ನೋಟಿನ ಮೇಲೆ ಲಕ್ಷ್ಮೀ ಚಿತ್ರ ಮುದ್ರಿಸಿದರೆ ಕರೆನ್ಸಿ ಸ್ಥಿತಿ ಉತ್ತಮ
Team Udayavani, Jan 15, 2020, 9:19 PM IST
ಖಾಂಡ್ವ(ಮಧ್ಯಪ್ರದೇಶ): ದೇಶದ ಕರೆನ್ಸಿಯ ಮೇಲೆ ಸಂಪತ್ತಿನ ಅಧಿದೇವತೆ ಲಕ್ಷ್ಮೀ ದೇವಿಯ ಫೋಟೋ ಮುದ್ರಿಸಬೇಕು. ಆಗ ಮಾತ್ರ ಅದರ ಸ್ಥಿತಿ ಚೇತರಿಕೆ ಕಾಣುತ್ತದೆ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಡಾ.ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಮಧ್ಯಪ್ರದೇಶದ ಖ್ವಾಂಡ್ವಾದಲ್ಲಿ ಮಾತನಾಡಿದ ಅವರು ಇಂಡೋನೇಷ್ಯಾದ ಕರೆನ್ಸಿಗೆ ಗಣೇಶನ ಚಿತ್ರ ಅಚ್ಚು ಮಾಡಲಾಗಿದೆ. ಏಕೆಂದರೆ ಆತ ವಿಘ್ನಗಳನ್ನು ನಿವಾರಿಸುವಾತ. ಹೀಗಾಗಿ. ದೇಶದ ಕರೆನ್ಸಿಗಳಲ್ಲಿ ಲಕ್ಷ್ಮಿ ಚಿತ್ರವನ್ನು ಅಚ್ಚುಮಾಡಲು ಕೋರುತ್ತೇನೆ. ಅಗ ಕರೆನ್ಸಿ ಸ್ಥಿತಿ ಉತ್ತಮವಾಗುತ್ತದೆ. ಈ ಕುರಿತು ಯಾರೂ ಬೇಸರಿಸಬಾರದು ಎಂದಿದ್ದಾರೆ.