ಎನ್ಆರ್ಸಿ ವಿರುದ್ಧ ಪ್ರತಿಭಟನೆ
Team Udayavani, Feb 8, 2020, 6:10 PM IST
ಭಟ್ಕಳ: ಪ್ರಸ್ತಾವಿತ ಎನ್ಆರ್ಸಿ, ಎನ್ಪಿಆರ್ ಹಾಗೂ ಸಿಎಎ ಎಂಬ ಕಾನೂನಿನ ವಿರುದ್ಧ ದೇಶದ ಜನರು ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಹೋರಾಟಗಳು ಇನ್ನಷ್ಟು ಪ್ರಭಲವಾಗಲಿವೆ ಎಂದು ಮಹಾರಾಷ್ಟ್ರದ ಬಹುಜನ ಕ್ರಾಂತಿ ಮೋರ್ಚಾ ಮಹಿಳಾ ಸಂಯೋಜಕಿ ಪ್ರತಿಭಾ ಉಭಾಲೆ ಹೇಳಿದರು.
ಅವರು ಇಲ್ಲಿನ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ನಡೆದ ವಿ ದಿ ಪೀಪಲ್ ಆಫ್ ಇಂಡಿಯಾದ ಭಾರತದ ಸಂವಿಧಾನ ರಕ್ಷಣೆ ಮಹಿಳಾ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದರು. ದೇಶದಲ್ಲಿ ವಿರೋಧ ಪಕ್ಷ ಸತ್ತುಹೋಗಿದ್ದು ವಿರೋಧ ಪಕ್ಷ ಮಾಡುವ ಕಾರ್ಯವನ್ನು ಮಹಿಳೆಯರು ಮಾಡುತ್ತಿದ್ದಾರೆ. ಮಹಿಳೆಯರ ಹೋರಾಟಗಳಿಗೆ ಹೆದರಿಕೊಂಡ ಅಮಿತ್ ಶಾ ಸಂಸತ್ತಿನಲ್ಲಿ ಎನ್ಆರ್ಸಿ ಸಧ್ಯಕ್ಕೆ ಇಲ್ಲ ಎನ್ನುವ ಮಾತನ್ನು ಆಡಿದ್ದಾರೆ. ನಮ್ಮ ಹೋರಾಟಗಳು ಇಷ್ಟಕ್ಕೆ ನಿಲ್ಲುವುದಿಲ್ಲ. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಹೋರಾಟಗಳು ಇನ್ನಷ್ಟು ಪ್ರಭಲವಾಗಲಿವೆ ಎಂದರು.
ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಸದಸ್ಯ ಅಸೀಫಾ ನಿಸಾರ್ ಬೆಂಗಳೂರು ಮಾತನಾಡಿ ಭಾರತೀಯರನ್ನು ಹಿಂದೂ-ಮುಸ್ಲಿಂ ಎಂದು ವಿಂಗಡಣೆ ಮಾಡುವುದರ ಮೂಲಕ ವಿಭಜಿಸಲಾಗುತ್ತಿದೆ ಎಂದ ಅವರು, ನಾವು ಯಾರು ಸಿಎಎ ಮತ್ತು ಎನ್ಆರ್ಸಿ, ಎನ್ಪಿಆರ್ಗಳ ವಿರುದ್ಧ ಹೋರಾಡುತ್ತಾರೋ ಅವರೊಂದಿಗೆ ನಾವಿದ್ದೇವೆ ಎಂದರು.
ಮಂಗಳೂರಿನ ಸುಮಯ್ಯ ಹಮಿದುಲ್ಲಾ ಮಾತನಾಡಿ ನಾನು ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಬೇಕೆಂಬ ಪಣವನ್ನು ಇಲ್ಲಿನ ಪ್ರತಿಯೊಬ್ಬ ಮಹಿಳೆ ಮಾಡಬೇಕು. ನಮಗೆ ಅನ್ನ, ಆಹಾರ, ಜೀವದ ಭಯವಿಲ್ಲ ಅದು ನಮಗೆ ನಮ್ಮ ಪ್ರಭು ದಯ ಪಾಲಿಸುತ್ತಾನೆ. ಅನ್ಯಾಯದ ವಿರುದ್ಧ ಮಹಿಳೆ ತನ್ನ ಶಕ್ತಿ ಪ್ರದರ್ಶಿಸಬೇಕಾದ ಅಗತ್ಯವಿದೆ ಎಂದರು. ಸಾಜೀದ್ ಅಂಜುಮ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ರುಫೇದಾ ಅಝೀಝುರ್ರಹ್ಮಾನ್ ಪರಿಚಯಿಸಿದರು. ಬರೀರ ಮೊಹತೆಶಮ್ ಕಾರ್ಯಕ್ರಮ ನಿರೂಪಿಸಿದರು. ನಬೀರಾ ಹಬೀಬ್ ಮೊಹತೆಶಮ್ ವಂದಿಸಿದರು. ಝೊಹರಾ ಬತೂಲ್, ಸಬಿಹಾ ಫಾರೂಖ್ ಕೌಡಾ, ಫರ್ಹತ್ ಕಾಝೀಯಾ, ನುಸ್ರತ್ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ