ಮಾಜಿ ಸಿಎಂ ಎಸ್ ಎಂ ಕೃಷ್ಣರನ್ನು ಭೇಟಿಯಾದ ಡಿಕೆಶಿ : 2 ಗಂಟೆ ಕಾಲ ಚರ್ಚೆ
Team Udayavani, Jan 15, 2020, 1:40 PM IST
ಬೆಂಗಳೂರು : ಇವತ್ತು ಸಂಕ್ರಾಂತಿ ಹಿನ್ನಲೆ ಎಸ್ಎಂಕೆ ಭೇಟಿ ಮಾಡಿದ್ದೇನೆ. ಇದು ವೈಯಕ್ತಿಕ ಭೇಟಿಯೇ ಹೊರತು ರಾಜಕೀಯ ಅಲ್ಲ. ನನ್ನ ಅವರ ಸಂಬಂಧದ ಬಗ್ಗೆ ನಿಮಗೂ ಕೂಡ ಗೊತ್ತು. ರಾಜಕೀಯ ಮಾಡೋರು ಮಾಡಲಿ ಬಿಡಿ ಎಂದರು.
ಇದೇ ವೇಳೆ ಹರಿಹರ ಜಾತ್ರೆಯಲ್ಲಿ ಯಡಿಯೂರಪ್ಪ ನೀಡಿದ ಹೇಳಿಕೆಯ ಕುರಿತು ಮಾತಾನಾಡಿದ ಅವರು ನಾನೂ ಕೂಡ ಹರಿಹರಕ್ಕೆ ಹೋಗುತ್ತಿದ್ದೇನೆ. ಯಡಿಯೂರಪ್ಪ ಯಾರು ಯಾರಿಗೆ ಏನು ಮಾತು ಕೊಟ್ಟಿದ್ದಾರೋ ಗೊತ್ತಿಲ್ಲ ಅವರು ಮಾತಾಡುವಾಗ ಇಂಟರ್ನಲ್ ಏನೇನು ಇತ್ತೋ ಗೊತ್ತಿಲ್ಲ ಓಟು ಹಾಕಿಸಿಕೊಳ್ಳುವಾಗ ಏನು ಮಾತು ಕೊಟ್ಟಿದ್ದಾರೆ, ಮಧ್ಯರಾತ್ರಿ ಏನು ಮಾತು ಕೊಟ್ಟಿರ್ತಾರೆ, ಸಂಜೆ ಏನು ಮಾತು ಕೊಟ್ಟಿರ್ತಾರೆ ಗೊತ್ತಿಲ್ಲ ನಾನು ಅದರಲ್ಲಿ ಮಧ್ಯಸ್ಥಿಕೆ ಆಗೋದು ಒಳ್ಳೆಯದಲ್ಲ ಎಂದರು.
ಮುಂದುವರೆಸಿ ಮಾತಾನಾಡಿದ ಅವರು ದಿನೇಶ್ ಗುಂಡೂರಾವ್ ಏನೇ ಇದ್ರೂ ಹೈಕಮಾಂಡ್ ಜೊತೆ ಮಾತನಾಡಲಿ ಅವರೂ ಕೂಡ ಒಳ್ಖೆ ಕೆಲಸ ಮಾಡಿದ್ದಾರೆ, ಒಳ್ಳೆದಾಗಲಿ ಎಂದರು.
ಸದಾಶಿವನಗರದ ಎಸ್ ಎಂಕೆ ನಿವಾಸದಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ ರನ್ನು ಭೇಟಿಯಾಗಿದ್ದ ಡಿಕೆಶಿ ಸಂಕ್ರಾಂತಿ ಶುಭ ಕೋರುವ ನೆಪದಲ್ಲಿ ಎಸ್ಎಂಕೆ ಭೇಟಿ ಸುಮಾರು 2 ಗಂಟೆಗಳ ಕಾಲ ಎಸ್ ಎಂಕೆ ಜೊತೆ ಚರ್ಚಿಸಿದ ಡಿಕೆಶಿ ಕೆಪಿಸಿಸಿ ಆಯ್ಕೆ ಕುರಿತು ಕಾಂಗ್ರೆಸ್ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ಡಿಕೆಶಿ ಎಸ್ ಎಂಕೆ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
MUST WATCH
ಹೊಸ ಸೇರ್ಪಡೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ