ರಸ್ತೆ ದುರಸ್ತಿ ಕಾರ್ಯ ಕೈಗೊಂಡು 2 ತಿಂಗಳಾದ್ರೂ ಡಾಂಬರು ಹಾಕಿಲ್ಲ

ಪೆಗಳಪಲ್ಲಿ- ಸೋಮಯಾಜಲಹಳ್ಳಿ ಮಧ್ಯದ 2 ಕಿ.ಮೀ. ರಸ್ತೆ ಹದಗೆಟ್ಟು ಸಂಚಾರಕ್ಕೆ ಸಂಚಕಾರ ತರುತ್ತಿದೆ

Team Udayavani, Jan 16, 2020, 3:17 PM IST

16-January-19

ಶ್ರೀನಿವಾಸಪುರ: ನಿತ್ಯ 30ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಿತ್ತುಹಾಕಿ ತಿಂಗಳು ಕಳೆದರೂ ಇನ್ನೂ ಡಾಂಬರೀಕರಣ ಮಾಡಿಲ್ಲ. ಇದರಿಂದ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ.

ಜಲ್ಲಿ ಕಲ್ಲು ಮೇಲೆದ್ದು ವಾಹನ ಸವಾರರಿಗೆ, ಪಾದಚಾರಿಗಳಿಗೆ ಕಂಟಕ ತರುತ್ತಿವೆ. ಪೆಗಳಪಲ್ಲಿ ಹಾಗೂ ಸೋಮ ಯಾಜಲಹಳ್ಳಿ ಮಧ್ಯದ 2ಕಿ.ಮೀ. ಅಂತರದ ರಸ್ತೆ ಸ್ಥಿತಿ ಹೇಳತೀರದಾಗಿದೆ.

ಗ್ರಾಮಗಳು: ತಾಲೂಕಿನ ಪುಂಗನೂರು ರಸ್ತೆಯ ಪೆಗಳಪಲ್ಲಿಯಿಂದ ಸೋಮಯಾಜಲಹಳ್ಳಿಯ ವರಿಗೆ ಡಾಂಬರ್‌ ಹಾಕಲು ರಸ್ತೆ ಅಗೆದು ಎರಡು ತಿಂಗಳು ಮೇಲಾಗಿದೆ. ಈವರೆಗೂ ರಸ್ತೆಗೆ ಮುಕ್ತಿ ಸಿಕ್ಕಿಲ್ಲ. ಈ ರಸ್ತೆಯಲ್ಲಿ ಸೋಮ ಯಾಜಲಹಳ್ಳಿ, ಓಜಲಹಳ್ಳಿ, ಪೆಗಳಪಲ್ಲಿ, ಕೂಳಗುರ್ಕಿ, ಅಡವಿ ಚಂಬಕೂರು, ಪುರ್ನಪಲ್ಲಿ, ಬ್ರಾಹ್ಮಣಪಲ್ಲಿ, ದಿಗುವಪಲ್ಲಿ, ನೆರ್ನಹಳ್ಳಿ, ನಾರಾಯಣಪುರ, ಚೆನಯ್ಯ ಗಾರಿಪಲ್ಲಿ, ಗುಟ್ಟಪಲ್ಲಿ ಸೇರಿ 30ಕ್ಕೂ ಹೆಚ್ಚು ಹಳ್ಳಿಗಳ ಜನರು ಓಡಾಡುತ್ತಾರೆ. ಅದೇ ರೀತಿ ದ್ವಿಚಕ್ರ ವಾಹನ, ಬಸ್‌, ಕಾರು, ಟ್ರ್ಯಾಕ್ಟರ್‌ಗಳು, ಟೆಂಪೋಗಳು ಸಂಚರಿಸುತ್ತವೆ.

ಕಲ್ಲು ಮೇಲೆದ್ದಿವೆ: ಈ ರಸ್ತೆ ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಸಾರಿಗೆ ವಾಹನಗಳು, ಲೋಡು ತುಂಬಿದ ಲಾರಿಗಳು ಓಡಾಡುತ್ತವೆ. ರಸ್ತೆಯಲ್ಲಿ ಜಲ್ಲಿ ಕಲ್ಲುಗಳು ಮೇಲೆದ್ದು ಚೂರಿಯಂತೆ ಕಾಣುತ್ತವೆ. ದ್ವಿಚಕ್ರ ವಾಹನಗಳಂತೂ ಭಯದ ನೆರಳಲ್ಲಿ ಓಡಾಡ ಬೇಕಾಗಿದೆ. ರಾತ್ರಿ ಸಮಯದಲ್ಲಿ ಸಂಚಾರ ಮಾಡು ವುದು ಇನ್ನೂ ಕಷ್ಟವಾಗುತ್ತದೆ.

ರಸ್ತೆಯಲ್ಲಿ ಜಲ್ಲಿಕಲ್ಲುಗಳು ಮೇಲೆದ್ದಿವೆ. ಬಸ್‌ ಸಂಚರಿ ಸುವಾಗ ರಸ್ತೆಯಲ್ಲಿ ದೂಳು ಏಳುತ್ತದೆ. ಈ ವೇಳೆ ಮುಂದಿನ ವಾಹನ ಕಾಣದೇ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಕೂಡಲೇ ಪಿಡಬ್ಲ್ಯೂಡಿ ಅಧಿಕಾರಿಗಳು ಡಾಂಬರುಹಾಕಿ ಸಮಸ್ಯೆ ಈಡೇರಿಸಬೇಕಿದೆ.
ರಾಮು,
ಶ್ರೀನಿವಾಸ್‌,ದ್ವಿಚಕ್ರ ವಾಹನ ಸವಾರ.

2.50 ಕೋಟಿ ರೂ.ಗೆ ಟೆಂಡರ್‌ ಆಗಿದೆ. ಗುತ್ತಿಗೆ ದಾರರು ಹಣ ಕೊಟ್ಟು ಅಗ್ರಿ ಮೆಂಟ್‌ ಮಾಡಬೇಕಾಗಿತ್ತು. ಅವರು ರಜಾದಲ್ಲಿ ಹೊರಗಿನ ಊರಲ್ಲಿದ್ದ ಕಾರಣ ತಡೆ ಆಗಿದೆ. ಯಾವ ಕಾಮಗಾರಿಗೆ ಕಾರ್ಯಾದೇಶ ಆಗಿಲ್ಲವೋ ಅಂತಹವುಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ಸರ್ಕಾರ ಸೂಚಿಸಿದೆ. ಆದ್ದರಿಂದ ವಿಳಂಬ ಆಗಿದೆ. ಅದೇ ರೀತಿ 2.75 ಕೋಟಿ ರೂ. ವೆಚ್ಚದ ದಿಂಬಾಲ ಕ್ರಾಸ್‌ನಿಂದ ಎಸ್‌ಪಿ ರಸ್ತೆ ವರೆಗಿನ ಕಾಮಗಾರಿಗೂ ತಡೆಯಾಗಿದೆ.
ಎಲ್‌.ಕೆ.ಶ್ರೀನಿವಾಸಮೂರ್ತಿ,
ಪಿಡಬ್ಲ್ಯೂಡಿ ಎಂಜಿನಿಯರ್‌

ಕೆ.ವಿ.ನಾಗರಾಜ್

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.