ಕಲಬುರಗಿ ಜಿಲ್ಲೆಗಿದೆ 2500 ವರ್ಷದ ಇತಿಹಾಸ
ಸಿಂಧು ನಾಗರಿಕತೆಯೊಂದಿಗೂ ಹೋಲಿಕೆ | ಸನ್ನತಿಯಲ್ಲಿ ಸಿಕ್ಕಿವೆ ಹಲವು ಪುರಾವೆ: ಡಾ| ಶಂಭುಲಿಂಗ ವಾಣಿ
Team Udayavani, Feb 7, 2020, 10:41 AM IST
ಕಲಬುರಗಿ : ಕಲಬುರಗಿ ಅಥವಾ ಗುಲಬರ್ಗಾ ಜಿಲ್ಲೆ 2,500 ವರ್ಷಗಳ ಇತಿಹಾಸ ಹೊಂದಿದೆ. ಭಾರತದ ಪರಂಪರೆಯಷ್ಟೇ ಪುರಾತನವಾದ ಹಿನ್ನೆಲೆ ಇದೆ ಎಂದು ಇತಿಹಾಸ ಉಪನ್ಯಾಸಕ ಡಾ| ಶಂಭುಲಿಂಗ ವಾಣಿ ಹೇಳಿದರು.
ಕಲಬುರಗಿ ಅತ್ಯಂತ ಪ್ರಾಚೀನ ಜಿಲ್ಲೆ. ಸಿಂಧು ನಾಗರಿಕತೆಗೂ ಕಲಬುರಗಿ ನಾಗರಿಕತೆಗೂ ಹೋಲಿಕೆ ಇದೆ. ಆದಿಪೂರ್ವ ಕಾಲದ ಇತಿಹಾಸ ಕುರುಹುಗಳು ಜಿಲ್ಲೆಯಲ್ಲಿ ಲಭ್ಯ ಇದೆ. ಚಿತ್ತಾಪುರದ ಸನ್ನತಿಯಲ್ಲಿ ಇಂತಹ ಪುರಾವೆಗಳು ದೊರೆಯುತ್ತವೆ. ಭಾರತದ ನಾಗರಿಕತೆ 1921ರಲ್ಲಿ ಹೊರಬಂದರೆ, ಕಲಬುರಗಿ ನಾಗರಿಕತೆ 1985ರಲ್ಲಿ ಬೆಳಕಿಗೆ ಬಂತು ಎಂದರು.
ದೇಶದ ಮೊದಲ ಸಾಮ್ರಾಜ್ಯ ಮೌರ್ಯರಿಂದ ಹಿಡಿದು ಕೊನೆಯ ನಿಜಾಮರ ಆಳ್ವಿಕೆಯನ್ನು ಕಲಬುರಗಿ ಕಂಡಿದೆ. ಕೃಷ್ಣ-ಭೀಮ ನದಿಗಳ ನಡುವೆ ಸಗರನಾಡು ಸಾಮ್ರಾಜ್ಯ ಇತ್ತು. ಅಶೋಕ ಚರ್ಕವರ್ತಿ ನಾಲ್ಕು ರಾಜಧಾನಿಗಳನ್ನು ಸ್ಥಾಪನೆ ಮಾಡಿಕೊಂಡಿದ್ದ. ಅದರಲ್ಲಿ ಸನ್ನತಿ ಕೂಡ ಒಂದಾಗಿತ್ತು ಎಂದರು.
ಈ ಭಾಗ ಸಹಿಷ್ಣುತೆ ಮತ್ತು ಸಹಬಾಳ್ವೆಗೆ ಹೆಸರುವಾಸಿ. ಉರ್ದು ಹುಟ್ಟಿದ ಸ್ಥಳ ಕಲಬುರಗಿ. ಸೂಫಿ ಸಂತ ಖ್ವಾಜಾ ಬಂದೇ ನವಾಜ್ ಮೊದಲ ಉರ್ದು ಕೃತಿಯ ಕರ್ತೃ ಎಂದು ವಿವರಿಸಿದರು. ಪ್ರವಾಸೋದ್ಯಮ ತಾಣಗಳು-ಅಭಿವೃದ್ಧಿ ಕುರಿತು ಡಾ| ಶಶಿಶೇಖರ ರೆಡ್ಡಿ, ಸಾಹಿತ್ಯ-ಸಂಸ್ಕೃತಿ ಬಗ್ಗೆ ಡಾ| ಅಮೃತ ಕಟಕೆ ವಿಷಯ ಮಂಡಿಸಿದರು .
ಕಲಬುರಗಿಯ ಬಿಸಿಲಿಗೆ ಅಸ್ತಮಾ ಖತಂ!
ಬಿಸಿಲಿನ ಮಜಾ ಅನುಭವಿಸಲೆಂದೇ ವಿದೇಶಗಳಿಂದ ಅದೆಷ್ಟೋ ಜನ ಗೋವಾಕ್ಕೆ ಬರುತ್ತಾರೆ. ಕಲಬುರಗಿ ಬಿಸಿಲು ಗೋವಾ ಬಿಸಿಲಿಗಿಂತ ಉತ್ಕೃಷ್ಟ. ಇಲ್ಲಿನ ಬಿಸಿಲಿಗೆ ಅಸ್ತಮಾ ಹೇಳ ಹೆಸರಿಲ್ಲದಂತೆ ಹೋಗುತ್ತದೆ. ಚಿಂಚೋಳಿ ವನ್ಯಜೀವಿ ಧಾಮ ಮತ್ತು ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಿದರೆ, ರಾಜ್ಯದಲ್ಲೇ ಉತ್ತಮ ಪ್ರವಾಸೋದ್ಯಮ ತಾಣವಾಗಿ ರೂಪುಗೊಳ್ಳುತ್ತದೆ.
ಡಾ| ಶಶಿಶೇಖರ ರೆಡ್ಡಿ,
ಸಾರಿಗೆ ಇಲಾಖೆ ಅಧಿಕಾರಿ
ರಂಗಪ್ಪ ಗಧಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ