ಎಲೆಕ್ಟ್ರಿಕ್‌ ಬಸ್‌ಗಳಿಗೆ ಪ್ರತ್ಯೇಕ ನಿಲ್ದಾಣ


Team Udayavani, Jan 24, 2020, 10:23 AM IST

bng-tdy-1

ಸಾಂಧರ್ಬಿಕ ಚಿತ್ರ

ಬೆಂಗಳೂರು: ಪ್ರತ್ಯೇಕ ಬಸ್‌ ಪಥ ಆಯ್ತು; ಈಗ ಪ್ರತ್ಯೇಕ ಎಲೆಕ್ಟ್ರಿಕ್‌ ಬಸ್‌ ನಿಲ್ದಾಣ ಬರುತ್ತಿದೆ!

ಹೌದು, ವಿದ್ಯುತ್‌ಚಾಲಿತ ಬಸ್‌ಗಳ ಕಾರ್ಯಾಚರಣೆ, ನಿರ್ವಹಣೆ, ನಿಲುಗಡೆಗಾಗಿ ಪ್ರತ್ಯೇಕ ನಿಲ್ದಾಣಗಳನ್ನು ಸ್ಥಾಪಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉದ್ದೇಶಿಸಿದೆ. ಹಾಗಂತ, ಇವುಗಳನ್ನು ಹೊಸದಾಗಿ ನಿರ್ಮಿಸುವುದಿಲ್ಲ; ಬದಲಿಗೆ ಇರುವ ಘಟಕಗಳಿಗೆ ಕತ್ತರಿ ಹಾಕಿ, ಅವುಗಳ ಜಾಗಕ್ಕೆ ಈ “ಪ್ರತ್ಯೇಕ ನಿಲ್ದಾಣ’ಗಳನ್ನು ಪರಿಚಯಿಸಲಾಗುತ್ತಿದೆ.

ಈ ಸಂಬಂಧ ಒಟ್ಟಾರೆ ಆರು ಘಟಕಗಳನ್ನು ಆಯ್ಕೆ ಮಾಡಲಾಗಿದ್ದು, ಎರಡು ಹಂತಗಳಲ್ಲಿ ಕ್ರಮವಾಗಿ ಮೂರು ಘಟಕಗಳನ್ನು ವಿದ್ಯುತ್‌ಚಾಲಿತ ಬಸ್‌ಗಳ ಕಾರ್ಯಾಚರಣೆಗೆ ಪೂರಕವಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. 300 ಎಲೆಕ್ಟ್ರಿಕ್‌ ಬಸ್‌ಗಳನ್ನು ರಸ್ತೆಗಿಳಿಸಲು ಉದ್ದೇಶಿಸಿದ್ದು, ಪ್ರಾಥಮಿಕವಾಗಿ ತಲಾ ನೂರು ಬಸ್‌ಗಳು ಹಂಚಿಕೆ ಆಗಲಿವೆ. ಈಗಾಗಲೇ ಆ ನಿಲ್ದಾಣಗಳ ಸ್ಥಳ ಪರಿಶೀಲನೆ, ಡಿಪೋ ಮತ್ತು ನಿಲ್ದಾಣಗಳ ನಡುವಿನ ಅಂತರ, ಕಾರ್ಯಾಚರಣೆ ಆಗುತ್ತಿರುವ ಬಸ್‌ಗಳು ಸೇರಿದಂತೆ ಅಗತ್ಯ ಮಾಹಿತಿಕಲೆಹಾಕುವ ಕಾರ್ಯ ಸದ್ದಿಲ್ಲದೆ ನಡೆದಿದೆ. ಅಂದಹಾಗೆ ಸಂಸ್ಥೆ ವ್ಯಾಪ್ತಿಯಲ್ಲಿ ಪ್ರಸ್ತುತ ಒಟ್ಟಾರೆ 45 ಘಟಕಗಳು ಹಾಗೂ 55 ನಿಲ್ದಾಣಗಳಿವೆ.

ಪರಿಸರ ಸ್ನೇಹಿಯಾದ ವಿದ್ಯುತ್‌ಚಾಲಿತ ವಾಹನಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಉತ್ತೇಜನ ನೀಡುತ್ತಿದ್ದು, ಅಗತ್ಯ ನೀತಿಗಳನ್ನು ರೂಪಿಸಿವೆ. ಇದಕ್ಕೆ ಪೂರಕವಾಗಿ ಬಿಎಂಟಿಸಿ ಇನ್ನೂಒಂದು ಹೆಜ್ಜೆ ಮುಂದೆಹೋಗಿ, ಇ-ಬಸ್‌ (ಎಲೆಕ್ಟ್ರಿಕ್‌ ಬಸ್‌)ಗಳಿಗಾಗಿಯೇ ನಿಲ್ದಾಣಗಳನ್ನು ಮೀಸಲಿಡುತ್ತಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಮೂರ್‍ನಾಲ್ಕು ತಿಂಗಳಲ್ಲಿ ಈ ಮಾದರಿಯ ನಿಲ್ದಾಣಗಳು ತಲೆಯೆತ್ತಲಿವೆ. ಅಲ್ಲಿ ಚಾರ್ಜಿಂಗ್‌ ಸ್ಟೇಷನ್‌, ನಿರ್ವಹಣೆ ವ್ಯವಸ್ಥೆ, 11 ಕಿ.ವಾ. ಸಾಮರ್ಥ್ಯದ ವಿದ್ಯುತ್‌ ಮಾರ್ಗಗಳು ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಬಿಎಂಟಿಸಿ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ನೌಕರರ ನಿದ್ದೆಗೆಡಿಸಿದ “ಪ್ರತ್ಯೇಕ ಘಟಕ’: ಆದರೆ, ಈ ಪ್ರತ್ಯೇಕ ನಿಲ್ದಾಣಗಳ ಸ್ಥಾಪನೆ ಬೆನ್ನಲ್ಲೇ ಈಗಾಗಲೇ ಉದ್ದೇಶಿತ ಘಟಕಗಳಲ್ಲಿರುವ ಸಾಮಾನ್ಯ ಬಸ್‌ಗಳು ಮತ್ತು ಅದರ ಚಾಲಕರನ್ನು ಹತ್ತಿರದ ಘಟಕಗಳಿಗೆ ಸ್ಥಳಾಂತರಿಸಬೇಕಾಗುತ್ತದೆ. ಯಾಕೆಂದರೆ, ನಿಯಮದ ಪ್ರಕಾರ ಗುತ್ತಿಗೆ ಪಡೆದ ಕಂಪೆನಿಯೇ ತಾನು ಒದಗಿಸುವ ಬಸ್‌ಗಳಿಗೆ ಚಾಲಕರನ್ನೂ ನಿಯೋಜಿಸಲಿದೆ. ಅಷ್ಟೇ ಅಲ್ಲ, ನಿರ್ವಹಣೆ ಕೂಡ ಕಂಪೆನಿಯದ್ದೇ ಆಗಿರುವುದರಿಂದ ಕಾರ್ಯಾಗಾರದ ತಾಂತ್ರಿಕ ಸಿಬ್ಬಂದಿಯನ್ನೂ “ಶಿಫ್ಟ್’ ಮಾಡಬೇಕಾಗುತ್ತದೆ. ಹೀಗೆ ವಿದ್ಯುತ್‌ಚಾಲಿತ ಬಸ್‌ ಘಟಕಗಳಲ್ಲಿ ಒಟ್ಟಾರೆ ಶೇ. 20ರಷ್ಟು ಸಿಬ್ಬಂದಿ ಕಡಿತ ಆಗುತ್ತದೆ. ಪ್ರತಿ ಘಟಕದಲ್ಲಿ ಸರಾಸರಿ 150 ಬಸ್‌ಗಳು ಹಾಗೂ 800 ಜನ ಕೆಲಸ ಮಾಡುತ್ತಿದ್ದಾರೆ.

ಹಾಗಾಗಿ, ಈ ಪರಿವರ್ತನೆಯು ಹಲವು ಘಟಕಗಳ ನೌಕರರ ನಿದ್ದೆಗೆಡಿಸಿದೆ. ಘಟಕ ಅಥವಾ ನಿಲ್ದಾಣದ ಆಸುಪಾಸಿನಲ್ಲೇ ನೌಕರರು ಬಾಡಿಗೆ ಅಥವಾ ಸ್ವಂತ ಮನೆಗಳನ್ನು ಮಾಡಿಕೊಂಡಿದ್ದಾರೆ. ಮಕ್ಕಳ ಶಾಲೆ ಕೂಡ ಹತ್ತಿರದಲ್ಲೇ ಇರುತ್ತದೆ. ಒಂದು ವೇಳೆ ದೂರದಲ್ಲಿ ಎತ್ತಂಗಡಿ ಮಾಡಿದರೆ, ಏನು ಮಾಡುವುದು? ಈ ಪ್ರಕ್ರಿಯೆಯಲ್ಲಿ ಹೆಚ್ಚು ಸಂಚಾರದಟ್ಟಣೆ ಇರುವ ಮಾರ್ಗಗಳಿಗೆ ಹಾಕುತ್ತಾರೆಯೇ? ಅಥವಾ ಈಗಿರುವ ಮಾರ್ಗವನ್ನೇ ನೀಡುತ್ತಾರೆಯೇ? ಇಂತಹ ಹಲವು ಪ್ರಶ್ನೆಗಳು ಚಾಲಕರು ಮತ್ತು ವರ್ಕ್‌ಶಾಪ್‌ನಲ್ಲಿರುವ ತಾಂತ್ರಿಕ ಸಿಬ್ಬಂದಿಯನ್ನು ಕಾಡುತ್ತಿವೆ.

ಹೆಚ್ಚಲಿದೆಯೇ ಡೆಡ್‌ ಮೈಲೇಜ್‌?: ಅಷ್ಟೇ ಅಲ್ಲ ಬಸ್‌ಗಳ ಸ್ಥಳಾಂತರದ ಬೆನ್ನಲ್ಲೇ “ಡೆಡ್‌ ಮೈಲೇಜ್‌’ ಹೆಚ್ಚಾಗುವ ಸಾಧ್ಯತೆಯೂ ಇದ್ದು, ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆ ಅಧಿಕಾರಿಗಳಿಗೆ ಇದು ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಘಟಕಗಳಿಂದ ನಿಲ್ದಾಣಗಳು ಅತ್ಯಂತ ಹತ್ತಿರದಲ್ಲಿರುವ ಡಿಪೋಗಳನ್ನೇ ಗುರುತಿಸಿ, ಪರಿವರ್ತನೆಗೆ ಕೈಹಾಕಲಾಗುತ್ತಿದೆ. ಈ ಮೂಲಕ ಸಾಧ್ಯವಾದಷ್ಟು ನಷ್ಟದ ಹೊರೆಯನ್ನು ಕಡಿಮೆ ಮಾಡುವುದಾಗಿದೆ ಎಂದು ನಿಗಮದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು. ಸಾಮಾನ್ಯವಾಗಿ ಕಾರ್ಯಾಚರಣೆ ಮುಗಿದ ಮೇಲೆ

ಬಿಎಂಟಿಸಿ ಬಸ್‌ಗಳು ಸಂಬಂಧಪಟ್ಟ ಘಟಕಗಳಲ್ಲಿ ತಂಗುತ್ತವೆ. ಅಲ್ಲಿಂದ ನಿಲ್ದಾಣಕ್ಕೆ ಬಂದು, ನಂತರ ವಾಣಿಜ್ಯ ಸೇವೆ ಆರಂಭಿಸುತ್ತವೆ. ಈ ಘಟಕ ಮತ್ತು ನಿಲ್ದಾಣದ ನಡುವಿನ ಅಂತರವನ್ನು ಡೆಡ್‌ ಮೈಲೇಜ್‌ ಎನ್ನಲಾಗುತ್ತದೆ. ಇದರ ಪ್ರಮಾಣ ಬಿಎಂಟಿಸಿಯಲ್ಲಿ ಶೇ. 4ರಿಂದ 5ರಷ್ಟಿದ್ದು, ವಾರ್ಷಿಕ 8ರಿಂದ 10 ಕೋಟಿ ರೂ. ಇದಕ್ಕಾಗಿ ಖರ್ಚಾಗುತ್ತದೆ. ಒಂದು ವೇಳೆ ಬೇರೆ ಘಟಕಗಳಿಂದ ನಿಲ್ದಾಣಕ್ಕೆ ಬರುವುದಾದರೆ, ಆಗ ಸಹಜವಾಗಿ ಡೆಡ್‌ ಮೈಲೇಜ್‌ ಪ್ರಮಾಣ ಹೆಚ್ಚಲಿದೆ ಎನ್ನುತ್ತಾರೆ ಸಂಸ್ಥೆ ಅಧಿಕಾರಿಗಳು.

ನಿರೀಕ್ಷೆ  ಮೀರಿ ಕನಿಷ್ಠ ದರ ನಿಗದಿ :  ಈ ಮಧ್ಯೆ ವಿದ್ಯುತ್‌ಚಾಲಿತ ಬಸ್‌ ಗುತ್ತಿಗೆಗೆ ನಿರೀಕ್ಷೆ ಮೀರಿ ಕನಿಷ್ಠ ದರ ನಿಗದಿಯಾಗಿರುವುದರಿಂದ ಬಿಎಂಟಿಸಿಯು ಮರುಟೆಂಡರ್‌ ಕರೆದಿದೆ. 16 ದಿನಗಳಲ್ಲಿ ಮರುಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಅದರಲ್ಲಿ ನಿಗದಿಯಾಗುವ ದರದಂತೆ ಇ-ಬಸ್‌ಗಳನ್ನು ಲೀಸ್‌ ರೂಪದಲ್ಲಿ ಪೆಡಯಲಾಗುವುದು. ನಂತರದಲ್ಲಿ ಆ ಬಸ್‌ಗಳ ಕಾರ್ಯಾಚರಣೆಗೆ ಪ್ರತ್ಯೇಕ ನಿಲ್ದಾಣಗಳನ್ನು ಮೀಸಲಿಡಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಸ್ಪಷ್ಟಪಡಿಸಿದರು. ಹವಾನಿಯಂತ್ರಿತ ಇ-ಬಸ್‌ಗೆ ಪ್ರತಿ ಕಿ.ಮೀ.ಗೆ 89.6 ರೂ. ಕನಿಷ್ಠ ದರ ನಿಗದಿಯಾಗಿತ್ತು.

ವಿದ್ಯುತ್‌ಚಾಲಿತ ಬಸ್‌ಗಳಿಗಾಗಿಯೇ ಪ್ರತ್ಯೇಕ ಘಟಕಗಳನ್ನು ಮೀಸಲಿಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸದ್ಯ ಮೂರು ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದ್ದು, ಸಾಧಕ-ಬಾಧಕಗಳ ಅಧ್ಯಯನ ನಡೆದಿದೆ. ಡೆಡ್‌ ಮೈಲೇಜ್‌ ಹೆಚ್ಚಾಗದಿರುವ ಡಿಪೋಗಳನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಸಿ.ಶಿಖಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು

 

– ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.