿ, ಅವಸರದ ಪ್ರಯಾಣ ಪ್ರಾಣಕ್ಕೆ ಹಾನಿಕರವಾಗಿದೆ. ಅನೇಕ ಕಡೆ ಅವಸರ ಪ್ರಯಾಣದಿಂದ ಅಪಘಾತಕ್ಕಿಡಾಗಿ ಸಾವನಪ್ಪಿದ್ದಾರೆ. ಕೆಲವರು ಬದುಕುಳಿದರೂ ಕೈ ಕಾಲುಗಳನ್ನು ಮುರಿದುಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಅಂಗವಿಕಲತೆಗೊಳಗಾಗಿದ್ದಾರೆ. ಅದಕ್ಕಾಗಿ ಅವಸರ ಪಟ್ಟು ಲೈಸೆನ್ಸ್‌ ಇಲ್ಲದೇ ವಾಹನ ಚಲಾವಣೆಯಿಂದ ವಿದ್ಯಾರ್ಥಿಗಳು ಹಿಂದಕ್ಕೆ ಸರಿಯಬೇಕೆಂದು ತಿಳಿ ಹೇಳಿದರು. ಸಂಗಮೇಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್‌. ಎಸ್‌. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಿ.ಐ. ಹಿರೇಹೊಳಿ, ಆರ್‌.ಕೆ. ಹೊಟಗಾರ, ಆರೀಫ್‌ ಸಗರ, ಎಂ.ಎಸ್‌. ರಾಯಗೊಂಡ, ಆರ್‌.ಎಸ್‌. ಭಂಗಿ, ಸಂಗಮೇಶ ಚಲವಾದಿ, ಎಂ.ಎಲ್‌. ಪಟ್ಟೇದ, ರವಿ ಪವಾರ, ಶಿವನಗೌಡ ಬಿರಾದಾರ, ಶಿವಪ್ಪ ಹಾಳಗೋಡಿ, ಬಿ.ಜಿ. ಬಲಕಲ್ಲ, ರೇವಪ್ಪ ಒಡೆಯರ, ಮಹೇಶ ದೊಡಮನಿ, ಎಸ್‌.ಐ. ಹಿರೇಮಠ ಇದ್ದರು.

ಟಾಪ್ ನ್ಯೂಸ್

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

9-uv-fusion-2

Eurasian hoopoe: ಚಂದ್ರ ಮಕುಟದ ಸ್ವಪ್ನ ಸುಂದರಿ…..

8-uv-fusion

Letter to Son: ಪ್ರೀತಿಯ ಕಂದನಿಗೆ

7-uv-fusion

Election: ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬ ಆಚರಿಸೋಣ

6-uv-fusion

Election: ಚುನಾವಣ ಕ್ಷೇತ್ರದಲ್ಲಿ ಮಾಧ್ಯಮಗಳ ಪಾತ್ರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

5-uv-fusion

Summer Holidays: ರಜಾದಿನ ಹೀಗಿರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary; ದಲಿತಕೇರಿಯಲ್ಲಿ ಒಡಾಡಿ ಶ್ರೀರಾಮುಲು ಪರ ಮತಯಾಚನೆ ಮಾಡಿದ ಯದುವೀರ್ ಒಡೆಯರ್

Bellary; ದಲಿತಕೇರಿಯಲ್ಲಿ ಒಡಾಡಿ ಶ್ರೀರಾಮುಲು ಪರ ಮತಯಾಚನೆ ಮಾಡಿದ ಯದುವೀರ್ ಒಡೆಯರ್

Belagavi; ಹೊಳಿಹೊಸೂರ ಗ್ರಾಮದಲ್ಲಿ ಪೊಲೀಸ್ ದಾಳಿ; ನಾಲ್ಕು ಲಕ್ಷ ರೂ ಬೆಲೆ ಮದ್ಯ ವಶಕ್ಕೆ

Belagavi; ಹೊಳಿಹೊಸೂರ ಗ್ರಾಮದಲ್ಲಿ ಪೊಲೀಸ್ ದಾಳಿ; ನಾಲ್ಕು ಲಕ್ಷ ರೂ ಬೆಲೆ ಮದ್ಯ ವಶಕ್ಕೆ

Vegetable price: ಬಿಸಿಲ ತಾಪದಂತೆ ಏರಿದ ತರಕಾರಿ ಬೆಲೆ

Vegetable price: ಬಿಸಿಲ ತಾಪದಂತೆ ಏರಿದ ತರಕಾರಿ ಬೆಲೆ

ಶಿವರಾಮೇಗೌಡ

Pendrive; ಪ್ರಜ್ವಲ್ ದೌರ್ಜನ್ಯ ಮಾಡುವಾಗ ಅಪ್ಪ,ಅಮ್ಮ ಕತ್ತೆ ಕಾಯುತ್ತಿದ್ದರೆ..: ಶಿವರಾಮೇಗೌಡ

Sakleshpur: ಮಲೆನಾಡಿಗರಿಗೆ ಕಾಡಾನೆ ಜತೆ ಚಿರತೆ ಭಯ

Sakleshpur: ಮಲೆನಾಡಿಗರಿಗೆ ಕಾಡಾನೆ ಜತೆ ಚಿರತೆ ಭಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

9-uv-fusion-2

Eurasian hoopoe: ಚಂದ್ರ ಮಕುಟದ ಸ್ವಪ್ನ ಸುಂದರಿ…..

Kaatera; ಬರಹಗಾರರಿಗೆ ರಾಕ್‌ಲೈನ್‌ ಕಾರು ಗಿಫ್ಟ್

Kaatera; ಬರಹಗಾರರಿಗೆ ರಾಕ್‌ಲೈನ್‌ ಕಾರು ಗಿಫ್ಟ್

10-uv-fusion

UV Fusion: ಅಹಂಕಾರ ಅಳಿಯಲಿ… ಸ್ವಾಭಿಮಾನ ಉಳಿಯಲಿ..

8-uv-fusion

Letter to Son: ಪ್ರೀತಿಯ ಕಂದನಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.