ಸಿಎಎಯಿಂದ ಯಾರಿಗೂ ತೊಂದರೆ ಇಲ್ಲ
Team Udayavani, Feb 5, 2020, 3:04 AM IST
ಶಹಾಪುರ: “ಸಿಎಎಯಿಂದ ದೇಶದ ಯಾವುದೇ ಸಮುದಾಯಕ್ಕೆ ತೊಂದರೆ ಯಾಗಲ್ಲ. ತೊಂದರೆ ಯಾದಲ್ಲಿ ನಾನೇ ಮೊದಲು ಅವರ ಪರವಾಗಿ ನಿಲ್ಲಲ್ಲಿದ್ದೇನೆ’ ಎಂದು ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ ಗುರೂಜಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಎ ಬಗ್ಗೆ ಬಹಳಷ್ಟು ಜನರಿಗೆ ತಿಳಿವಳಿಕೆ ಕಡಿಮೆ ಇದೆ. ಅದರಿಂದ ದೇಶಕ್ಕೆ ದೇಶದ ಜನರಿಗೆ ಯಾವುದೇ ತೊಂದರೆ ಇಲ್ಲ.
ಈ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕಿದೆ. ಯಾವುದೇ ಸಮಸ್ಯೆ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಸಿಎಎ ಕುರಿತು ಆಂದೋಲನಕಾರರು, ಕೇಂದ್ರ ಸರ್ಕಾರದ ಜತೆ ಚರ್ಚಿಸಿ ಆತಂಕ ದೂರ ಮಾಡಿಕೊಳ್ಳಬಹುದು. ಜನರ ನಡುವೆ ಸಂಪರ್ಕ ಇಲ್ಲದ್ದರಿಂದ ಹೀಗಾಗಿದೆ. ಎಲ್ಲಾ ವಿಷಯ ಕುರಿತು ವಿನಿಮಯ ಮಾಡಿಕೊಂಡಲ್ಲಿ ದುಗುಡ ದೂರಾಗಲಿದೆ ಎಂಬುದು ನನ್ನ ಭಾವನೆ ಎಂದರು.
ಹೊರ ದೇಶಗಳಲ್ಲಿ ಇದೇ ಸಿಎಎ ತರಹ ಕಾನೂನು ಜಾರಿ ಮಾಡಿ ನಮ್ಮ ದೇಶದವರನ್ನು ಹೊರ ದಬ್ಬಲಿದ್ದಾರೆ ಎಂಬ ಆತಂಕದ ಸುದ್ದಿ ಹಬ್ಬಿದೆ ಎಂದು ಪ್ರಶ್ನಿಸಿದಾಗ, ಈ ಕುರಿತು “ನಾನು ಎಲ್ಲೂ ಕೇಳಿಲ್ಲ. ನನ್ನ ಗಮನಕ್ಕೆ ಬಂದಿಲ್ಲ. ಹೊರ ದೇಶದಲ್ಲಿ ನಮ್ಮ ದೇಶದಲ್ಲಿ ಮಾಡಿದ ಕಾನೂನು ಮಾಡುತ್ತಾರೆ ಎಂಬ ಬಗ್ಗೆ ನನ್ನ ಅರಿವಿಗೆ ಇಲ್ಲ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್ ಬೇಲಿ!
Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ
8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್ಐಟಿ? ಇನ್ನಷ್ಟು ಎಫ್ಐಆರ್ ಸಾಧ್ಯತೆ
Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ