ಬಿದನೂರಿನ ಕಲ್ಮಠಗಳಿಗೆ ಬೇಕಿದೆ ಕಾಯಕಲ್ಪ

ಬೆಳಕಿಗೆ ಬಾರದ ಕೆಳದಿ ಸಾಮ್ರಾಜ್ಯದ ಶಿಲ್ಪಕಲೆ ನಿರ್ವಹಣೆ ಇಲ್ಲದೆ ಅನಾಥ ಔರಂಗಜೇಬನ ಸೇನೆ ಸೋಲಿಸಿದ್ದಕ್ಕೆ ನಿರ್ಮಾಣವಾದವೆಂಬ ಪ್ರತೀತಿ

Team Udayavani, Jan 20, 2020, 3:47 PM IST

20-January-15

ಹೊಸನಗರ: ಕೆಳದಿ ಅರಸರ ಅಪೂರ್ವ ಶಿಲ್ಪಕಲೆಗಳನ್ನು ಹೊಂದಿದ 12 ಮತ್ತು 20 ಅಡಿ ವಿಸ್ತೀರ್ಣದ ಎರಡು ಕಲ್ಮಠಗಳು ಐತಿಹಾಸಿಕ ಬಿದನೂರು ಕೋಟೆಯ ಅನತಿ ದೂರದಲ್ಲಿದ್ದರೂ ಯಾರ ಕಣ್ಣಿಗೂ ಬೀಳದೇ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ.

ಅಂದು ಔರಂಗಜೇಬನ ಸೇನೆ ಸೋಲಿಸಿ ಹಿಮ್ಮೆಟ್ಟಿಸಿದ ಕಾರಣಕ್ಕೆ
ಇವು ನಿರ್ಮಾಣವಾದವೆಂಬ ಪ್ರತೀತಿ ಇದೆ. ಕೆಳದಿ ಸಾಮ್ರಾಜ್ಯದ ಲಾಂಛನ ಗಂಡಬೇರುಂಢವನ್ನು ಹುದುಗಿಸಿಕೊಂಡ ಅಪೂರ್ವ ಶಿಲ್ಪಕಲಾ ನೈಪುಣ್ಯದ ಚಿತ್ತಾರ ಹೊಂದಿವೆ.

ಬಿದನೂರು ಕೋಟೆಯಿಂದ ಸುಮಾರು 300 ಮೀ. ದೂರದ ಕೋಟೆಕೆರೆಯ ಮತ್ತೂಂದು ಭಾಗದಲ್ಲಿರುವ ಕಲ್ಮಠ ಅನಾಥವಾಗಿದೆ. ಈ ಪ್ರದೇಶದಲ್ಲಿ ಸುಮಾರು 100 ಮೀ. ಅಂತರದಲ್ಲಿ ಎರಡು ಕಲ್ಮಠಗಳಿದ್ದು ಪಾಳು ಬಿದ್ದಿವೆ. ಅನಾಥವಾದ ಸ್ಮಾರಕಗಳು: ಬಿದನೂರನ್ನು ಮುತ್ತಿಕ್ಕಿದ ಔರಂಗಜೇಬನ ಮಹಾಸೇನೆಯನ್ನು ಕೆಳದಿ ರಾಣಿ ಚೆನ್ನಮ್ಮ ಸೇನೆ ಹಿಮ್ಮೆಟ್ಟಿಸಿದ ಖುಷಿಯಲ್ಲಿ ಈ ಕಲ್ಮಠ ಕಟ್ಟಲಾಗಿದೆಯಂತೆ. ಅದಕ್ಕೆ ಪೂರಕವೆಂಬಂತೆ ಆನೆ ಮೇಲೆ ಕುಳಿತು ಔರಂಗಜೇಬ ಹೋರಾಡುತ್ತಿರುವ ದೃಶ್ಯ ಮತ್ತು ಕುದುರೆ ಮೇಲೆ ಕುಳಿತು ಚೆನ್ನಮ್ಮ ಹೋರಾಡುತ್ತಿರುವ ದೃಶ್ಯ ಉಬ್ಬುಶಿಲ್ಬದಲ್ಲಿ ಸೆರೆಯಾಗಿರುವುದು ಇದಕ್ಕೆ ಪುಷ್ಟಿ ನೀಡಿದೆ. ಪುರಾತತ್ವ ಇಲಾಖೆಗೂ ಮಾಹಿತಿ ಇದ್ದಂತಿಲ್ಲ. ಒಂದು ಕಲ್ಮಠದಲ್ಲಿ ಸುಮಾರು 3 ಅಡಿ ಎತ್ತರದ ಬಸವಣ್ಣನ ವಿಗ್ರಹ ಇದ್ದು, ಗೆದ್ದಲು ಹುತ್ತ ನುಂಗಿ ಹಾಕಿದೆ.

ಇನ್ನೊಂದು ಕಲ್ಮಠದಲ್ಲಿ ಕೇವಲ ಪೀಠ ಮಾತ್ರ ಇದ್ದು
ವಿಗ್ರಹ ನಾಪತ್ತೆಯಾಗಿದೆ. ಒಮ್ಮೆ ನೋಡಲೇ ಬೇಕು: 12*20
ಅಡಿ ವಿಸ್ತೀರ್ಣದಲ್ಲಿ ಮೇಳೈಸಿರುವ ಎರಡು ಕಲ್ಮಠಗಳು ನಾಲ್ಕು ಅಡಿ ಎತ್ತರದ ಅ ಷ್ಠಾನದ ಮೇಲೆ ಭಿತ್ತಿ ಮಾಡಲಾಗಿದೆ. ಮೇಲೆ ಶಿಖರ ಸೇರಿ ಸುಮಾರು 15 ಅಡಿಗಿಂತಲೂ ಎತ್ತರವಿದೆ. ಒಂದು ಕಲ್ಮಠ ನವಸ್ಥಂಭದ ಮೇಲೆ ಮೇಳೈಸಿದರೆ, ಮತ್ತೂಂದು ಕಲ್ಮಠ ಆರು ಸ್ಥಂಭದ ಮೇಲೆ ನಿರ್ಮಾಣಗೊಂಡಿದೆ. ಈ ಎರಡೂ ಕಲ್ಮಠದಲ್ಲಿ ಗಂಡಭೇರುಂಡ ಲಾಂಛನ ಜತೆಗೆ ರಾಣಿ ಕೆಳದಿ ಚೆನ್ನಮ್ಮರದ್ದು ಎಂದೇ ಹೇಳಲಾದ ವಿವಿಧ ಆಯುಧ ಹಿಡಿದು ಹೋರಾಡುತ್ತಿರುವ ಸುಮಾರು 21ಕ್ಕೂ ಹೆಚ್ಚು ಉಬ್ಬು ಶಿಲ್ಪಗಳು ನೋಡುಗರನ್ನು ಕುತೂಹಲಕ್ಕೀಡು ಮಾಡುತ್ತವೆ. ಸುತ್ತಲೂ ಕಪಿಚೇಷ್ಟೆಗಳ ವಿವಿಧ ಚಿತ್ತಾರದೊಂದಿದೆ ನಡುವೆ ಧ್ಯಾನಕ್ಕೆ ಕುಳಿತ ವಿರಕ್ತರ ದೃಶ್ಯವಿದೆ. ಇನ್ನು ಮಲ್ಲ ಯುದ್ಧ, ವಿವಿಧ ನೃತ್ಯರೂಪಕ, ಪಂಚಮುಖೀ ಗೋವು, ಆನೆ ಮತ್ತು ಬಸವ ಎರಡು ಮುಖದೊಂದಿಗೆ ಸಮ್ಮಿಳಿತಗೊಂಡ ಚಿತ್ತಾರ, ಮಾನವರೂಪಿ ಸಿಂಹಿಣಿ ಹೀಗೆ ನೂರಕ್ಕೂ ಹೆಚ್ಚು ಚಿತ್ರವಿರುವ ಶಿಲ್ಪಕಲಾ ವೈಭವದಿಂದ ಕಂಗೊಳಿಸುವಂತಿದೆ.

ಅಜ್ಞಾತ ಸ್ಥಳದಲ್ಲಿರುವ ಸ್ಮಾರಕ
ಕೆಳದಿ ಸಾಮ್ರಾಜ್ಯದ ಶಿಲ್ಪಕಲಾ ನೈಪುಣ್ಯಕ್ಕೆ ಸಾಕ್ಷಿಯಂತಿರುವ ಈ ಕಲ್ಮಠಗಳು ಕೋಟೆಕೆರೆಯ ಮತ್ತೂಂದು ಮಗ್ಗಲಲ್ಲಿದೆ. ಆದರೆ ಈ ಬಗ್ಗೆ ಬಿದನೂರು ಸುತ್ತಮುತ್ತಲಿನ ಜನರಿಗೂ ಮಾಹಿತಿ ಇದ್ದಂತಿಲ್ಲ. ಕೆಳದಿ ಅರಸರ ರಾಜಧಾನಿಯಾಗಿದ್ದ ಕಾಲದಲ್ಲಿ ಇದ್ದ ವೈಭವ, ಯುದ್ಧ ಸಂಸ್ಕೃತಿ, ಜನಪದ ಸಂಸ್ಕೃತಿ, ಸಾಂಸ್ಕೃತಿಕ, ಭಾವೈಕ್ಯತೆ ಹೀಗೆ ಎಲ್ಲವನ್ನೂ ಒಟ್ಟಾರೆ ಬಿಂಬಿಸುವ ಕಲ್ಮಠ ಬಗ್ಗೆ ಪುರಾತತ್ವ ಇಲಾಖೆ ಅಧ್ಯಯನಕ್ಕೆ ಮುಂದಾದಲ್ಲಿ ಕೆಳದಿ ಅರಸರ ಕಾಲದ ಮಹತ್ವದ ಅಂಶಗಳು ಬೆಳಕಿಗೆ ಬರುವುದರಲ್ಲಿ ಅನುಮಾನವೇ ಇಲ್ಲ. ಪುರಾತತ್ವ ಇಲಾಖೆ ಈ ನಿಟ್ಟಿನಲ್ಲಿ ಮುಂದಾಗಬೇಕಿದೆ.

ಕೆಳದಿ ಅರಸರ ಕಲಾ ನೈಪುಣ್ಯಕ್ಕೆ ಹಿಡಿದ ಕನ್ನಡಿ
ಕಲ್ಮಠ ಕೇವಲ ಕಟ್ಟಡವಲ್ಲ. ಕೆಳದಿ ಅರಸರ ಕಾಲದಲ್ಲಿ ಶಿಲ್ಪಕಲಾ
ನೈಪುಣ್ಯ ಹೇಗಿತ್ತು ಎಂಬುದಕ್ಕೆ ಮಹತ್ವದ ಸಾಕ್ಷಿಯಾಗಿದೆ. 1675ರ ಹೊತ್ತಿಗೆ ಬಿದನೂರನ್ನು ಮುತ್ತಿದ ಔರಂಗಜೇಬನ ಸೇನೆಯನ್ನು ಕೆಳದಿ ರಾಣಿ ಚೆನ್ನಮ್ಮ ಹಿಮ್ಮೆಟ್ಟಿಸಿದ ವಿಜಯದ ಸಂಕೇತವಾಗಿ ಕಟ್ಟಲಾಗಿದೆ ಎಂಬ ಪ್ರತೀತಿ ಇದೆ. ಅದಕ್ಕೆ ಇದರಲ್ಲಿರುವ ಕೆತ್ತನೆಗಳು ಸಾಕ್ಷೀಕರಿಸುತ್ತವೆ. ಅನಾಥವಾಗಿರುವ ಎರಡೂ ಕಲ್ಮಠದಲ್ಲಿ ಐತಿಹಾಸಿಕವಾಗಿ ಸಾಕಷ್ಟು ಮಾಹಿತಿಗಳಿವೆ.

ಕಲ್ಮಠ ಬೆಳಕಿಗೆ ಬಾರದ ಉತ್ತಮ ಕಲಾಕೃತಿ. ಪುರಾತತ್ವ ಇಲಾಖೆಯ
ಗಮನಕ್ಕೆ ಬಾರದಿರುವುದು ಸೋಜಿಗ. ಸ್ಥಳೀಯರ
ಸಹಕಾರ ಪಡೆದು ಕಲ್ಮಠದ ಸಂರಕ್ಷಣೆಗೆ ಪುರಾತತ್ವ ಇಲಾಖೆ ಮುಂದಾಗಲಿ. ಅಲ್ಲದೆ ಮುಂದಿನ ಪೀಳಿಗೆಗೆ ಇತಿಹಾಸ ಪಳಿಯುಳಿಕೆಗಳ ಅಗತ್ಯವಿದೆ.
ಶ್ರೀಧರ ಶೆಟ್ಟಿ, ಚಿಕ್ಕಪೇಟೆ

ಕುಮುದಾ ನಗರ

ಟಾಪ್ ನ್ಯೂಸ್

Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!

Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!

Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್‌ ಶಾ ಮನವಿ

Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್‌ ಶಾ ಮನವಿ

ವೇಷ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

ವೇಷದ ಬಣ್ಣ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ

Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

Lok Sabha Election: ವಾರಾಣಸಿಯಲ್ಲಿ ರಿಯಲ್‌ ಮೋದಿ VS ರೀಲ್‌ ಮೋದಿ ಫೈಟ್‌!

Lok Sabha Election: ವಾರಾಣಸಿಯಲ್ಲಿ ರಿಯಲ್‌ ಮೋದಿ VS ರೀಲ್‌ ಮೋದಿ ಫೈಟ್‌!

congress-workers

ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!

Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!

Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್‌ ಶಾ ಮನವಿ

Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್‌ ಶಾ ಮನವಿ

ವೇಷ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

ವೇಷದ ಬಣ್ಣ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ

Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.