ಮೊಬೈಲ್‌ಗೆ ಒಟಿಪಿ ಬಂದ್ರೆ ಮಾತ್ರ ಆಸ್ತಿ ನೋಂದಣಿ


Team Udayavani, Feb 9, 2020, 3:45 PM IST

mysuru-tdy-1

ನಂಜನಗೂಡು: ಆಸ್ತಿ ನೋಂದಣಿಗೆ ಹೊಸ ವ್ಯವಸ್ಥೆ ಜಾರಿಯಾಗಿರುವುದರಿಂದ ನೋಂದಣಿ ಕಾರ್ಯ ಸಾಕಷ್ಟು ವಿಳಂಬವಾಗುತ್ತಿದೆ. ಒಟಿಪಿ (ಒನ್‌ ಟೈಮ್‌ ಪಾಸ್‌ವರ್ಡ್‌) ವ್ಯವಸ್ಥೆ ಬಂದಿರುವುದರಿಂದ ಜನರು ಹೈರಾಣಾಗಿದ್ದಾರೆ. ದಿನಕ್ಕೆ 10 ಆಸ್ತಿ ನೋಂದಣಿ ನಡೆದರೇ ಅದೇ ದೊಡ್ಡ ಸಾಧನೆಯಾಗಿದೆ. ಎಷ್ಟರ ಮಟ್ಟಗೆ ಈ ಸಮಸ್ಯೆ ಬಿಗಡಾಯಿಸಿದೆ ಎಂದರೆ “ನೋಂದಣಿ ಕಾರ್ಯಗಳಿಗೆ ಅಶಕ್ತರು, ವೃದ್ಧರು ಒಂದು ವಾರದ ತನಕ ಕಚೇರಿಗೆ ಬರಲೇಬೇಡಿ’ ಎಂದು ನೋಂದಣಾಧಿಕಾರಿ ಮನವಿ ಮಾಡಿದ್ದಾರೆ.

ದಿನಕ್ಕೆ 80 ರಿಂದ 100ವರೆಗೆ ಆಸ್ತಿ ನೋಂದಣಿ ಯಾಗುತ್ತಿದ್ದ ನಂಜನಗೂಡು ಕಾರ್ಯಾಲಯದಲ್ಲಿ ಈ ಹೊಸ ವ್ಯವಸ್ಥೆಯಿಂದ ಕೇವಲ 10 ರಿಂದ 15 ನೋಂದಣೆ ಮಾತ್ರ ನಡೆಯುತ್ತಿದೆ. ಜಿಲ್ಲಾ ಕೇಂದ್ರ ಮೈಸೂರಿನ ನಾಲ್ಕು ನೋಂದಣಿ ಕೇಂದ್ರಗಳಲ್ಲಿ ಮೂರೂ ದಿನಗಳು ಒಂದೇ ಒಂದು ಆಸ್ತಿ ನೋಂದಣೆ ಕೂಡ ಆಗದ ಪರಿಣಾಮ ಜನರು ಹಾಗೂ ಪತ್ರ ಬರಹಗಾರರು ಪರದಾಡುವಂತಾಗಿದೆ.

ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಸಂಬಂಧಿಸಿದ ದಾಖಲೆಗಳು ದೃಢೀಕರಣ ಬಳಿಕ ಬಳಿಕ ದಾಖಲೆಗಳ ವಿವರಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿ ಒಟಿಪಿಗಾಗಿ ಕಾಯಲಾಗುತ್ತದೆ. ನಂತರ ಸಂಬಂಧಿಸಿದವರ ಮೊಬೈಲ್‌ಗೆ ಒಟಿಪಿ ನಂಬರ್‌ ಬರುತ್ತದೆ. ಈ ಒಟಿಪಿ ನಂಬರನ್ನು ಕಂಪ್ಯೂಟರಿಗೆ ದಾಖಲಿಸಿದ ನಂತರವೇ ನೋಂದಣೆ ಕಾರ್ಯ ಮುಂದುವರಿಯುತ್ತದೆ.

ಖರೀದಿ ಮತ್ತು ಮಾರಾಟಗಾರರ ಒಟಿಪಿಗೆ 20 ಸೆಕೆಂಡ್‌ ಅವಧಿ ನಿಗದಿ ಪಡಿಸಲಾಗಿದ್ದು, ಸಾಕ್ಷಿದಾರರ ಒಟಿಪಿಗೆ ಕೇವಲ 15 ಸೆಕೆಂಡ್‌ ಮಾತ್ರ ನಿಗದಿ ಪಡಿಸಲಾಗಿದೆ. ಇದರಿಂದಾಗಿ ಇಂಟರ್‌ನೆಟ್‌ (ಸರ್ವರ್‌) ಸುಸ್ಥಿಯಲ್ಲಿದ್ದು ಕಾರ್ಯನಿರ್ವಸಿದರೆ ಪ್ರತಿ ಗಂಟೆಗೆ ಒಂದು ನೋಂದಣೆ ಮಾತ್ರ ಸಾಧ್ಯ ಎನ್ನುತ್ತಾರೆ ಇಲ್ಲಿನ ಕಂಪ್ಯೂಟರ್‌ ಆಪರೇಟರ್‌. ನಿಗದಿತ ಅವಧಿಯಲ್ಲಿ ಒಟಿಪಿ ಬಂದಿಲ್ಲ ಎಂದಾದರೆ ಹೊಸದಾಗಿ ಅವರ ಒಟಿಪಿಗೆ ದಾಖಲೆ ಸಲ್ಲಿಸಬೇಕು. ಇದು ಪೂರ್ಣಗೊಳ್ಳದೆ ಬೇರೆಯವರ ಒಟಿಪಿ ಕೂಡ ದಾಖಲಿಸಲಾಗುವುದಿಲ್ಲ. ಹಾಗಾಗಿ ಆಸ್ತಿ ನೋಂದಣಿ ಕಾರ್ಯ ವಿಳಂಬ ಆಗುತ್ತಿದೆ ಎಂದು ಅವರು ತಿಳಿಸಿದರು.

ಹೊಸ ನೀತಿಯಿಂದಾಗಿ ನೋಂದಣಿ ಕಾರ್ಯ ನಿಧಾನವಾಗಬಹುದು ಎಂಬ ಲೆಕ್ಕಾಚಾರದೊಂದಿಗೆ ನಂಜನಗೂಡು ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಿನಕ್ಕೆ 40 ನೋಂದಣಿಯನ್ನು ಮಾತ್ರ ದಾಖಲಿಸಿ ಕೊಳ್ಳಲಾಗಿತ್ತು. ಆದರೆ, ಮೂರು ದಿನ ಕಳೆದರೂ 40 ನೋಂದಣಿ ಕಾರ್ಯ ಪೂರ್ಣಗೊಂಡಿಲ್ಲ. ಬುಧವಾರ ನೋಂದಣಿಗೆ ಬಂದಿದ್ದವರು ಶುಕ್ರವಾರ ಕಳೆದರೂ ಪೂರ್ಣಗೊಂಡಿಲ್ಲ. ಹೀಗಾಗಿ ಕಾದು ಕಾದು ಸುಸ್ತಾದ ಸಾರ್ವಜನಿಕರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿರುವುದು ಸಾಮಾನ್ಯವಾಗಿದೆ. ಏನೇ ಆಗಲಿ ಹೊಸ ಒಟಿಪಿ ವ್ಯವಸ್ಥೆಯನ್ನು ಸುಧಾರಣಾ ಕ್ರಮಗಳ ಮೂಲಕ ನೋಂದಣಿ ಕಾರ್ಯವನ್ನ ತ್ವರಿತವಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪತ್ರಬರಹಗಾರರ ಆದಾಯಕ್ಕೆ ಕತ್ತರಿ: ಪತ್ರಬರಹಗಾರರು ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ದಿನಕ್ಕೆ ಕನಿಷ್ಠ 5 ನೋಂದಣಿ ಮಾಡಿಸುತ್ತಿದ್ದರು. ಈಗ ಅವರ ಆದಾಯಕ್ಕೆ ಕತ್ತರಿ ಬಿದ್ದಿದೆ. ಹೀಗಾದರೆ ನಾವು ಸಹಾಯಕರು, ಕಾರ್ಯಾಲಯದ ಬಾಡಿಗೆ ನಿಭಾಯಿಸುವುದು ಹೇಗೆ ಎಂದವರು ಇಲ್ಲಿನ ಪತ್ರ ಬರಹಗಾರರಾದ ಅರಸು ಅಳಲು ತೋಡಿಕೊಂಡರು.

 ನಕಲಿ ನೋಂದಣಿಗೆ ಕಡಿವಾಣ :  ಆಸ್ತಿ ನೋಂದಣಿಗೆ ಹೊಸ ಒಟಿಪಿ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಪ್ರಾರಂಭದಲ್ಲಿ ಜನರು ಪರದಾಡುವಂತಾದರೂ ನಕಲಿ ನೋಂದಣಿಗೆ ಕಡಿವಾಣ ಬೀಳಲಿದೆ. ಆಸ್ತಿ ಮಾರಾಟ ಹಾಗೂ ಖರೀದಿಗೆ ತಮಗೆ ಬೇಕಾದವರನ್ನು ಕರೆದುಕೊಂಡು ಬಂದು ಸಾಕ್ಷಿ ಹಾಕಿಸುವಂತಿಲ್ಲ. ಇದೀಗ ಯಾರು ಬೇಕೋ ಅವರು ಸಾಕ್ಷಿ ಹಾಕುವಂತಿಲ್ಲ. ಸಾಕ್ಷಿಯಾಗಿ ಋಜು ಮಾಡಿದವರ ಎಲ್ಲಾ ವಿವರಗಳು ಇಲ್ಲಿ ದಾಖಲಾಗುವುದರಿಂದ ಅವರು ಮೊದಲಿನ ಹಾಗೆ ಜಾರಿಕೊಳ್ಳಲೂ ಸಾಧ್ಯವಿಲ್ಲ. ಒಟ್ಟಾರೆ ಈ ವ್ಯವಸ್ಥೆಯಿಂದ ನಕಲಿ ದುಷ್ಕೃತ್ಯಗಳಿಗೆ ಕಡಿವಾಣ ಬೀಳಲಿದೆ ಎಂದು ಎನ್ನಲಾಗುತ್ತಿದೆ.

ಅಶಕ್ತರು, ವೃದ್ಧರು ವಾರದ ಬಳಿಕ ಬನ್ನಿ :  ಒಟಿಪಿ ವ್ಯವಸ್ಥೆಯಿಂದ ಆಸ್ತಿ ನೋಂದಣಿ ಕಾರ್ಯ ಸಾಕಷ್ಟು ವಿಳಂಬ ಆಗುತ್ತಿದೆ. ಹೀಗಾಗಿ ಒಂದು ವಾರದ ತನಕ ಅಶಕ್ತರು ಹಾಗೂ ವೃದ್ಧರು ನೋಂದಣಾಧಿಕಾರಿಗಳ ಕಚೇರಿಗೆ ಬಂದು ದಿನಗಟಗಟ್ಟಲೆ ಕಾಯುವುದು ಬೇಡ. ವಾರದ ನಂತರ ಬನ್ನಿ ಎಂದು ನಂಜನಗೂಡು ನೋಂದಣಾಧಿಕಾರಿ ನಂದಿನಿ ಮನವಿ ಮಾಡಿದ್ದಾರೆ.

ಆಸ್ತಿ ನೋಂದಣಿಗೆ ಒಟಿಪಿ ವ್ಯವಸ್ಥೆ ಹೇಗೆ? : ನೂತನ ಒಟಿಪಿ ವ್ಯವಸ್ಥೆಯ ಪ್ರಕಾರ, ಆಸ್ತಿ ನೋಂದಣಿಗೆ ಮಾರಾಟಗಾರರು, ಖರೀದಿದಾರರು ಹಾಗೂ ಸಾಕ್ಷಿಗಳು ಬಂದು ನೋಂದಣಾಧಿಕಾರಿಗಳ ಎದುರು ತಮ್ಮ ಆಧಾರ್‌ ಕಾರ್ಡ್‌ ಸೇರಿದಂತೆ ದಾಖಲಾತಿಗಳನ್ನು ಸಲ್ಲಿಸಿದ ನಂತರ ಋಜು ಮಾಡಿದ ಮೇಲೆ ವಿವರಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿ ಒಟಿಪಿಗಾಗಿ ಕಾಯಲಾಗುತ್ತದೆ. ನಂತರ ಸಂಬಂಧಿಸಿದವರ ಮೊಬೈಲ್‌ ಫೋನ್‌ಗೆ ಒಟಿಪಿ ನಂಬರ್‌ ಬರುತ್ತದೆ. ಈ ಒಟಿಪಿ ನಂಬರನ್ನು ಕಂಪ್ಯೂಟರಿಗೆ ದಾಖಲಿಸಿದ ನಂತರವೇ ನೋಂದಣೆ ಕಾರ್ಯ ಮುಂದುವರಿಯುತ್ತದೆ. ನಿಗದಿತ ಅವಧಿಯಲ್ಲಿ ಒಟಿಪಿ ಬಂದಿಲ್ಲ ಎಂದಾದರೆ ಹೊಸದಾಗಿ ಅವರ ಒಟಿಪಿಗೆ ದಾಖಲೆ ಸಲ್ಲಿಸಬೇಕು. ಇದು ಪೂರ್ಣಗೊಳ್ಳದೆ ಬೇರೆಯವರ ಒಟಿಪಿ ಕೂಡ ದಾಖಲಿಸಲಾಗುವುದಿಲ್ಲ.

 

ಶ್ರೀಧರ್‌ ಆರ್‌.ಭಟ್‌

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.