ಮತ್ತೆ ಬಂತು ಕಾಡಾನೆ; ಜನ ಭಯಭೀತ
ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳಿದ ದಂಪತಿಗೆ ಎದುರಾದ ಗಜ | ಬೆನ್ನಟ್ಟಿ ಎಳೆದಾಡಿ ಹೋದ ಕಾಡಾನೆ
Team Udayavani, Feb 14, 2020, 11:28 AM IST
ಚನ್ನಗಿರಿ: ಕಳೆದ ವರ್ಷ ಜುಲೈ ತಿಂಗಳಲ್ಲಿ ನಡೆದ ಆಪರೇಷನ್ ಉಬ್ರಾಣಿ ಕಾರ್ಯಾಚರಣೆ ನಂತರ ಕಾಡಾನೆಗಳ ಹಾವಳಿಯಿಂದ ನಿಟ್ಟುಸಿರು ಬಿಟ್ಟಿದ್ದ ತಾಲೂಕಿನಲ್ಲಿ ಮತ್ತೂಮ್ಮೆ ಕಾಡಾನೆಯೊಂದು ಸದ್ದುಮಾಡಿದ್ದು ಜನತೆ ಭಯಭೀತರಾಗಿದ್ದಾರೆ.
ತಾಲೂಕಿನ ಕೋಗಲೂರು, ಭೀಮನೆರೆ ಗ್ರಾಮದ ಸುತ್ತಮುತ್ತಲು ಗುರುವಾರ ಬೆಳಗಿನ ಜಾವ ಕಾಡಾನೆಯೊಂದು ಪ್ರತ್ಯಕ್ಷವಾಗಿದ್ದು. ಕೋಗಲೂರು ಗ್ರಾಮದ ಹೊರವಲಯದಲ್ಲಿ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ ಶೈಲೇಂದ್ರ ದಂಪತಿ ತೋಟವೊಂದರಿಂದ ದಿಢೀರ್ ಎದುರಿಗೆ ಬಂದ ಕಾಡಾನೆಯನ್ನು ನೋಡಿ ಬೆಚ್ಚಿ ಓಡಿದ್ದಾರೆ. ಅವರನ್ನು ಬೆನ್ನತ್ತಿದ ಕಾಡಾನೆ ಓಡಿಸಿಕೊಂಡು ಹೋಗಿ ರಸ್ತೆಯ ಮೇಲೆ ಎಳೆದಾಡಿ ಬಿಟ್ಟು ಹೋಗಿದೆ. ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಕೋಗಲೂರು ಸುತ್ತಮುತ್ತ ಗ್ರಾಮಗಳಲ್ಲಿ ಕಟ್ಟೆಚ್ಚರ: ಕಾಡಾನೆ ದಾಳಿ ಕುರಿತು ದಂಪತಿಯಿಂದ ಮಾಹಿತಿ ಪಡೆದ ಗ್ರಾಮಸ್ಥರು ಕಾಡಾನೆ ಹುಡುಕಿ ಹೊರಟಿದ್ದು. ತೋಟ, ಹೊಲ-ಗದ್ದೆಯಲ್ಲಿ ಹುಡುಕಾಡಿ, ಆನೆ ಕಂಡ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಗ್ರಾಮಸ್ಥರೊಂದಿಗೆ ಸೇರಿ ಕಾಡಾನೆಯನ್ನು ಬೆದರಿಸಿ ಓಡಿಸಲು ಯತ್ನಿಸಿದ್ದಾರೆ. ಆನೆ ಸದ್ಯ ಕೋಗಲೂರು ಮತ್ತು ಭೀಮನೆರೆ ಗ್ರಾಮದ ಮಧ್ಯೆ ಹತ್ತಿ ಹೊಲದಲ್ಲಿ ಸೇರಿಕೊಂಡಿದೆ ಎನ್ನಲಾಗಿದೆ. ಇದರಿಂದ ಯಾರೊಬ್ಬರೂ ಒಂಟಿಯಾಗಿ ಹೊಲ, ತೋಟ, ಗದ್ದೆಗಳಲ್ಲಿ ತಿರುಗಾಡದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಈ ಹಿಂದೆ 2 ಜೀವ ಬಲಿ ಪಡೆದಿದ್ದ ಕಾಡಾನೆಗಳು: 2019 ಜುಲೈ ತಿಂಗಳಲ್ಲಿ ಉಬ್ರಾಣಿ ಮತ್ತು ಹೊಸಹಳ್ಳಿ ಭಾಗದಲ್ಲಿ ಜೋಡಿ ಕಾಡಾನೆಗಳು ದಾಳಿ ನಡೆಸಿದ್ದಾಗ 2 ಜೀವ ಬಲಿ ಪಡೆದಿದ್ದವು. ಈ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೆ ಕಾಡಾನೆಗಳ ಸದ್ದು ಕೇಳಿಬಂದಿದ್ದು, ಜನತೆ ಭಯಭೀತರಾಗಿದ್ದಾರೆ. ಸದ್ಯ ಕಾಡಾನೆಯನ್ನು ಕಾಡಿನತ್ತ ಓಡಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ.
ಹಬ್ಬಿವೆ ವದಂತಿ
ಕೋಗಲೂರು ಗ್ರಾಮದಲ್ಲಿ ಕಾಡಾನೆ ಕಾಣಿಸಿಕೊಳ್ಳುತ್ತಿದ್ದಂತೆ ಬಸವಾಪಟ್ಟಣ, ಸಂತೆಬೆನ್ನೂರು, ಹೊಸಹಳ್ಳಿ, ಜೋಳದಾಳ್ ಸೇರಿದಂತೆ ತಾಲೂಕಿನ ಎಲ್ಲಾ ಕಡೆಗಳಲ್ಲಿಯೂ ಕಾಡಾನೆಗಳು ಕಾಣಿಸಿಕೊಂಡಿದೆ ಎಂಬ ವಂದತಿಗಳು ಹರಿದಾಡುತ್ತಿದ್ದು, ಭಯಭೀತರಾದ ಹಳ್ಳಿಗರು ಮನೆಗಳಿಂದ ಹೊರಗಡೆ ಬರುತ್ತಿಲ್ಲ.
ಎಂದಿನಂತೆ ಪತ್ನಿ ಜೊತೆ ಬೆಳಗ್ಗೆ 5 ಗಂಟೆಗೆ ಆನಂದ್ ನಾಯ್ಕ, ಚನ್ನಗಿರಿ ವಲಯ ಅರಣ್ಯಾಧಿಕಾರಿ ತೋಟದ ರಸ್ತೆಯಲ್ಲಿ ವಾಯವಿಹಾರಕ್ಕೆ ತೆರಳಿದ್ದೆ. ನೋಡ ನೋಡುತ್ತಿದ್ದಂತೆ ತೋಟವೊಂದರಿಂದ ಕಾಡಾನೆ ಎದುರಿಗೆ ಬಂತು. ತಕ್ಷಣ ಓಡಲು ಶುರು ಮಾಡಿದೆವು. ನನ್ನ ಪತ್ನಿ ಕೆಳಗಡೆ ಬಿದ್ದರು. ಕಾಡಾನೆ ಸೊಂಡಿಲಿನಿಂದ ಅವಳನ್ನು ಎಳೆದಾಡಿ ಬೇರೆಡೆ ಓಡಿತು. ಈ
ಘಟನೆಯಿಂದ ಮರಳಿ ಜೀವ ಬಂದಂತಾಗಿದೆ.
ಶೈಲೇಂದ್ರ, ಕೋಗಲೂರು ಗ್ರಾಮಸ್ಥ
ಸಾಸ್ವೇಹಳ್ಳಿ ಕಡೆಯಿಂದ ಮರಿ ಕಾಡಾನೆಯೊಂದು ತಪ್ಪಿಸಿಕೊಂಡು ಬಂದಿದೆ. ಸದ್ಯ ಅದು ಭೀಮನೆರೆ ಸಮೀಪದಲ್ಲಿ ಸೇರಿಕೊಂಡಿದೆ. ಜನರ ಆರ್ಭಟದಿಂದ ಬೆಚ್ಚಿರುವ ಮರಿ ಕಾಡಾನೆ ಹತ್ತಿ ಹೊಲದಿಂದ ಹೊರಗಡೆ ಬರುತ್ತಿಲ್ಲ. ಆ ಕಾಡಾನೆಯನ್ನು ಮತ್ತೆ ಸುರಕ್ಷಿತವಾಗಿ ಕಾಡಿನತ್ತ ಓಡಿಸಲಾಗುವುದು. ಜನತೆ ಹೆದರುವುದು ಬೇಡ. ವಿವಿಧೆಡೆ ಸುಮಾರು ಆನೆಗಳು ಬಂದಿವೆ ಎಂಬ ವದಂತಿಗಳಿಗೆ ಕಿವಿ ಕೊಡಬೇಡಿ. ಕಾಡಾನೆ ಕಂಡ ತಕ್ಷಣ ಇಲಾಖೆಗೆ ಮಾಹಿತಿ ನೀಡಿ.
ಆನಂದ್ ನಾಯ್ಕ,
ಚನ್ನಗಿರಿ ವಲಯ ಅರಣ್ಯಾಧಿಕಾರಿ
ಶಶೀಂದ್ರ ಸಿ.ಎಸ್. ಚನ್ನಗಿರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್